Select Your Language

Notifications

webdunia
webdunia
webdunia
webdunia

ಕುಲಭೂಷಣ್ ಜಾದವ್ ಬಗ್ಗೆ ಪಾಕಿಸ್ತಾನ ಕೊಟ್ಟ ಸ್ಪಷ್ಟನೆ

ಕುಲಭೂಷಣ್ ಜಾದವ್ ಬಗ್ಗೆ ಪಾಕಿಸ್ತಾನ ಕೊಟ್ಟ ಸ್ಪಷ್ಟನೆ
Islamabad , ಬುಧವಾರ, 24 ಮೇ 2017 (09:15 IST)
ಇಸ್ಲಾಮಾಬಾದ್: ಗಲ್ಲು ಶಿಕ್ಷೆಗೆ ಗುರಿಯಾಗಿದ್ದ ಭಾರತೀಯ ನೌಕಾಪಡೆ ಅಧಿಕಾರಿ ಕುಲಭೂಷಣ್ ಜಾದವ್ ಪ್ರಾಣಕ್ಕೆ ಯಾವುದೇ ತೊಂದರೆಯಾಗಿಲ್ಲ ಎಂದು ಪಾಕಿಸ್ತಾನ ಸ್ಪಷ್ಟಪಡಿಸಿದೆ.


ಅವರಿನ್ನೂ ಜೀವಂತವಾಗಿದ್ದಾರೆ. ಅವರ ಪ್ರಾಣಕ್ಕೆ ತೊಂದರೆಯಾಗಿಲ್ಲ ಎಂದು ಭರವಸೆ ಕೊಡಬಲ್ಲೆ ಎಂದು ಪಾಕಿಸ್ತಾನ ರಾಯಭಾರಿ ಅಬ್ದುಲ್ ಬಾಸಿತ್ ಹೇಳಿದ್ದಾರೆ. ಈ ನಡುವೆ ಜಾದವ್ ತಾಯಿ ಭಾರತೀಯ ಹೈ ಕಮಿಷನರ್ ಮೂಲಕ ಗಲ್ಲು ಶಿಕ್ಷೆಗೆ ತಡೆಯಾಜ್ಞೆ ಕೋರಿ ಸಲ್ಲಿಸಿದ ಮನವಿಯನ್ನು ಹಸ್ತಾಂತರಿಸಲಾಗಿದೆ ಎಂದು ಬಾಸಿತ್ ಹೇಳಿದ್ದಾರೆ.

ಮೊನ್ನೆಯಷ್ಟೇ ಭಾರತದ ವಿದೇಶಾಂಗ ಇಲಾಖೆ ಐಸಿಜೆ ತೀರ್ಪಿನ ನಂತರ ಜಾದವ್ ಎಲ್ಲಿದ್ದಾರೆಂಬ ಮಾಹಿತಿಯಿಲ್ಲ ಎಂದಿತ್ತು. ಇದರ ಬೆನ್ನಲ್ಲೇ ಬಾಸಿತ್ ಈ ಹೇಳಿಕೆ ನೀಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಎಚ್. ವಿಶ್ವನಾಥ್ ಜೆಡಿಎಸ್ ಸೇರ್ಪಡೆ ದಿನಾಂಕ ಫಿಕ್ಸ್?