Webdunia - Bharat's app for daily news and videos

Install App

ವಿಮಾನದ ಭಾರ ಕಡಿಮೆ ಮಾಡಲು ಭಾರತೀಯ ವಾಯುಪಡೆ ಇಂಧನ ಟ್ಯಾಂಕ್ ಗಳನ್ನು ಸುರಿದಿತ್ತಷ್ಟೇ ಎಂದ ಪಾಕ್ ಸಚಿವ!

Webdunia
ಬುಧವಾರ, 27 ಫೆಬ್ರವರಿ 2019 (09:07 IST)
ಇಸ್ಲಾಮಾಬಾದ್: ಭಾರತೀಯ ವಾಯುಸೇನೆ ನಡೆಸಿದ ಸರ್ಜಿಕಲ್ ಸ್ಟ್ರೈಕ್ ನ್ನು ಪಾಕಿಸ್ತಾನ ಯಾವ ರೀತಿಯೆಲ್ಲಾ ಅಲ್ಲಗೆಳೆಯಲು ಪ್ರಯತ್ನಿಸುತ್ತಿದೆ ಎಂಬುದಕ್ಕೆ ಪಾಕ್ ಸಚಿವನ ಈ ಹೇಳಿಕೆಯೇ ಸಾಕ್ಷಿ.


ಪಾಕಿಸ್ತಾನ ಸರ್ಕಾರದ ಸಚಿವರಾಗಿರುವ ಅಲಿ ಹೈದರ್ ಝೈದಿ ಭಾರತೀಯ ವಾಯು ಸೇನೆ ತನ್ನ ವಿಮಾನದ ಭಾರ ಇಳಿಸಲು ಇಂಧನ ಟ್ಯಾಂಕ್ ಗಳನ್ನು ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಸುರಿದಿತ್ತು. ಇದು ಬಾಂಬ್ ದಾಳಿಯಾಗಿರಲಿಲ್ಲ ಎಂದು ತಮಾಷೆಯಾಗಿ ಟ್ವೀಟ್ ಮಾಡಿ ನಗೆಪಾಟಲಿಗೀಡಾಗಿದ್ದಾರೆ.

‘ಮೊದಲನೆಯದಾಗಿ ಪಾಕಿಸ್ತಾನದಲ್ಲಿ ಉಗ್ರರ ಕ್ಯಾಂಪ್ ಇದೆ ಎಂಬುದು ಮೋದಿ ಸರ್ಕಾರದ ಕಲ್ಪನೆಯಷ್ಟೇ. ಎರಡನೆಯದಾಗಿ, ಭಾರತೀಯ ವಾಯುಪಡೆ ಸುರಿದಿದ್ದು ಬಾಂಬ್ ಅಲ್ಲ, ಇಂಧನ ಟ್ಯಾಂಕ್ ಗಳನ್ನು. ಯಾಕೆಂದರೆ ಅವರಿಗೆ ವಿಮಾನದ ಭಾರವನ್ನು ಕೊಂಚ ಕಡಿಮೆ ಮಾಡಬೇಕಿತ್ತು ಅಷ್ಟೇ. ಇನ್ನೇನು ಪಾಕಿಸ್ತಾನ ವಾಯು ಸೇನೆ ತಿರುಗೇಟು ಕೊಡುತ್ತದೆಂದಾಗ ಅವರು ಓಡಿ ಹೋದರು’ ಎಂದು ಝೈದಿ ತಮಾಷೆಯಾಗಿ ಟ್ವೀಟ್ ಮಾಡಿದ್ದಾರೆ.

ಈ ಟ್ವೀಟ್ ಗೆ ಹಲವು ಭಾರತೀಯರೂ ಕಾಮೆಂಟ್ ಮಾಡಿದ್ದು, ಹಾಗಿದ್ದರೆ ವಾಯು ಸೇನೆ ಸುರಿದ ಇಂಧನ ಟ್ಯಾಂಕ್ ಗಳನ್ನು ಹೊರಜಗತ್ತಿಗೆ ಪ್ರದರ್ಶನ ಮಾಡಿ ಎಂದು ಕಾಲೆಳೆದಿದ್ದಾರೆ. ಅಂತೂ ಪಾಕ್ ಸಚಿವನ ಖಾತೆಯಿಂದ ಬಂದ ಈ ಟ್ವೀಟ್ ತಮಾಷೆಯಾಗಿತ್ತಾದರೂ, ಪಾಕ್ ನರಿಬುದ್ಧಿಗೆ ಏನನ್ನಬೇಕು ನೀವೇ ಹೇಳಿ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಗಾಯಕ ಜುಬೀನ್ ಗಾರ್ಗ್‌ 13ನೇ ದಿನದ ಕಾರ್ಯದಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಭಾಗಿ

RSSನ ಸಮಾನಾರ್ಥ ಪದವೇ ದೇಶಭಕ್ತಿ: ಪ್ರಧಾನಿ ನರೇಂದ್ರ ಮೋದಿ

ನವೆಂಬರ್ ಕ್ರಾಂತಿ ಬಗ್ಗೆ ಸ್ಫೋಟಕ ಹೇಳಿಕೆ ಕೊಟ್ಟ ಸಿಎಂ ಸಿದ್ದರಾಮಯ್ಯ

ಜೈಲಿನಲ್ಲಿ ಮಾಜಿ ಸಚಿವ ಗಾಯತ್ರಿ ಪ್ರಜಾಪತಿ ಮೇಲೆ ಸಹಕೈದಿ ಹಲ್ಲೆ, ಕಾರಣ ಏನ್ ಗೊತ್ತಾ

ರಾಹುಲ್‌ಗೆ ಗುಂಡು ಹೊಡೆಯುತ್ತೇವೆಂದ ಬಿಜೆಪಿ ವಕ್ತಾರನ ಬೆದರಿಕೆಗೆ ಪ್ರಧಾನಿ ಮೌನದ ಅರ್ಥವೇನು: ಸಿದ್ದರಾಮಯ್ಯ

ಮುಂದಿನ ಸುದ್ದಿ
Show comments