ಐಸಿಸ್ ಉಗ್ರರು ಅಪಹರಿಸಿದ್ದ ಕೇರಳದ ಪಾದ್ರಿ ಬಿಡುಗಡೆ

Webdunia
ಮಂಗಳವಾರ, 12 ಸೆಪ್ಟಂಬರ್ 2017 (18:23 IST)
ಐಸಿಸ್ ಉಗ್ರರು ಅಪಹರಿಸಿದ್ದ  ಕೇರಳದ ಪಾದ್ರಿ ಟಾಮ್ ಉಝುನ್ನಾಲಿಯನ್ನ ರಕ್ಷಿಸಲಾಗಿದೆ. 2016ರಿಂದ ಯೆಮೆನ್`ನಿಂದ ಅಪಹರಣಕ್ಕೀಡಾಗಿದ್ದ ಪಾದ್ರಿಯನ್ನ ಓಮನ್ ವಿದೇಶಾಂಗ ಇಲಾಖೆ ಮತ್ತು ಯೆಮೆನ್ ಅಧಿಕಾರಿಗಳ ಕಾರ್ಯಾಚರಣೆಯಲ್ಲಿ ರಕ್ಷಿಸಲಾಗಿದೆ.
 
 

ಸದ್ಯ, ಮಸ್ಕತ್`ನಲ್ಲಿರುವ ಪಾದ್ರಿ  ಟಾಮ್ ಉಝುನ್ನಾಲಿಯನ್ನ ಇಂದು ರಾತ್ರಿ ಕೇರಳಕ್ಕೆ ಕರೆತರಲಾಗುತ್ತಿದೆ. ಈ ಸಂದರ್ಭ ಯೆಮೆನ್  ಸರ್ಕಾರಕ್ಕೆ ಪಾದ್ರಿ ಕೃತಜ್ಞತೆ ಅರ್ಪಿಸಿದ್ದು, ತನ್ನ ರಕ್ಷಣೆಗೆ ಶ್ರಮಿಸಿದ ಗೆಳೆಯರು, ಸಂಬಂಧಿಕರಿಗೆ ಧನ್ಯವಾದ ಹೇಳಿದ್ದಾರೆ. ನಾನು ಯೂರೋಪಿಯನ್ ಪಾದ್ರಿಯಾಗಿದ್ದರೆ ಐಸಿಸ್ ಉಗ್ರರು ಮತ್ತಷ್ಟು ಗಂಭೀರವಾಗಿ ಪರಿಗಣಿಸುತ್ತಿದ್ದರು. ಭಾರತ ಮೂಲದ ಪಾದ್ರಿಯಾದ್ದರಿಂದ ಬಚಾವ್ ಆದೆ ಎಂದಿದ್ದಾರೆ. ಟ್ವಿಟ್ಟರ್`ನಲ್ಲಿ ಈ ಬಗ್ಗೆ ಸಂತಸ ವ್ಯಕ್ತಪಡಿಸಿರುವ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್, ಟಾಮ್ ಬಿಡುಗಡೆಯಾಗಿರುವುದನ್ನ ತಿಳಿಸಲು ಸಂತಸವಾಗುತ್ತಿದೆ ಎಂದಿದ್ದಾರೆ.

ಒಮನ್ನಿನ ಸುಲ್ತಾನ್ ಅವರ ಮನವಿ ಮೇರೆಗೆ ಟಾಮ್ ಅವರನ್ನ ರಕ್ಷಿಸುವ ಕಾರ್ಯಾಚರಣೆಯಲ್ಲಿ ಒಮನ್ ಮತ್ತು ಯೆಮನ್ನಿನ ಎರಡೂ ದೇಶಗಳ ಅಧಿಕಾರಿಗಳು ತೊಡಗಿದ್ದರು. ಮಾರ್ಚ್ 2016ರಂದು ಯೆಮನ್ನಿನ ಅದೇನ್ ನಗರದಲ್ಲಿ ಮದರ್ ತೆರೆಸಾ ವೃದ್ಧಾಶ್ರಮದ ಮೇಲೆ ಐಸಿಸ್ ಉಗ್ರರು ದಾಳಿ ನಡೆಸಿದ್ದ ವೇಳೆ ಪಾದ್ರಿ ಟಾಮ್ ಅವರನ್ನ ಅಪಹರಿಸಲಾಗಿತ್ತು. ಈ ಸಂದರ್ಭ ವೃದ್ಧಾಶ್ರಮದ 15 ಮಂದಿಯನ್ನ ಉಗ್ರರು ಕೊಂದಿದ್ದರು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ರಾಜ್ಯದ ಎಲ್ಲ ಸಮಸ್ಯೆಗೆ ನಾಟಿಕೋಳಿಯಲ್ಲಿ ಪರಿಹಾರವಿದೆಯೇ: ಎನ್.ರವಿಕುಮಾರ್ ಪ್ರಶ್ನೆ

ಶ್ರೀಲಂಕಾಗೆ ಸಹಾಯ ಮಾಡಲು ಹೋಗಿ ಮುಜುಗರಕ್ಕೀಡಾದ ಪಾಕಿಸ್ತಾನ, ಆಗಿದ್ದೇನು ಗೊತ್ತಾ

ಎರಡು ರಾತ್ರಿ ತೋಟದಲ್ಲೇ ಕಳೆದ ಮಗು, ಕೊನೆಗೂ ಹುಡುಕಿಕೊಟ್ಟ ಸಾಕು ನಾಯಿ

ಭಾರತಕ್ಕೆ ರಷ್ಯಾ ಅಧ್ಯಕ್ಷ ಪುಟಿನ್ ಭೇಟಿ, ದೆಹಲಿಗೆ ಆಗಮಿಸಿದ ರಷ್ಯಾದ ವಿಶೇಷ ಭದ್ರತಾ ಪಡೆ

ಹೈದರಾಬಾದ್‌: ತಪ್ಪಾದ ಇಂಜೆಕ್ಷನ್‌ಗೆ ಕೋಮಾಕ್ಕೆ ಜಾರಿದ ಮಹಿಳೆ

ಮುಂದಿನ ಸುದ್ದಿ
Show comments