Webdunia - Bharat's app for daily news and videos

Install App

ಕಾಲು ಬಿರುಕು ಸಮಸ್ಯೆಗೆ ಏನೇನು ಮಾಡಬೇಕು?

Webdunia
ಶುಕ್ರವಾರ, 13 ಜನವರಿ 2017 (14:03 IST)
ಬೆಂಗಳೂರು: ಚಳಿಗಾಲ ಬಂತೆಂದರೆ ಸಾಕು. ಕೆಲವರಿಗೆ ಇದೊಂದು ಸಮಸ್ಯೆ. ಹಿಂಗಾಲು ಒಡೆದು ಅತೀವ ನೋವು ಕೊಡುವುದು. ಇದಕ್ಕೆ ಶೈತ್ಯ ಹವೆ, ಉಪಯೋಗಿಸುವ ಸಾಬೂನು, ತುಂಬಾ ಹೊತ್ತು ನೀರಲ್ಲಿ ನಿಲ್ಲುವುದು, ಜಾಸ್ತಿ ತೂಕ ಮುಂತಾದವು ಕಾರಣ. ಮನೆಯಲ್ಲೇ ಮಾಡಬಹುದಾದ ಮದ್ದು ಏನೆಲ್ಲಾ ನೋಡೋಣ.


ಕಾಲು ಒಡೆಯುವ ಸಮಸ್ಯೆ ನೀಡುವ ಕಿರಿ ಕಿರಿ ತುಂಬಾ ದೊಡ್ಡದು. ತೀವ್ರ ನೋವು, ನಡೆದಾಡಲೂ ಆಗದಂತ ಪರಿಸ್ಥಿತಿಗೆ ತಂದೊಡ್ಡುವುದಲ್ಲದೆ, ಕಾಲಿನ ಅಂದಗೆಡಿಸುತ್ತದೆ. ಕೆಲವರಿಗೆ ರಕ್ತ ಸೋರಿ ಕೀವಿನಂತಾಗುವುದೂ ಇದೆ.

ರಾತ್ರಿ ಮಲಗುವ ಮೊದಲು ಕಾಲನ್ನು ಹದ ಬಿಸಿ ನೀರಿನಲ್ಲಿ ತೊಳೆದುಕೊಂಡು ಚೆನ್ನಾಗಿ ಒಣಗಿಸಿ ಕಾಲು ಚೀಲ ಧರಿಸಿ ಮಲಗಿ. ಇದಕ್ಕೆ ತೆಂಗಿನ ಎಣ್ಣೆ ಹಚ್ಚಿಕೊಂಡು ಮಲಗಿದರೆ ಇನ್ನೂ ಉತ್ತಮ. ಅಂತೂ ಆ ಭಾಗ ಡ್ರೈ ಸ್ಕಿನ್ ಹಾಗಿದ್ದರೆ, ನೋವು ಜಾಸ್ತಿಯಾಗುತ್ತದೆ.

ಗ್ಲಿಸರಿನ್ ಹಾಕಿ ಕಣ್ಣೀರು ಸುರಿಸಬಹುದು ಎಂದು ನಮಗೆ ಗೊತ್ತು. ಅದೇ ಗ್ಲಿಸರಿನ್ ನ್ನು ಮಲಗುವ ಮುಂಚೆ ಕಾಲಿಗೆ ಹಚ್ಚಿ ಮಲಗಿಕೊಳ್ಳಿ. ಇದು ತೇವಾಂಶ ಉಳಿಸುತ್ತದೆ. ಎಳ್ಳೆಣ್ಣೆ ಹಚ್ಚುವುದೂ ಒಳ್ಳೆಯ ಉಪಾಯ.

ನಿಂಬೆ ರಸವನ್ನು ಬಿಸಿ ನೀರಿಗೆ ಹಾಕಿಕೊಂಡು ಮಲಗುವ ಮೊದಲು ಕಾಲು ಅದರಲ್ಲಿಟ್ಟುಕೊಂಡರೆ ಒಳ್ಳೆಯದು.  ಇದೆಲ್ಲಾ ಸಾಧ್ಯವಿಲ್ಲದಿದ್ದರೆ, ಮನೆಯಲ್ಲಿ ವೇಸ್ಟ್ ಆಗಿ ಮೂಲೆಯಲ್ಲಿ ಬಿದ್ದುಕೊಂಡಿರುವ ಪ್ಲಾಸ್ಟಿಕ್ ಕವರ್ ನ್ನು ಕಾಲಿಗೆ ಕಟ್ಟಿಕೊಂಡು ಮಲಗಿದರೂ ಸಾಕು. ಅದು ತೇವಾಂಶ ಕಾಪಾಡುತ್ತದೆ. ಮಾಡಿ ನೋಡಿ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಕಲ್ಲಂಗಡಿ ಹಣ್ಣನ್ನು ಫ್ರಿಡ್ಜ್ ನಲ್ಲಿಟ್ಟು ಸೇವಿಸುತ್ತಿದ್ದೀರೆ ಇದನ್ನು ಓದಿ

ಪೇಟೆಯಿಂದ ತಂದ ಮಾವಿನ ಹಣ್ಣು ಸೇವಿಸುವ ಮೊದಲು ಈ ಟಿಪ್ಸ್ ಫಾಲೋ ಮಾಡಿ

ಕ್ಯಾನ್ಸರ್ ರೋಗಕ್ಕೆ ಈ ಒಂದು ಹಣ್ಣು ರಾಮಬಾಣ

ಕಾರ್ನ್ ಸಿಲ್ಕ್ ಚಹಾ ಮಾಡಿ ಕುಡಿದರೆ ನಿಮ್ಮ ಈ ಅಂಗ ಸುರಕ್ಷಿತವಾಗಿರುತ್ತದೆ

ಮಾವಿನ ಹಣ್ಣು ತಿಂದರೆ ಶುಗರ್ ಹೆಚ್ಚಾಗುತ್ತಾ

ಮುಂದಿನ ಸುದ್ದಿ
Show comments