Webdunia - Bharat's app for daily news and videos

Install App

ಚೀನಾ ಗಡಿಯಲ್ಲಿ ಭಾರತದ ರಫೇಲ್!

Webdunia
ಶುಕ್ರವಾರ, 30 ಜುಲೈ 2021 (08:40 IST)
ನವದೆಹಲಿ(ಜು.30): ಚೀನಾದ ಗಡಿ ಹಂಚಿಕೊಳ್ಳುವ ಸಿಕ್ಕಿಂ-ಭೂತಾನ್ ಮತ್ತು ಟಿಬೆಟ್ನ ತೀರಾ ಹತ್ತಿರಕ್ಕೆ ಹೊಚ್ಚ ಅತ್ಯಾಧುನಿಕ ತಂತ್ರಜ್ಞಾನಗಳನ್ನು ಒಳಗೊಂಡ ರಫೇಲ್ ಯುದ್ಧ ವಿಮಾನಗಳನ್ನು ಭಾರತ ಸರ್ಕಾರ ನಿಯೋಜನೆ ಮಾಡಿದೆ.

ಪೂರ್ವ ಲಡಾಖ್ ಗಡಿ ಬಿಕ್ಕಟ್ಟು ಶಮನಕ್ಕಾಗಿ ಶನಿವಾರ ಉಭಯ ದೇಶಗಳ ಮಧ್ಯೆ ಸೇನಾ ಹಂತದ ಶಾಂತಿ ಮಾತುಕತೆ ನಡೆಯುವ ಸಾಧ್ಯತೆಯಿದೆ. ಇದಕ್ಕೂ ಮುನ್ನವೇ ಚೀನಾದ ಗಡಿಯ ಹತ್ತಿರಕ್ಕೆ ರಫೇಲ್ ಯುದ್ಧ ವಿಮಾನಗಳನ್ನು ನಿಯೋಜಿಸುವ ಮುಖಾಂತರ ಚೀನಾಕ್ಕೆ ಭಾರತ ಕಠಿಣ ಸಂದೇಶ ರವಾನಿಸಿದೆ.
ಭಾರತದ ವಾಯುಪಡೆಗೆ ಹೋಲಿಸಿದರೆ ಚೀನಾ ಭಾರತಕ್ಕಿಂತ ಎಲ್ಲದರಲ್ಲೂ ಪ್ರಬಲವಾಗಿದೆ. ಅಲ್ಲದೆ ಕಳೆದ ವರ್ಷದ ಏಪ್ರಿಲ್-ಮೇ ತಿಂಗಳಲ್ಲಿ ಉದ್ಭವಿಸಿದ ಲಡಾಖ್ ಬಿಕ್ಕಟ್ಟು ಬಳಿಕ ಹೋಟನ್, ಕಾಶ್ಗರ್, ಗರ್ಗುನ್ಸಾ, ಲಾಸ-ಗಾಂಗ್ಗರ್ ಮತ್ತು ಶಿಗೆಟ್ಸೆ ರೀತಿಯ ವಾಯುನೆಲೆಗಳನ್ನು ಚೀನಾ ಉನ್ನತೀಕರಿಸಿಕೊಂಡಿದೆ. ಆದರೆ ಈ ವ್ಯಾಪ್ತಿಯಲ್ಲಿರುವ ವಿಭಿನ್ನ ಭೂಪ್ರದೇಶವು ವಾಯುದಾಳಿ ಮತ್ತು ಭೂಸೈನ್ಯದ ದಾಳಿಗೆ ಭಾರತಕ್ಕೆ ಹೆಚ್ಚು ಅನುಕೂಲಕರವಾಗಿದೆ.
ಆಮ್ಲಜನಕದ ತೀವ್ರ ಕೊರತೆ ಮತ್ತು ಇಕ್ಕಟ್ಟಿನ ಗುಡ್ಡಗಾಡು ಮತ್ತು ಅತಿ ಎತ್ತರದ ಈ ಪ್ರದೇಶಗಳಲ್ಲಿ ಚೀನಾದ ಸೈನ್ಯಕ್ಕೆ ಹೆಚ್ಚಿನ ಯುದ್ಧೋಪಕರಣ ಮತ್ತು ಶಸ್ತ್ರಾಸ್ತ್ರಗಳ ಸಾಗಣೆಗೆ ಪೂರಕವಾಗಿಲ್ಲ. ಆದರೆ ಭಾರತವು ಮಿರಾಜ್-2000, ಮಿಗ್-29 ಮತ್ತು ಸುಖೋಯ್-30 ಯುದ್ಧ ವಿಮಾನಗಳನ್ನು ನಿಯೋಜಿಸಿದೆ. ಅಲ್ಲದೆ ಇದೀಗ ರಫೇಲ್ ಯುದ್ಧ ವಿಮಾನಗಳನ್ನು ನಿಯೋಜನೆ ಮಾಡಿದೆ.
2016ರಲ್ಲಿ ಭಾರತ ಫ್ರಾನ್ಸ್ನಿಂದ 59 ಸಾವಿರ ಕೋಟಿ ರು. ವೆಚ್ಚದಲ್ಲಿ 36 ರಫೇಲ್ ಯುದ್ಧ ವಿಮಾನಗಳನ್ನು ಖರೀದಿಸಿದೆ. ಈ ಪೈಕಿ 26 ಯುದ್ಧ ವಿಮಾನಗಳು ಭಾರತದ ವಾಯುಪಡೆ ಬತ್ತಳಿಕೆಯಲ್ಲಿವೆ. ಉಳಿದ 10 ಯುದ್ಧ ವಿಮಾನಗಳು ಮುಂದಿನ ವರ್ಷದ ಏಪ್ರಿಲ್ ವೇಳೆಗೆ ಭಾರತಕ್ಕೆ ಆಗಮಿಸಲಿವೆ.
ಸೈನ್ಯದ ವಿಚಾರದಲ್ಲಿ ಭಾರತಕ್ಕಿಂತ ಚೀನಾವೇ ಬಲಿಷ್ಠ
ಹಲವು ವಾಯುನೆಲೆಗಳನ್ನು ಉನ್ನತೀಕರಿಸಿರುವ ಚೀನಾ ಸೈನ್ಯ
ಆದರೆ ಈ ಭಾಗದ ಭೂಪ್ರದೇಶ ಭಾರತದ ದಾಳಿಗೆ ಪೂರಕ

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಬೆಂಗಳೂರು ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಆಂಧ್ರ ಮಾಜಿ ಸಚಿವ ಅರೆಸ್ಟ್: ಕಾರಣವೇನು ಗೊತ್ತಾ

ವಿಮಾನ ದುರಂತ: ಸಹೋದರನ ಶವಕ್ಕೆ ಹೆಗಲುಕೊಟ್ಟು ಬಿಕ್ಕಿಬಿಕ್ಕಿ ಅತ್ತ ವಿಶ್ವಾಸ್ ರಮೇಶ್ ವಿಡಿಯೊ ಇಲ್ಲಿದೆ

ರಾಷ್ಟ್ರೀಯ ಹೆದ್ದಾರಿಯಲ್ಲಿ ದಿನನಿತ್ಯ ಸಂಚರಿಸುವವರಿಗೆ ಗುಡ್‌ನ್ಯೂಸ್‌ ಕೊಟ್ಟ ಕೇಂದ್ರ ಸರ್ಕಾರ

ಐಶ್ವರ್ಯ ಗೌಡ ವಂಚನೆ ಪ್ರಕರಣಕ್ಕೆ ಹೊಸ ತಿರುವು: ತನಿಖೆಯನ್ನು ಸಿಐಡಿಗೆ ವಹಿಸಿದ ರಾಜ್ಯ ಸರ್ಕಾರ

Viral video: ಹೆದ್ದಾರಿಯಲ್ಲಿ ಬೈಕ್ ರೈಡ್ ವೇಳೆ ಜೋಡಿ ಜೀವಗಳ ರೊಮ್ಯಾನ್ಸ್: ಕೊನೆಗೆ ಆಗಿದ್ದೇನು

ಮುಂದಿನ ಸುದ್ದಿ
Show comments