Select Your Language

Notifications

webdunia
webdunia
webdunia
webdunia

ಈರುಳ್ಳಿ ಹಾಕಿದ ಊಟ ನೀಡಿದ್ದಕ್ಕೆ ಈತ ಮಾಡಿದ್ದೇನು ಗೊತ್ತಾ?!

ಈರುಳ್ಳಿ ಹಾಕಿದ ಊಟ ನೀಡಿದ್ದಕ್ಕೆ ಈತ  ಮಾಡಿದ್ದೇನು ಗೊತ್ತಾ?!
ನ್ಯೂಯಾರ್ಕ್ , ಗುರುವಾರ, 15 ಜೂನ್ 2017 (13:41 IST)
ನ್ಯೂಯಾರ್ಕ್: ಊಟ ಮಾಡಲೆಂದು ಬಂದ ಆ ವ್ಯಕ್ತಿ ಮುಂದೆ ತಟ್ಟೆ ಇಡುತ್ತಿದ್ದಂತೇ ದಿಗ್ಗನೆ ಎದ್ದು ಕೂತ. ರೆಸ್ಟೋರೆಂಟ್ ನ ಆ ಮೂಲೆಯಿಂದ ಈ ಮೂಲೆಗೆ ಎಲ್ಲರನ್ನೂ ಸುಟ್ಟು ಬಿಡುತ್ತೇನೆಂದು ಹೂಂಕರಿಸುತ್ತಾ ಬೆತ್ತಲೆ ಓಡಾಡಿದ. ಇದಕ್ಕೆಲ್ಲಾ ಕಾರಣ ಏನು ಗೊತ್ತಾ?!

 
ಸಾಮಾನ್ಯವಾಗಿ ಹಸಿವಾಯಿತೆಂದು ಎಲ್ಲರೂ ರೆಸ್ಟೋರೆಂಟ್ ಗೆ ಬರುತ್ತಾರೆ. ತಮಗೆ ಬೇಕಾದ್ದನ್ನು ಆರ್ಡರ್ ಮಾಡಿ ಬೇಕಾದ ತಿಂಡಿ ತಿಂದು ಎದ್ದು ಹೋಗುತ್ತಾರೆ. ಒಂದು ವೇಳೆ ತಮಗೆ ಇಷ್ಟವಿಲ್ಲದ್ದು ತಂದು ಎದುರಿಟ್ಟರೆ, ಹೆಚ್ಚೆಂದರೆ ಹೋಟೆಲ್ ಮ್ಯಾನೇಜರ್ ಕರೆದು ಗದರಬಹುದು.

ಆದರೆ ಅಮೆರಿಕಾದಲ್ಲಿ ಭಾರತೀಯ ಮೂಲದ ವ್ಯಕ್ತಿಯೊಬ್ಬ ಊಟದಲ್ಲಿ ಈರುಳ್ಳಿ ಹಾಕಿದ ಆಹಾರವಿತ್ತೆಂದರೆಂದು ಮರುದಿನ ರೆಸ್ಟೋರೆಂಟ್ ಗೆ ನುಗ್ಗಿ ಪ್ಯಾಂಟ್ ಬಿಚ್ಚಿ ಬೆತ್ತಲೆ ಪ್ರತಿಭಟನೆ ನಡೆಸಿದ್ದಲ್ಲದೆ, ದಾಂದಲೆ ಎಬ್ಬಿಸಿದ್ದಾನೆ. ಈ ತಪ್ಪಿಗೆ ಆತನೀಗ ಕಂಬಿ ಎಣಿಸುತ್ತಿದ್ದಾನೆ!

ಯುಬಾ ರಾಜ್ ಶರ್ಮಾ ಎಂಬ 43 ವರ್ಷದ ವ್ಯಕ್ತಿ  ಈ ಅವಾಂತರ ಮಾಡಿದವರು. ಹೀಗೆಲ್ಲಾ ಅವಾಂತರ ಸೃಷ್ಟಿಸುವಾಗ ಆತ ಪಾನಮತ್ತನಾಗಿದ್ದ ಎಂದು ರೆಸ್ಟೋರೆಂಟ್ ಮಾಲಿಕ, ಭಾರತೀಯ ಮೂಲದ ರವೀಂದರ್ ಸಿಂಗ್ ಆರೋಪಿಸಿದ್ದಾರೆ.

http://kannada.fantasycricket.webdunia.com
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಮಂಡ್ಯದಲ್ಲಿ ಬಿಎಸ್‌ವೈ ವಿರುದ್ಧ ಆಕ್ರೋಶ