Select Your Language

Notifications

webdunia
webdunia
webdunia
webdunia

ಬಾಂಗ್ಲಾದಲ್ಲಿ ಮತ್ತೊಬ್ಬ ಹಿಂದೂ ಅರ್ಚಕನ ಹತ್ಯೆ ಯತ್ನ

Hindu priest
ಢಾಕಾ , ಶನಿವಾರ, 2 ಜುಲೈ 2016 (12:35 IST)
ಬಾಂಗ್ಲಾದಲ್ಲಿ ಮೂಲಭೂತವಾದಿಗಳ ಅಟ್ಟಹಾಸ ಮುಂದುವರೆದಿದ್ದು ಮತ್ತೊಬ್ಬ ಹಿಂದೂ ಅರ್ಚಕನ ಹತ್ಯೆ ಯತ್ನ ನಡೆದಿದೆ. ಶನಿವಾರ ಮುಂಜಾನೆ ನೈಋತ್ಯ ಬಾಂಗ್ಲಾದಲ್ಲಿ ಹಿಂದು ಅರ್ಚಕನ ಮೇಲೆ ಉಗ್ರರ ಗುಂಪೊಂದು ದಾಳಿ ನಡೆಸಿದ್ದು ಅರ್ಚಕನ ಸ್ಥಿತಿ ಚಿಂತಾಜನಕವಾಗಿದೆ. ಇದು ಐಸಿಸ್ ಉಗ್ರರ ಕೃತ್ಯ ಎಂದು ಹೇಳಲಾಗುತ್ತಿದೆ.
 
ಶುಕ್ರವಾರ ಮುಂಜಾನೆ ಸಹ ದೇವಾಲಯವೊಂದರ ಸಹಾಯಕ ಅರ್ಚಕರೊಬ್ಬರನ್ನು ಕೊಲೆಗೈಯ್ಯಲಾಗಿತ್ತು. ಅದರ ಬೆನ್ನಲ್ಲೇ ಮತ್ತೊಂದು ಘಟನೆ ನಡೆದಿದೆ. 
 
ಸಾವು ಬದುಕಿನ ನಡುವೆ ಹೋರಾಡುತ್ತಿರುವ ಪೀಡಿತನನ್ನು ಸಖ್ತಿರಾ ಜಿಲ್ಲೆಯಲ್ಲಿರುವ ಶ್ರೀ ಶ್ರೀ  ರಾಧಾ ಗೋವಿಂದ ದೇವಾಲಯದ ಅರ್ಚಕ 48ರ ಹರೆಯದ ಭಾಬಾಸಿಂಧುರಾಯ್ ಎಂದು ಗುರುತಿಸಲಾಗಿದೆ.
 
ದೇವಾಲಯದ ಆವರಣದಲ್ಲಿರುವ ಮನೆಯಲ್ಲಿ ಮಲಗಿದ್ದ ಸಮಯದಲ್ಲಿ ಈ ದಾಳಿ ನಡೆದಿದೆ.  
 
ರಾತ್ರಿ ಸಮಯದಲ್ಲಿ 8 ಜನರಿದ್ದ ಗುಂಪೊಂದು ಅರ್ಚಕರ ಮನೆ ಬಾಗಿಲನ್ನು ಬಡಿದಿದ್ದಾರೆ. ರಾತ್ರಿ ಕಾವಲುಗಾರರಿರಬೇಕೆಂದು ಕದ ತೆಗೆದ ಅರ್ಚಕರ ಮೇಲವರು ಮಾರಕಾಸ್ತ್ರಗಳಿಂದ ದಾಳಿ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. 
 
ರಾಜಧಾನಿ ಢಾಕಾದ ರೆಸ್ಟೋರೆಂಟ್ ಒಂದರಲ್ಲಿ ವಿದೇಶಿಯರು ಸೇರಿದಂತೆ 20 ಜನರನ್ನು ಒತ್ತೆಯಾಳುಗಳಿಟ್ಟುಕೊಂಡ ಘಟನೆ ಬಳಿಕ ಕೆಲ ಹೊತ್ತಿನಲ್ಲೇ ಈ ಹತ್ಯೆ ಯತ್ನ ನಡೆದಿದೆ. 
 
ಅರ್ಚಕರ ಎದೆ ಮತ್ತು ಹಿಂಬದಿಯ ಭಾಗಕ್ಕೆ ಏಟು ಬಿದ್ದಿದ್ದು ಅವರನ್ನು ಢಾಕಾದ ಆಸ್ಪತ್ರೆಗೆ ದಾಖಲಾಗಿಸಿದೆ. 
 
ಶುಕ್ರವಾರ ಶ್ಯಾಮಾನಂದ ದಾಸ್ ಎಂಬ ಅರ್ಚಕರು ಹತ್ಯೆಗೀಡಾಗಿದ್ದರು. ಕೆಲ ದಿನಗಳ ಹಿಂದೆ ಬೌದ್ಧ ಭಿಕ್ಕುವೊಬ್ಬರನ್ನು ಹತ್ಯೆಗೈಯ್ಯಲಾಗಿತ್ತು. 

Share this Story:

Follow Webdunia kannada

ಮುಂದಿನ ಸುದ್ದಿ

ಮೇಘಸ್ಪೋಟಕ್ಕೆ ತತ್ತರಿಸಿದ ಉತ್ತರಾಖಂಡ: 33ಸಾವು