Webdunia - Bharat's app for daily news and videos

Install App

ಮಳೆಗಾಲದಲ್ಲಿ ಎಂತಹ ಆಹಾರ ಸೇವಿಸಬಾರದು?

Webdunia
ಶನಿವಾರ, 1 ಜುಲೈ 2017 (08:57 IST)
ನವದೆಹಲಿ: ಮಳೆಗಾಲ ಬಂತೆಂದರೆ ಸಾಕು. ಶೀತ ಜ್ವರ ಮುಂತಾದ ಸಮಸ್ಯೆಗಳೂ ಹಾಜರ್. ಮಳೆಗಾಲದ ಖಾಯಿಲೆಗಳಿಂದ ದೂರವಿರಬೇಕಾದರೆ ಎಂತಹ ಆಹಾರಗಳನ್ನು ದೂರಮಾಡಬೇಕು? ಇಲ್ಲಿ ನೋಡಿ.

 
ಸೊಪ್ಪು ತರಕಾರಿ
ಸೊಪ್ಪು ತರಕಾರಿ ತಂಪು ಗುಣ ಹೊಂದಿದೆ. ಈ ತರಕಾರಿ ಬೇಸಿಗೆಗೆ ಸೂಕ್ತ. ಆದರೆ ಮಳೆಗಾಲದಲ್ಲಿ ಸೊಪ್ಪು ತರಕಾರಿಗಳನ್ನು ಸೇವಿಸುವುದರಿಂದ ಬೇಗನೇ ಶೀತವಾಗುವುದು. ಯಾಕೆಂದರೆ ಇವುಗಳಲ್ಲಿ ಹುಳ ಹುಪ್ಪಟೆಗಳು, ಮಣ್ಣು ಹೆಚ್ಚಿರುವ ಕಾರಣ ಅನಾರೋಗ್ಯಕ್ಕೆ ಕಾರಣವಾಗಬಹುದು.

ಕರಿದ ತಿಂಡಿಗಳು
ಕರಿದ ತಿಂಡಿಗಳು ಚಳಿಯಾಗುವಾಗ ನಾಲಿಗೆಗೆ ರುಚಿಯೆನಿಸಬಹುದು. ಆದರೆ ಎಣ್ಣೆಯಲ್ಲಿ ಕರಿದ ಪದಾರ್ಥಗಳ ಸೇವನೆಯಿಂದ ಪಕ್ಕನೇ ಕೆಮ್ಮು, ಕಫದಂತಹ ಸಮಸ್ಯೆ ಬರಬಹುದು.

ಸೀ ಫುಡ್
ಮಳೆಗಾಲದಲ್ಲಿ ಮೀನು, ಪ್ರಾನ್ಸ್ ಮತ್ತು ಕ್ರ್ಯಾಬ್ ಗಳು ಮೊಟ್ಟೆಯಿಡುವ ಕಾಲ. ಈ ಸಂದರ್ಭದಲ್ಲಿ ಅವುಗಳ ಸೇವನೆ ಉತ್ತಮವಲ್ಲ.

ಬೀದಿ ಬದಿ ಆಹಾರ
ಬೀದಿ ಬದಿ ಆಹಾರ, ಜ್ಯೂಸ್ ಸೇವನೆ ಈ ಕಾಲಕ್ಕೆ ಹೇಳಿ ಮಾಡಿಸಿದ್ದಲ್ಲ. ಹಣ್ಣುಗಳಲ್ಲಿರುವ ತೇವಾಂಶ ಬೇಗನೇ ಶೀತ ಸಂಬಂಧೀ ರೋಗಕ್ಕೆ ತುತ್ತಾಗುವಿರಿ. ಇದರ ಬದಲು ಮನೆಯಲ್ಲೇ ಹಣ್ಣುಗಳನ್ನು ಚೆನ್ನಾಗಿ ತೊಳೆದು ಕತ್ತರಿಸಿ ತಿನ್ನುವುದು ಆರೋಗ್ಯದ ದೃಷ್ಟಿಯಿಂದ ಒಳ್ಳೆಯದು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಕಲ್ಲಂಗಡಿ ಹಣ್ಣನ್ನು ಫ್ರಿಡ್ಜ್ ನಲ್ಲಿಟ್ಟು ಸೇವಿಸುತ್ತಿದ್ದೀರೆ ಇದನ್ನು ಓದಿ

ಪೇಟೆಯಿಂದ ತಂದ ಮಾವಿನ ಹಣ್ಣು ಸೇವಿಸುವ ಮೊದಲು ಈ ಟಿಪ್ಸ್ ಫಾಲೋ ಮಾಡಿ

ಕ್ಯಾನ್ಸರ್ ರೋಗಕ್ಕೆ ಈ ಒಂದು ಹಣ್ಣು ರಾಮಬಾಣ

ಕಾರ್ನ್ ಸಿಲ್ಕ್ ಚಹಾ ಮಾಡಿ ಕುಡಿದರೆ ನಿಮ್ಮ ಈ ಅಂಗ ಸುರಕ್ಷಿತವಾಗಿರುತ್ತದೆ

ಮಾವಿನ ಹಣ್ಣು ತಿಂದರೆ ಶುಗರ್ ಹೆಚ್ಚಾಗುತ್ತಾ

ಮುಂದಿನ ಸುದ್ದಿ
Show comments