Webdunia - Bharat's app for daily news and videos

Install App

India Pakistan ಕದನ ವಿರಾಮವಾದರೂ ಮತ್ತೆ ಕಾಪಾಡಿ ಎಂದು ಅಮೆರಿಕಾಗೆ ಮೊರೆಯಿಟ್ಟಿದ್ದೇಕೆ ಪಾಕಿಸ್ತಾನ

Krishnaveni K
ಮಂಗಳವಾರ, 13 ಮೇ 2025 (10:31 IST)
ನವದೆಹಲಿ: ಭಾರತ ಮತ್ತು ಪಾಕಿಸ್ತಾನ ನಡುವೆ ಕದನ ವಿರಾಮ ಘೋಷಣೆಯಾಗಿದ್ದರೂ ಈಗ ಶತ್ರುರಾಷ್ಟ್ರ ಅಮೆರಿಕಾಗೆ ಮೊರೆಯಿಡುತ್ತಿದೆ. ಕಾರಣವೇನು ಇಲ್ಲಿದೆ ವಿವರ.

ಭಾರತ ಮತ್ತು ಪಾಕಿಸ್ತಾನ ನಡುವೆ ಈಗ ಕದನವಿರಾಮ ಏರ್ಪಟ್ಟಿದೆ. ಹಾಗಿದ್ದರೂ ನಿನ್ನೆ ರಾತ್ರಿ ಭಾಷಣ ಮಾಡಿದ್ದ ಪ್ರಧಾನಿ ಮೋದಿ ಪಾಕಿಸ್ತಾನ ಯಾವ ರೀತಿ ಹೆಜ್ಜೆಯಿಡುತ್ತದೋ ಅದರ ಮೇಲೆ ನಮ್ಮ ತೀರ್ಮಾನವಿರುತ್ತದೆ ಎಂದು ಖಡಕ್ ಎಚ್ಚರಿಕೆ ನೀಡಿದ್ದರು.

ಕದನ ವಿರಾಮವಾಗಿದ್ದರೂ ಪಾಕಿಸ್ತಾನದ ಜೊತೆಗೆ ಭಾರತ ಮೊದಲಿನಂತೆ ಸಂಬಂಧವಿಟ್ಟುಕೊಂಡಿಲ್ಲ. ವಿಶೇಷವಾಗಿ ಸಿಂಧೂ ನದಿ ನೀರು ಒಪ್ಪಂದ ರದ್ದುಗೊಳಿಸಿರುವ ತೀರ್ಮಾನದಿಂದ ಭಾರತ ಹಿಂದೆ ಸರಿದಿಲ್ಲ. ಹೀಗಾಗಿ ಪಾಕಿಸ್ತಾನಕ್ಕೆ ದೊಡ್ಡ ತಲೆನೋವು ಎದುರಾಗಿದೆ.

ಇದೇ ಕಾರಣಕ್ಕೆ ಮತ್ತೆ ಸಿಂಧೂ ನದಿ ನೀರು ಹಂಚಿಕೆ ವಿಚಾರದಲ್ಲಿ ಮೊದಲಿನ ಸ್ಥಿತಿಯೇ ಕಾಯ್ದುಕೊಳ್ಳಲು ಭಾರತಕ್ಕೆ ತಾಕೀತು ಮಾಡಿ ಎಂದು ಪಾಕಿಸ್ತಾನ ಈಗ ಅಮೆರಿಕಾಗೆ ಮೊರೆಯಿಡುತ್ತಿದೆ. ಆದರೆ ಭಾರತ ಮಾತ್ರ ಸಿಂಧೂ ನದಿ ಒಪ್ಪಂದದಿಂದ ಹಿಂದೆ ಸರಿದಿರುವ ನಿರ್ಧಾರ ಬದಲಿಸುವ ಪ್ರಶ್ನೆಯೇ ಇಲ್ಲ ಎನ್ನುತ್ತಿದೆ. ಮುಂದಿನ ದಿನಗಳಲ್ಲಿ ಪಾಕಿಸ್ತಾನ ನಡೆ ನೋಡಿಕೊಂಡು ಭಾರತ ಮೃದು ಧೋರಣೆ ತಾಳಬಹುದೇನೋ. ಆದರೆ ಸದ್ಯಕ್ಕಂತೂ ಸಿಂಧೂ ನದಿ ನೀರು ಪಾಕಿಸ್ತಾನಕ್ಕೆ ಸಿಗಲ್ಲ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಕದನವಿರಾಮ ತೀರ್ಮಾನ ಟ್ರಂಪ್ ತೆಗೆದುಕೊಳ್ಳುತ್ತಿರುವುದು ನಮಗೆ ಅವಮಾನ: ಬಿಕೆ ಹರಿಪ್ರಸಾದ್

Nelamangala Fire accident: ಹೊತ್ತಿ ಉರಿದ ಎಣ್ಣೆ ಗೋದಾಮು ವಿಡಿಯೋ

Karnataka Weather: ಇಂದಿನಿಂದ ಬಹುತೇಕ ಜಿಲ್ಲೆಗಳಿಗೆ ಮಳೆ

Donald Trump: ಭಾರತ ಪಾಕಿಸ್ತಾನ ಕದನ ವಿರಾಮ: ಡೊನಾಲ್ಡ್ ಟ್ರಂಪ್ ನಿಂದ ಕೇಂದ್ರ ಸರ್ಕಾರಕ್ಕೆ ಇಕ್ಕಟ್ಟು

ಅಣ್ವಸ್ತ್ರ ಬೆದರಿಕೆಗೆ ನಾವು ಜಗ್ಗಲ್ಲ, ಬಗ್ಗಲ್ಲ: ಭಾರತದ ತಾಕತ್ತು ಜಗತ್ತಿಗೆ ಗೊತ್ತಾಯಿತು ಎಂದ ಪ್ರಧಾನಿ ಮೋದಿ

ಮುಂದಿನ ಸುದ್ದಿ
Show comments