Webdunia - Bharat's app for daily news and videos

Install App

ಸತ್ತ ಆರ್ಥಿಕತೆ ಎಂದು ರಷ್ಯಾ, ಭಾರತಕ್ಕೆ ನಿಂದಿಸಿ ಈಗ ರಷ್ಯಾಕ್ಕೇ ಹೊರಟ ಡೊನಾಲ್ಡ್ ಟ್ರಂಪ್

Krishnaveni K
ಗುರುವಾರ, 7 ಆಗಸ್ಟ್ 2025 (10:23 IST)
ನ್ಯೂಯಾರ್ಕ್: ಮೊನ್ನೆಯಿಂದ ರಷ್ಯಾ ಮೇಲೆ ಕೆಂಡ ಕಾರಿದ್ದು ಅಲ್ಲದೆ, ರಷ್ಯಾ ಜೊತೆಗೆ ವ್ಯಾಪಾರ ನಡೆಸುವ ಭಾರತವೂ ಮಹಾಪರಾಧ ಮಾಡುತ್ತಿದೆ ಎನ್ನುವಂತೆ ಆಡುತ್ತಿದ್ದ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈಗ ತಾವೇ ರಷ್ಯಾ ಪ್ರವಾಸ ಮಾಡುತ್ತಿದ್ದಾರೆ.

ತನಗೊಂದು ರೂಲ್ಸ್ ಬೇರೆಯವರಿಗೊಂದು ರೂಲ್ಸ್ ಎಂಬಂತಿದೆ ಅಮೆರಿಕಾ ಅಧ್ಯಕ್ಷರ ನಡವಳಿಕೆ. ರಷ್ಯಾ ಜೊತೆಗೆ ಭಾರತ ತೈಲ ವ್ಯಾಪಾರ ನಡೆಸಬಾರದು. ಇದರಿಂದ ಉಕ್ರೇನ್ ವಿರುದ್ಧ ಯುದ್ಧಕ್ಕೆ ರಷ್ಯಾಗೆ ಹಣ ಸಹಾಯ ಮಾಡಿದಂತೆ ಎಂದು ಬೊಬ್ಬಿರಿಯುತ್ತಿರುವ ಅಮೆರಿಕಾ ತಾನು ಮಾತ್ರ ಆ ದೇಶದ ಜೊತೆಗಿನ ವ್ಯಾಪಾರ ಮುಂದುವರಿಸಿದೆ. ತನ್ನ ಮಾತು ಕೇಳದ ಭಾರತ ಮತ್ತು ರಷ್ಯಾದ್ದು ಸತ್ತ ಅರ್ಥಿಕತೆ ಎಂದು ನಿಂದಿಸಿದ್ದರು.

ಇಷ್ಟೆಲ್ಲಾ ಆದ ಮೇಲೆ ಈಗ ಟ್ರಂಪ್ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಭೇಟಿಗೆ ಮುಂದಾಗಿದ್ದಾರೆ. ಮಾಸ್ಕೋದಲ್ಲಿ ಟ್ರಂಪ್ ವಿಶೇಷ ರಾಯಭಾರಿ ಮತ್ತು ಪುಟಿನ್ ನಡುವೆ ಮಾತುಕತೆ ನಡೆದಿದೆ. ಇತ್ತ ಟ್ರಂಪ್ ಉಕ್ರೇನ್ ಅಧ್ಯಕ್ಷ ಝೆಲೆನ್ಸ್ ಕಿ ಜೊತೆಗೆ ಮಾತನಾಡಿದ್ದಾರೆ. ಹೀಗಾಗಿ ಈಗ ಉಕ್ರೇನ್ ಮತ್ತು ರಷ್ಯಾ ಅಧ್ಯಕ್ಷರನ್ನು ಜೊತೆಗೆ ಕೂರಿಸಿ ಸಂಧಾನ ಮಾತುಕತೆ ನಡೆಸಲು ತಾವೇ ನೇತೃತ್ವ ವಹಿಸಲು ಮುಂದಾಗಿದ್ದಾರೆ. ಆದರೆ ಪುಟಿನ್ ಮತ್ತು ಟ್ರಂಪ್ ಯಾವಾಗ ಭೇಟಿಯಾಗುತ್ತಾರೆ ಎಂಬುದು ಇನ್ನೂ ನಿರ್ಧಾರವಾಗಿಲ್ಲ.

ಒಂದು ವೇಳೆ ಮಾತುಕತೆಗೆ ಒಪ್ಪದೇ ಹೋದರೆ ರಷ್ಯಾ ಮೇಲೆ ಮತ್ತಷ್ಟು ನಿರ್ಬಂಧಗಳನ್ನು ವಿಧಿಸಬೇಕಾಗುತ್ತದೆ ಎಂದು ಟ್ರಂಪ್ ಎಚ್ಚರಿಕೆ ನೀಡಿದ್ದಾರೆ ಎನ್ನಲಾಗಿದೆ. ಟ್ರಂಪ್ ಎರಡನೇ ಬಾರಿಗೆ ಅಮೆರಿಕಾ ಅಧ್ಯಕ್ಷರಾದ ಬಳಿಕ ಪುಟಿನ್ ಜೊತೆಗೆ ಇದು ಮೊದಲ ಭೇಟಿಯಾಗಿರಲಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ನಾಮಪತ್ರ ಸಲ್ಲಿಸಿದ ಬೆನ್ನಲ್ಲೇ ದೇವೇಗೌಡರನ್ನ ಭೇಟಿಯಾದ ಎನ್‌ಡಿಎ ಉಪ ರಾಷ್ಟ್ರಪತಿ ಅಭ್ಯರ್ಥಿ

ಚಿನ್ನ ಖರೀದಿಸುವವರಿಗೆ ಗುಡ್‌ ನ್ಯೂಸ್‌, ಇಳಿಕೆಯತ್ತ ಚಿನ್ನದ ದರ

ರೇಖಾ ಗುಪ್ತಾ ಮೇಲೆ ಕಪಾಳಮೋಕ್ಷ: ಆರೋಪಿ ವಿರುದ್ಧ ದಾಖಲಾಯಿತು ದೊಡ್ಡ ಕೇಸ್‌

ಪ್ರಚೋದನಕಾರಿ ಹೇಳಿಕೆ: ಬಸನಗೌಡ ಪಾಟೀಲ ವಿರುದ್ಧ ಎಫ್‌ಐಆರ್‌

ಕಾಂಗ್ರೆಸ್‌ ಕರ್ನಾಟಕವನ್ನು ಸಾಲದ ಸುಳಿಗೆ ತಳ್ಳುತ್ತಿದೆ: ಆರ್‌ ಅಶೋಕ್ ಗರಂ

ಮುಂದಿನ ಸುದ್ದಿ
Show comments