Webdunia - Bharat's app for daily news and videos

Install App

ಮಕ್ಕಳ ಆರೋಗ್ಯದ ಬಗ್ಗೆ ಸಿಹಿ ಸುದ್ದಿ ಕೊಟ್ಟ ಅಧ್ಯಯನ ವರದಿ!

Webdunia
ಗುರುವಾರ, 5 ಆಗಸ್ಟ್ 2021 (11:41 IST)
ಲಂಡನ್(ಆ.05): ಮಕ್ಕಳ ಮೇಲೆ ಕೋವಿಡ್ನ 3ನೇ ಅಲೆ ಭಾರತದಲ್ಲಿ ಹೆಚ್ಚು ಪರಿಣಾಮ ಬೀರಲಿದೆ ಎಂಬ ವಾದಗಳು ಕೇಳಿ ಬರುತ್ತಿರುವ ನಡುವೆ, ಬ್ರಿಟನ್ನಲ್ಲಿ ನಡೆದ ಅಧ್ಯಯನವೊಂದು ಸಮಾಧಾನದ ಸುದ್ದಿ ನೀಡಿದೆ. ಕೋವಿಡ್ ಸೋಂಕು ತಗುಲಿದರೆ ಮಕ್ಕಳು 6 ದಿನದಲ್ಲೇ ಗುಣವಾಗುತ್ತಾರೆ ಹಾಗೂ ಅವರಲ್ಲಿ ಸೋಂಕು ಲಕ್ಷಣಗಳು 4 ವಾರಕ್ಕಿಂತ ಹೆಚ್ಚು ಕಾಲ ಇರುವುದಿಲ್ಲ. 4 ವಾರ ಮೀರುವುದು ತುಂಬಾ ಅಪರೂಪ ಎಂದು ತಿಳಿಸಿದೆ.


ಲಂಡನ್ ಕಿಂಗ್ಸ್ ಕಾಲೇಜು ನಡೆಸಿದ ಈ ಅಧ್ಯಯನವನ್ನು ‘ಲ್ಯಾನ್ಸೆಟ್’ ನಿಯತಕಾಲಿಕದಲ್ಲಿ ಪ್ರಕಟಿಸಲಾಗಿದೆ. ಕೋವಿಡ್ ಪೀಡಿತರಾಗಿದ್ದ 25 ಸಾವಿರ ಶಾಲಾ ಮಕ್ಕಳ (5ರಿಂದ 17 ವರ್ಷ) ಅನುಭವ ಆಧರಿಸಿ ಅವರ ಪೋಷಕರಿಂದ ಮಾಹಿತಿ ಪಡೆದು ಈ ಅಧ್ಯಯನ ನಡೆಸಲಾಗಿದೆ.
ಮಕ್ಕಳಿಗೆ ಕೋವಿಡ್ ಬಹುಕಾಲ ಬಾಧಿಸುವುದು ತುಂಬಾ ಅಪರೂಪ. ಕೆಲವೇ ಕೆಲವು ಮಕ್ಕಳು ದೀರ್ಘಾವಧಿಯಲ್ಲಿ ಕೋವಿಡ್ನಿಂದ ಕಷ್ಟಪಡುತ್ತಾರೆ ನಿಜ ಎಂದು ಮಕ್ಕಳಲ್ಲಿ ಕಂಡುಬಂದ ಸೋಂಕಿನ ಅನುಭವವನ್ನು ಅಧ್ಯಯನದಲ್ಲಿ ವಿವರಿಸಲಾಗಿದೆ.
ಹಿರಿಯರು ಕೋವಿಡ್ನಿಂದ ಗುಣವಾದರೂ ಸಾಕಷ್ಟುದೀರ್ಘಾವಧಿಗೆ ಸೋಂಕಿನ ಲಕ್ಷಣ ಹೊಂದಿ ಕಷ್ಟಪಡುತ್ತಾರೆ. ಆದರೆ ಮಕ್ಕಳಲ್ಲಿ ಹೀಗಾಗದು. ಹಲವು ಮಕ್ಕಳಿಗೆ ಸೋಂಕಿನ ಲಕ್ಷಣಗಳೇ ಕಾಣಿಸಿಲ್ಲ. ಇನ್ನು ಕೆಲವರಿಗೆ ಲಘು ಲಕ್ಷಣಗಳು ಕಾಣಿಸಿಕೊಂಡಿವೆ.
1734 ಮಕ್ಕಳಲ್ಲಿ ಮಾತ್ರ ಸಂಪೂರ್ಣ ಗುಣಮುಖ ಆಗುವವರೆಗೆ ಸೋಂಕು ಲಕ್ಷಣ ಇದ್ದೇ ಇದ್ದವು. ಆದರೆ ಉಳಿದ ಬಹುತೇಕ ಮಕ್ಕಳು 6 ದಿನ ಮಾತ್ರ ಸೋಂಕುಪೀಡಿತರಾಗಿದ್ದರು. ಒಂದರಿಂದ 4 ವಾರ ಮಾತ್ರ ಅವರಲ್ಲಿ ಸೋಂಕು ಲಕ್ಷಣ ಕಾಣಿಸಿತು. ಹೀಗಾಗಿ ಮಕ್ಕಳು ಬೇಗ ಗುಣವಾಗುತ್ತಾರೆ ಎಂದು ಹೇಳಬಹುದು ಎಂದು ಅಧ್ಯಯನ ಹೇಳಿದೆ.
ಮಕ್ಕಳಲ್ಲಿ ‘ಆಯಾಸ’ವು ಹೆಚ್ಚಾಗಿ ಕಂಡುಬಂದ ಸೋಂಕು ಲಕ್ಷಣ ಎಂದು ಅದು ವಿವರಿಸಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

2019 ರಲ್ಲಿ ತೀರಿಕೊಂಡಿದ್ದ ಅರುಣ್ ಜೇಟ್ಲಿ 2020 ರಲ್ಲಿ ಬೆದರಿಕೆ ರಾಹುಲ್ ಗಾಂಧಿಗೆ ಬೆದರಿಕೆ ಹಾಕಿದ್ರಂತೆ

ಪ್ರಜ್ವಲ್ ರೇವಣ್ಣಗೆ ಜೀವನ ಪರ್ಯಂತ ಜೈಲು ಶಿಕ್ಷೆ, ಕಣ್ಣೀರು ಹಾಕಿದ ಅಜ್ಜ ದೇವೇಗೌಡ

ರಾಹುಲ್ ಗಾಂಧಿಯಿಂದ ಮತಗಳ್ಳತನ ಆರೋಪ: ಕಾಂಗ್ರೆಸ್ ಪ್ರತಿಭಟನೆಗೆ ಪ್ರತಿತಂತ್ರ ಹೂಡಿದ ಬಿಜೆಪಿ

ಮೊಸಳೆಕಣ್ಣೀರು ಹಾಕುತ್ತಿರುವ ರಾಹುಲ್ ಗಾಂಧಿ, ರೈತರು ಆತ್ಮಹತ್ಯೆ ಮಾಡಿಕೊಂಡಾಗ ಎಲ್ಲಿ ಇದ್ರೂ: ಪಿ.ಸಿ.ಮೋಹನ್

ಮುಂಬೈ, ಕೋಲ್ಕತ್ತಾ ವಿಮಾನದಲ್ಲಿ ಸಹ ಪ್ರಯಾಣಿಕನಿಗೆ ಕಪಾಳಮೋಕ್ಷ: ಇಂಡಿಗೋ ಮುಂದಿನ ಕ್ರಮಕ್ಕೆ ಮೆಚ್ಚುಗೆ

ಮುಂದಿನ ಸುದ್ದಿ
Show comments