Select Your Language

Notifications

webdunia
webdunia
webdunia
webdunia

ಪಾಕಿಸ್ತಾನಿ ಅಧಿಕಾರಿಗಳ ಜೀವ ರಕ್ಷಿಸಿದ ಭಾರತೀಯ ಮೀನುಗಾರರು

ಪಾಕಿಸ್ತಾನಿ ಅಧಿಕಾರಿಗಳ ಜೀವ ರಕ್ಷಿಸಿದ ಭಾರತೀಯ ಮೀನುಗಾರರು
NewDelhi , ಬುಧವಾರ, 12 ಏಪ್ರಿಲ್ 2017 (11:57 IST)
ನವದೆಹಲಿ:  ಅತ್ತ ಭಾರತೀಯ ನೌಕಾಪಡೆಯ ಅಧಿಕಾರಿ ಕುಲಭೂಷಣ್ ಯಾದವ್ ರನ್ನು ಗಲ್ಲಿಗೇರಿಸಲು ಪಾಕಿಸ್ತಾನ ತಯಾರಿ ನಡೆಸುತ್ತಿದ್ದರೆ, ಅತ್ತ ಭಾರತೀಯ ಮೀನುಗಾರರು, ಅದೇ ಪಾಕ್ ಅಧಿಕಾರಿಗಳ ಪ್ರಾಣ ಕಾಪಾಡಿದ್ದಾರೆ.

 

ಗುಜರಾತ್ ನ ಕರಾವಳಿ ತೀರದಲ್ಲಿ ಈ ಘಟನೆ ನಡೆದಿದೆ. ಪಾಕಿಸ್ತಾನದ ಕರಾವಳಿ ಭದ್ರತಾ ಪಡೆಯ ಐವರು ಅಧಿಕಾರಿಗಳ ಬೋಟ್ ಅಪಘಾತಕ್ಕೀಡಾಗಿತ್ತು. ಈ ಅಧಿಕಾರಿಗಳು, ಭಾರತೀಯ ಜಲಪ್ರದೇಶಕ್ಕೆ ಬಂದಿದ್ದರು.

 
ಇವರಲ್ಲಿ ಮೂವರು ಅಧಿಕಾರಿಗಳು ಸಾವನ್ನಪ್ಪಿದ್ದರೆ, ಇನ್ನಿಬ್ಬರನ್ನು ಭಾರತೀಯ ಮೀನುಗಾರು ರಕ್ಷಿಸಿದ್ದಾರೆ. ಭಾರತೀಯ ಮೀನುಗಾರರ ಈ ನಡೆಯನ್ನು ಮೆಚ್ಚಿ ಪಾಕ್ ಕರಾವಳಿ ಭದ್ರತಾ ಪಡೆ ತಮ್ಮ ವಶದಲ್ಲಿದ್ದ ಭಾರತದ 60 ಮೀನುಗಾರರು ಮತ್ತು ಅವರ ಏಳು ಬೋಟ್ ಗಳನ್ನು ಮರಳಿಸಿವೆ ಎಂದು ಮೀನುಗಾರರ ಹಿತರಕ್ಷಣಾ ವೇದಿಕೆ ಹೇಳಿದೆ.

 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   

Share this Story:

Follow Webdunia kannada

ಮುಂದಿನ ಸುದ್ದಿ

ಹಳೆಯ ನೋಟುಗಳ ಬದಲಾವನೆಗೆ ಸಿಗುತ್ತಾ ಮತ್ತೊಂದು ಅವಕಾಶ..?