ಕಳೆದೆರಡು ದಿನಗಳ ಹಿಂದೆ ಬಾಂಗ್ಲಾದ ರಾಜಧಾನಿ ಢಾಕಾದಲ್ಲಿ ದಾಳಿ ನಡೆಸಿದ ಏಳು ಜನ ಉಗ್ರರಲ್ಲಿ ಆಡಳಿತ ಪಕ್ಷ ಆವಾಮಿ ಲೀಗ್ ಹಿರಿಯ ನಾಯಕರೊಬ್ಬರ ಪುತ್ರ ಸಹ ಇದ್ದ ಎಂಬುದು ಬಹಿರಂಗವಾಗಿದೆ.
ಪೊಲೀಸ್ ಕಾಯಾಚರಣೆಯಲ್ಲಿ ಹತ್ಯೆಯಾದ ಉಗ್ರರ ಪೈಕಿ ಮೂವರ ಫೋಟೊ ಬಿಡುಗಡೆ ಮಾಡಿದ್ದು, ಅವರಲ್ಲೊಬ್ಬ ಬಾಂಗ್ಲಾದೇಶ ಒಲಿಂಪಿಕ್ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ, ಅಮಾಮಿ ಲೀಗ್ ಪಕ್ಷದ ಢಾಕಾ ನಗರ ಶಾಖೆಯ ಮುಖ್ಯಸ್ಥ ಎಸ್.ಎಂ. ಇಂತಿಯಾಜ್ ಖಾನ್ ಬಾಬುಲ್ ಪುತ್ರ ರೋಹನ್ ಇಬ್ಲೆ ಇಂತಿಯಾಜ್ ಎಂದು ಆವಾಮಿ ಲೀಗ್ನ ಮತ್ತೊಬ್ಬ ನಾಯಕರು ಗುರುತಿಸಿದ್ದಾರೆ.
ಜನೇವರಿ ನಾಲ್ಕರಂದು ಬಾಬುಲ್ ತಮ್ಮ ಮಗ ಕಾಣೆಯಾಗಿದ್ದಾನೆಂದು ಪ್ರಕರಣ ದಾಖಲಿಸಿದ್ದರು. ಕಳೆದ ವರ್ಷ ಡಿಸೆಂಬರ್ ತಿಂಗಳಲ್ಲಿ ಪತ್ನಿಯ ಚಿಕಿತ್ಸೆಗೆಂದು ಆತ ಭಾರತಕ್ಕೆ ಬಂದಿದ್ದ. ಬಳಿಕ ಮನೆಗೆ ಹಿಂತಿರುಗಿರಲಿಲ್ಲ. ಆತ ಉಗ್ರ ಸಂಘಟನೆಗೆ ಸೇರಿದ್ದು ಈಗ ಬಯಲಾಗಿದೆ.
ಈ ಬೆಳವಣಿಗೆ ಸಹಜವಾಗಿಯೇ ಬಾಂಗ್ಲಾದ ಆಡಳಿತ ಪಕ್ಷವನ್ನು ಮುಜುಗರಕ್ಕೆ ಸಿಕ್ಕಿಸಿದೆ.
ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ
ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ.