Webdunia - Bharat's app for daily news and videos

Install App

ದೇಶೀಯ ವಿಮಾನಗಳ ಸಂಚಾರ ಹೆಚ್ಚಳ

Webdunia
ಸೋಮವಾರ, 18 ಅಕ್ಟೋಬರ್ 2021 (14:10 IST)
ನವದೆಹಲಿ : ಕೋವಿಡ್ ಪಿಡುಗಿನಿಂದಾಗಿ ಕಡಿಮೆಯಾಗಿದ್ದ ದೇಶೀಯ ವಿಮಾನ ಪ್ರಯಾಣ ಈಗ ಸುಧಾರಿಸುತ್ತಿದ್ದು, ಭಾನುವಾರ 2,372 ವಿಮಾನಗಳಲ್ಲಿ ಒಟ್ಟು 3,27,923 ಮಂದಿ ಪ್ರಯಾಣಿಸಿದ್ದಾರೆ ಎಂದು ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಹೇಳಿದ್ದಾರೆ.

'ಕೋವಿಡ್ ಆರಂಭದ ನಂತರ ಕಡಿಮೆಯಾಗಿದ್ದ ದೇಶೀಯ ವಿಮಾನ ಸಂಚಾರವು ಕೇಂದ್ರ ಸರ್ಕಾರದ ರಚನಾತ್ಮಕ ನೀತಿಗಳಿಂದಾಗಿ ಈಗ ಅತ್ಯುನ್ನತ ಮಟ್ಟ ತಲುಪುತ್ತಿದೆ' ಎಂದು ಸಚಿವ ಸಿಂಧಿಯಾ ಸೋಮವಾರ ಟ್ವೀಟ್ ಮಾಡಿದ್ದಾರೆ. 'ಅನೇಕ ಸವಾಲುಗಳ ನಡುವೆ ಭಾರತದಲ್ಲಿ ನಾಗರಿಕ ವಿಮಾನಯಾನ ಕ್ಷೇತ್ರವು ಅಭಿವೃದ್ಧಿ ಹೊಂದುತ್ತಿದೆ. ಆದಷ್ಟು ಬೇಗ ಸಹಜ ಸ್ಥಿತಿಗೆ ಮರಳಲು ನಾವು ಎಲ್ಲಾ ಪ್ರಯತ್ನಗಳನ್ನು ಮಾಡುತ್ತೇವೆ' ಎಂದು ಹೇಳಿದ್ದಾರೆ.
ಸಾಂಕ್ರಾಮಿಕಕ್ಕೂ ಮೊದಲು ಭಾರತದ ದೈನಂದಿನ ದೇಶೀಯ ವಿಮಾನ ಸಂಚಾರವು ಸುಮಾರು 4.25 ಲಕ್ಷ ಪ್ರಯಾಣಿಕರನ್ನು ಹೊಂದಿತ್ತು. ಕೋವಿಡ್ ಸೋಂಕಿನ ತಡೆಗೆ ವಿಧಿಸಿದ ಲಾಕ್ಡೌನ್ ಭಾಗವಾಗಿ ಕೇಂದ್ರ ಸರ್ಕಾರ 2020ರ ಮಾರ್ಚ್ 25ರಿಂದ ಮೇ 25ರವರೆಗೆ ಎಲ್ಲಾ ನಿಗದಿತ ದೇಶೀಯ ವಿಮಾನಗಳ ಸಂಚಾರವನ್ನು ಸ್ಥಗಿತಗೊಳಿಸಿತ್ತು.
2020ರ ಮೇ 25ರ ನಂತರ ದೇಶೀಯ ವಿಮಾನಗಳು ಪುನರಾರಂಭವಾದಾಗ ಶೇ 33ರಷ್ಟು ಮಾತ್ರ ಕಾರ್ಯನಿರ್ವಹಿಸಲು ಕೇಂದ್ರ ಅನುಮತಿ ನೀಡಿತು. ಕ್ರಮೇಣ ಈ ಸಾಮರ್ಥ್ಯವನ್ನು ಹೆಚ್ಚಿಸಲಾಯಿತು. ಅಕ್ಟೋಬರ್ 18ರಿಂದ ಪೂರ್ಣ ಬಳಕೆಗೆ ಅನುಮತಿ ನೀಡಲಾಯಿತು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Sonia Gandhi: ಮತ್ತೇ ಆಸ್ಪತ್ರೆಗೆ ಭೇಟಿ, ಕಾಂಗ್ರೆಸ್‌ನ ಹಿರಿಯ ನಾಯಕಿಯ ಆರೋಗ್ಯ ಈಗ ಹೀಗಿದೆ

ಹಸಿವು, ನಿರುದ್ಯೋಗದಿಂದ ಬಳಲುತ್ತಿದ್ದರು ಪಾಕ್‌ ಭಯೋತ್ಪಾದನೆ ಬಿಡುತ್ತಿಲ್ಲ: ಸಚಿವ ನಿತಿನ್ ಗಡ್ಕರಿ ಆಕ್ರೋಶ

ಅಧಿಕಾರದಲ್ಲಿ ಮುಂದುವರೆಯಲು ಸಿಎಂ, ಡಿಸಿಎಂಗೆ ಯಾವುದೇ ನೈತಿಕತೆಯಿಲ್ಲ: ಪ್ರಹ್ಲಾದ್ ಜೋಶಿ ಆಕ್ರೋಶ

Bengaluru Stampede: ಈ ದುರಂತದಿಂದ ರಾಜ್ಯ ಸರ್ಕಾರ ಪಾಠ ಕಲಿತಿದೆ, ಡಿಸಿಎಂ ಡಿಕೆ ಶಿವಕುಮಾರ್‌

Bengaluru Stampede: ಅಮಾನತುಗೊಂಡ ಐಪಿಎಸ್ ಅಧಿಕಾರಿಯಿಂದ ಹೊಸ ಹೆಜ್ಜೆ

ಮುಂದಿನ ಸುದ್ದಿ
Show comments