Webdunia - Bharat's app for daily news and videos

Install App

ಬೇಸಿಗೆಯಲ್ಲಿ ತಿನ್ನಲೇಬೇಕಾದ ತರಕಾರಿ

Webdunia
ಸೋಮವಾರ, 27 ಮಾರ್ಚ್ 2017 (10:03 IST)
ಬೆಂಗಳೂರು: ಬೇಸಿಗೆಯಲ್ಲಿ ದೇಹಕ್ಕೆ ನೀರಿನಂಶ ಎಷ್ಟು ನೀಡಿದರೂ ಕಡಿಮೆಯೇ. ಸುಡುವ ಬಿಸಿಲಿಗೆ ದೇಹ ನಿರ್ಜಲೀಕರಣಕ್ಕೊಳಗಾಗುವುದು ಬೇಗ. ಹಾಗಾಗದಂತೆ ತಡೆಯಲು ಯಾವ ತರಕಾರಿ ತಿನ್ನಬೇಕು ನೋಡಿಕೊಳ್ಳಿ.

 

ಸೋರೆಕಾಯಿ

ಸೋರೆಕಾಯಿಯಲ್ಲಿ ಶೇಕಡಾ 90 ರಷ್ಟು ನೀರಿನಂಶವಿದೆ. ಆದಷ್ಟು ಇದರ ಜ್ಯೂಸ್ ಮಾಡಿ ಕುಡಿಯುವುದು ದೇಹಕ್ಕೆ ತಂಪು ನೀಡುವುದಲ್ಲದೆ, ನಿರ್ಜಲೀಕರಣವಾಗದಂತೆ ತಡೆಯುತ್ತದೆ. ಜತೆಗೆ ಇದು ತೂಕ ಇಳಿಸಲೂ ಸಹಾಯ ಮಾಡುತ್ತದೆ.

 
ಸೊಪ್ಪು ತರಕಾರಿಗಳು

ಸೊಪ್ಪು ತರಕಾರಿಗಳು ಹೆಚ್ಚು ಶೀತ ಗುಣವನ್ನು ಹೊಂದಿದೆ. ಉಷ್ಣ  ಹವೆಗೆ ಶೈತ್ಯ ತರಕಾರಿಗಳ ಸೇವನೆ ಉತ್ತಮ. ಇದು ಹೊಟ್ಟೆಗೂ ತಂಪು, ದೇಹಕ್ಕೂ ಬೇಕಾದ ಪೋಷಕಾಂಶ ಒದಗಿಸುತ್ತದೆ.

 
ಕಲ್ಲಂಗಡಿಹಣ್ಣು

 
ದಿನಕ್ಕೊಂದು ಕಲ್ಲಂಗಡಿ ಹಣ್ಣು ತಿನ್ನುತ್ತಿದ್ದರೆ ಬಾಯಾರಿಕೆ ನಿವಾರಣೆಯಾಗುವುದು. ಕಲ್ಲಂಗಡಿ ಹಣ್ಣಿನಲ್ಲಿ ನೀರಿನ ಅಂಶ ಹೆಚ್ಚು. ಹೀಗಾಗಿ ಬೇಸಿಗೆಯ ಉಷ್ಣ ಹವೆಯಿಂದಾಗಿ ಬರುವ ಉರಿಮೂತ್ರದಂತಹ ಸಮಸ್ಯೆಗಳಿಂದ ಪರಿಹಾರ ಸಿಗುತ್ತದೆ.

 
ಸೌತೇಕಾಯಿ

 
ಕಣ್ಣು ಉರಿಯುತ್ತಿದ್ದರೆ, ಸೌತೇಕಾಯಿಯನ್ನು ಬಿಲ್ಲೆಗಳಾಗಿ ಮಾಡಿಕೊಂಡು ಕಣ್ಣಿಗಿಟ್ಟುಕೊಂಡು ಕುಳಿತರೆ ಸಾಕು. ಅಲ್ಲದೆ, ಸೌತೇಕಾಯಿ ಜ್ಯೂಸ್ ಮಾಡಿ ಕುಡಿಯುವುದು, ಅಥವಾ ಊಟದ ಜತೆಗೆ ಹಾಗೇ ತಿನ್ನುವುದರಿಂದ ದೇಹ ತಂಪಾಗುತ್ತದೆ.

 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

Heart health: ನಿಮ್ಮ ಹೃದಯ ಜೋರಾಗಿ ಹೊಡೆದುಕೊಳ್ಳುತ್ತಿದೆಯೇ, ನಿರ್ಲ್ಯಕ್ಷ ಬೇಡ

Hair Care: ಕಂಡೀಷನರ್ ಹಚ್ಚುವಾಗ ಈ ತಪ್ಪನ್ನು ಮಾಡಲೇಬೇಡಿ

Skin Care: ಬೇಸಿಗೆ ಕಾಲದಲ್ಲಿ ಯಾವುದೇ ಕಾರಣಕ್ಕೂ ಈ ತಪ್ಪುಗಳನ್ನು ಮಾಡಬೇಡಿ

Hair fal tips: ತಲೆಕೂದಲಿನ ಬೆಳವಣಿಗೆಗೆ ಈ ಒಂದು ಜ್ಯೂಸ್ ಮಾಡಿ ತಲೆಗೆ ಹಚ್ಚಿ

Beetal leaves: ಈ ಆರೋಗ್ಯ ಸಮಸ್ಯೆಯಿದ್ದರೆ ಪ್ರತಿನಿತ್ಯ ವೀಳ್ಯದೆಲೆ ಸೇವಿಸಿ

ಮುಂದಿನ ಸುದ್ದಿ
Show comments