Select Your Language

Notifications

webdunia
webdunia
webdunia
webdunia

ಚಂದ್ರಶೇಖರ್ ಗುರೂಜಿ ಕೊಲೆ ಹೋಮ ಹವನದ ಮೊರೆ ಹೋದ ಹೋಟೆಲ್ ಆಡಳಿತ ಮಂಡಳಿ

ಚಂದ್ರಶೇಖರ್ ಗುರೂಜಿ  ಕೊಲೆ ಹೋಮ ಹವನದ ಮೊರೆ ಹೋದ ಹೋಟೆಲ್ ಆಡಳಿತ ಮಂಡಳಿ
ಬೆಂಗಳೂರು , ಶನಿವಾರ, 9 ಜುಲೈ 2022 (14:02 IST)
ಎಡಿಜಿಪಿ ಅಲೋಕ್​ ಕುಮಾರ್ ಪ್ರೆಸಿಡೆಂಟ್​ ಹೋಟೆಲ್​ಗೆ ಭೇಟಿ ನೀಡಿದ ಬಳಿಕ, ಇಂದು ಹೋಟೆಲ್​ ಆಡಳಿತ ಮಂಡಳಿ ದೈವದ ಮೊರೆ ಹೋಗಿದ್ದಾರೆ. ವಾಸ್ತು ತಜ್ಞ ಚಂದ್ರಶೇಖರ ಗುರೂಜಿ ಹತ್ಯೆ ನಡೆದ ಪ್ರೆಸಿಡೆಂಟ್​ ಹೋಟೆಲ್​ನಲ್ಲಿ ಪೂಜೆ ನಡೆಯುತ್ತಿದೆ. ಅದು ಗುರೂಜಿ ಹತ್ಯೆ ನಡೆದ ಸ್ಥಳದಲ್ಲೇ ಹೋಮ ನಡೆಯುತ್ತಿದೆ. ಗುರೂಜಿ ಹತ್ಯೆ ಬಳಿಕ ಹೋಟೆಲ್​ನಲ್ಲಿ ಭಯದ ವಾತಾವರಣ ಸೃಷ್ಟಿಯಾಗಿತ್ತು. ಈ ಭಯವನ್ನು ದೂರ ಮಾಡಲು ಈಗ ಆಡಳಿತ ಮಂಡಳಿ ಗುರೂಜಿ ಹತ್ಯೆಯಾದ ಸ್ಥಳದಲ್ಲೇ ಹೋಮ ನಡೆಸುತ್ತಿದೆ.
ಹುಬ್ಬಳ್ಳಿಯ ಖ್ಯಾತ ಪುರೋಹಿತರಿಂದ ಹೋಮ ನಡೆಯುತ್ತಿದೆ. ಸುದರ್ಶನ ಹೋಮ ಮಾಡಿಸಿ ಹೋಟೆಲ್​ನಲ್ಲಿರುವ ಭಯದ ವಾತಾವರಣವನ್ನು ದೂರ ಮಾಡಲಾಗುತ್ತಿದೆ. ಇಬ್ಬರು ಪುರೋಹಿತರಿಂದ ಮಂತ್ರಘೋಷ ನಡೆದಿದೆ. ಹುಬ್ಬಳ್ಳಿಯ ಉಣಕಲ್ ಕೆರೆ ಬಳಿಯ ದಿ ಪ್ರೆಸಿಡೆಂಟ್ ಹೋಟೆಲ್​ನಲ್ಲಿ ಚಂದ್ರಶೇಖರ್ ಗುರೂಜಿ ಅವರ ಬರ್ಬರ ಹತ್ಯೆ ನಡೆದಿತ್ತು.

Share this Story:

Follow Webdunia kannada

ಮುಂದಿನ ಸುದ್ದಿ

ಸಹಪಾಠಿಯ ಮೇಲೆಯೇ ಸಾಮೂಹಿಕ ಅತ್ಯಾಚಾರವೆಸಗಿದ ವಿದ್ಯಾರ್ಥಿಗಳು