Webdunia - Bharat's app for daily news and videos

Install App

ಕಾಡು ಬೆಕ್ಕಿನ ಪ್ರಾಣ ಉಳಿಸಲು ಈ ಮಹಿಳೆ ಮಾಡಿದ್ದೇನು ಗೊತ್ತೆ?

Webdunia
ಮಂಗಳವಾರ, 24 ಸೆಪ್ಟಂಬರ್ 2019 (08:00 IST)
ಕೊಲೊರಾಡೋ : ಮಹಿಳೆಯೊಬ್ಬಳು  ಗಾಯಗೊಂಡ ಕಾಡು ಬೆಕ್ಕಿನ ಪ್ರಾಣ ಉಳಿಸಲು ತನ್ನ 3 ವರ್ಷದ ಮಗುವಿನ ಜೊತೆ ಕಾರಿನಲ್ಲಿ ಇರಿಸಿಕೊಂಡು ಬಂದ ಘಟನೆ ಕೊಲೊರಾಡೋನಲ್ಲಿ ನಡೆದಿದೆ.




ರಸ್ತೆ ಅಫಘಾತದಲ್ಲಿ ಗಾಯಗೊಂಡಿದ್ದ ಬಾಬ್‌ ಕ್ಯಾಟ್‌ ನ್ನು  ತನ್ನ ಕಾರಿನ ಹಿಂದಿನ ಸೀಟ್‌ ಮೇಲೆ, ತನ್ನ ಮಗುವಿನಿಂದ ಕೆಲವೇ ಇಂಚುಗಳ ದೂರದಲ್ಲಿ ಇಟ್ಟುಕೊಂಡಿದ್ದ ಮಹಿಳೆ ಕೂಡಲೇ ಕೊಲರಾಡೋ ವನ್ಯಜೀವಿ ಇಲಾಖೆಗೆ ಕರೆ ಮಾಡಿ ಈ ಬಗ್ಗೆ ತಿಳಿಸಿದ್ದಾಳೆ. ಅದಕ್ಕೆ ಅವರು ತಕ್ಷಣ ಮಗು ಮತ್ತು ಆಕೆಗೆ ಕಾರಿನಿಂದ ಹೊರಬರಲು ತಿಳಿಸಿದ್ದಾರೆ.


ಕಾರಣ ತನ್ನ ಬಲಿಷ್ಠವಾದ ಹಲ್ಲುಗಳಿಂದ ಚುರುಕಾಗಿ ದಾಳಿ ಮಾಡಬಲ್ಲ ಬಾಬ್‌ ಕ್ಯಾಟ್‌ ನ್ನು ಆಕೆ ತನ್ನ ಕಾರಿನಲ್ಲಿ ಮಗುವಿನ ಪಕ್ಕ ಇರಿಸಿದ್ದಳು. ಅದಕ್ಕೆ ಭಾರೀ ಪ್ರಮಾಣದಲ್ಲಿ ಗಾಯವಾಗಿ, ಹಿಂಬದಿಯ ಕಾಲುಗಳು ನಿಷ್ಕ್ರಿಯವಾಗಿದ್ದ ಕಾರಣ, ತಾಯಿ-ಮಗುವಿನ ಮೇಲೆ ಅದು ದಾಳಿ ಮಾಡಲು ಮುಂದಾಗಲಿಲ್ಲ ಎನ್ನಲಾಗಿದೆ.


ಅಲ್ಲದೇ ಒಂಬತ್ತು ಕೆಜಿ ತೂಗುವ ದೊಡ್ಡ ಬೆಕ್ಕನ್ನು ಟವೆಲ್‌ ಒಂದರಲ್ಲಿ ಮುಚ್ಚಿ, ಹಿಂಬದಿಯ ಸೀಟ್‌ನಲ್ಲಿ ಇಟ್ಟಿದ್ದು, ಅದರ ಕಣ್ಣುಗಳು ತೆರೆದಿರುವುದನ್ನು ನೋಡಿ ಅಧಿಕಾರಿಗಳೇ ಆಘಾತಗೊಂಡಿದ್ದಾರೆ. ಹಾಗೇ ಯಾರು ಕಾಡಿನ ಕ್ರೂರ ಪ್ರಾಣಿಗಳ ಜೊತೆ ಈ ರೀತಿ ಇರಬಾರದು, ಇದು ದುರಂತಕ್ಕೆ ಕಾರಣವಾಗಬಹುದು ಎಂದು ಟ್ವೀಟ್ ಮೂಲಕ ತಿಳಿಸಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಏರ್‌ ಇಂಡಿಯಾ ವಿಮಾನ ದುರಂತ: ವಾರದೊಳಗೆ ಪ್ರಾಥಮಿಕ ವರದಿ ಹೊರಬೀಳುವ ಸಾಧ್ಯತೆ

ತಮ್ಮ ವಶದಲ್ಲಿರುವ ಕೈದಿಗಳು, ಮೀನುಗಾರರ ಪಟ್ಟಿ ವಿನಿಮಯ ಮಾಡಿಕೊಂಡ ಭಾರತ, ಪಾಕಿಸ್ತಾನ

ಯಾವ ಚಾನೆಲ್ ಗಳು ನನ್ನ ಬಗ್ಗೆ ಸುಳ್ಳು ಸುದ್ದಿ ಹಾಕಿದ್ರೂ ಕೇಳೋನಲ್ಲ ನಾನು: ಸಿದ್ದರಾಮಯ್ಯ

ತೆಲಂಗಾಣ ಬಿಜೆಪಿ ರಾಜ್ಯಾಧ್ಯಕ್ಷರಾಗಿ ನೇಮಕವಾದ ಎನ್ ರಾಮಚಂದರ್ ರಾವ್ ಹಿನ್ನೆಲೆ ಹೀಗಿದೆ

ಸರಣಿ ಹೃದಯಾಘಾತಕ್ಕೆ ಕೊವಿಡ್ ಲಸಿಕೆ ಕಾರಣವಾ: ಸಿದ್ದರಾಮಯ್ಯ ಸ್ಪೋಟಕ ಹೇಳಿಕೆ

ಮುಂದಿನ ಸುದ್ದಿ
Show comments