Select Your Language

Notifications

webdunia
webdunia
webdunia
webdunia

ಬೀಸುವ ದೊಣ್ಣೆಯಿಂದ ತಪ್ಪಿಸಿಕೊಂಡ ಕುಲಭೂಷಣ್ ಜಾದವ್

ಬೀಸುವ ದೊಣ್ಣೆಯಿಂದ ತಪ್ಪಿಸಿಕೊಂಡ ಕುಲಭೂಷಣ್ ಜಾದವ್
Islamabad , ಬುಧವಾರ, 10 ಮೇ 2017 (07:47 IST)
ಇಸ್ಲಾಮಾಬಾದ್: ಬೇಹುಗಾರಿಕಾ ಆರೋಪದಲ್ಲಿ ಪಾಕಿಸ್ತಾನದಲ್ಲಿ ಬಂಧಿತರಾಗಿ ಗಲ್ಲು ಶಿಕ್ಷೆಗೆ ಗುರಿಯಾಗಿದ್ದ ಭಾರತದ ನೌಕಾಪಡೆ ಅಧಿಕಾರಿ ಕುಲಭೂಷಣ್ ಜಾದವ್ ಗೆ ಸ್ವಲ್ಪ ಮಟ್ಟಿಗೆ ನಿರಾಳವಾಗಿದೆ.

 
ಕುಲಭೂಷಣ್ ಗಲ್ಲು ಶಿಕ್ಷೆಯನ್ನು ಅಂತಾರಾಷ್ಟ್ರೀಯ ಕೋರ್ಟ್ ನ್ಯಾಯಾಧೀಶರು ತಡೆ ಹಿಡಿದಿದ್ದಾರೆ. ಭಾರತ ಕುಲಭೂಷಣ್ ಪ್ರಕರಣವನ್ನು ಅಂತಾರಾಷ್ಟ್ರೀಯ ನ್ಯಾಯಾಲಯಕ್ಕೆ ದೂರಿತ್ತು.

ಕಳೆದ ತಿಂಗಳು ಜಾದವ್ ಗೆ ಪಾಕಿಸ್ತಾನ ಗಲ್ಲು ಶಿಕ್ಷೆ ವಿಧಿಸಿತ್ತು. ಈ ಬಗ್ಗೆ ಅಂತಾರಾಷ್ಟ್ರೀಯ ನ್ಯಾಯಾಲಯಕ್ಕೆ ದೂರಿತ್ತಿದ್ದ ಭಾರತ, ಪಾಕ್ ವಿಯೆನ್ನಾ ಒಪ್ಪಂದ ಮುರಿದಿದೆ ಎಂದು ದೂರಿತ್ತು. ಅಲ್ಲದೆ, ಜಾದವ್ ರನ್ನು ಇರಾನ್ ನಲ್ಲಿ ತಮ್ಮ ಸ್ವಂತ ಕೆಲಸಕ್ಕಾಗಿ ಹೋಗಿದ್ದಾಗ ಬಂಧಿಸಲಾಗಿದೆ  ಎಂದು ಭಾರತ ಆರೋಪಿಸಿದೆ.

ಆದರೆ ಪಾಕ್ ಇದನ್ನು ಅಲ್ಲಗಳೆಯುತ್ತಿದ್ದು,  ಬಲೂಚಿಸ್ತಾನದಲ್ಲಿ ಪಾಕ್ ವಿರೋಧಿ ಚಟುವಟಿಕೆಯಲ್ಲಿ ತೊಡಗಿದ್ದಾಗ ಬಂಧಿಸಲಾಗಿದೆ ಎಂದು ವಾದಿಸುತ್ತಿದೆ. ಇದೀಗ ಭಾರತದ ಮನವಿ ಪುರಸ್ಕರಿಸಿದ ಅಂತಾರಾಷ್ಟ್ರೀಯ  ನ್ಯಾಯಾಲಯ ಗಲ್ಲು ಶಿಕ್ಷೆಗೆ ತಡೆಯಾಜ್ಞೆ ನೀಡಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   

Share this Story:

Follow Webdunia kannada

ಮುಂದಿನ ಸುದ್ದಿ

ಇದೀಗ ಪಕ್ಕಾ! ನಾಳೆ ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ