Webdunia - Bharat's app for daily news and videos

Install App

ಒಂದೇ ಒಂದು ಎಳೆನೀರು ಎಷ್ಟೊಂದು ಲಾಭ!

Webdunia
ಮಂಗಳವಾರ, 22 ಆಗಸ್ಟ್ 2017 (08:41 IST)
ಬೆಂಗಳೂರು: ಎಳೆನೀರು ಇಷ್ಟಪಡದವರು ಯಾರಿದ್ದಾರೆ? ಬೇಸಿಗೆ ಬಂತೆಂದರೆ ಸಾಕು. ಆದರೆ ಎಳನೀರು ಕುಡಿಯುವುದರಿಂದ ಎಷ್ಟೊಂದು ಲಾಭವಿದೆ ಗೊತ್ತಾ?

 
ಹೃದಯ ಖಾಯಿಲೆಗೆ
ತೆಂಗಿನ ಕಾಯಿ ತಿನ್ನುವುದರಿಂದ ಕೊಬ್ಬು ಶೇಖರಣೆಯಾಗುತ್ತದೆ ಎನ್ನಲಾಗುತ್ತದೆ. ಆದರೆ ಎಳೆನೀರಿನಲ್ಲಿ ಕೊಬ್ಬಿನಂಶ ಇರುವುದಿಲ್ಲ ಮತ್ತು ಬೇಡದ ಕೊಬ್ಬು ನಿವಾರಿಸುತ್ತದೆ. ಇದರಿಂದಾಗಿ ಹೃದಯ ಸಂಬಂಧಿ ಖಾಯಿಲೆಯನ್ನು ನಿಯಂತ್ರಣದಲ್ಲಿಡುತ್ತದೆ.

ಬೆಳಗಿನ ಸಂಕಟ
ಬೆಳಗ್ಗೆ ಎದ್ದಾಗ ಪಿತ್ತದ ಕಾರಣಕ್ಕೋ, ಇನ್ನೇನೋ ಕಾರಣಕ್ಕೋ ಹೊಟ್ಟೆ ತೊಳೆಸಿದಂತಾಗುವುದು, ಹಸಿವಿಲ್ಲದೇ ಇರುವುದು, ತಲೆ ಸುತ್ತಿದಂತಾಗುವುದು, ಇಂತಹ ಸಮಸ್ಯೆಗಳಿಗೆ ಎಳೆನೀರು ಸೇವನೆ ಉತ್ತಮ. ಎಳೆ ನೀರು ನಮ್ಮ ದೇಹವನ್ನು ನಿರ್ಜಲೀಕರಣಕ್ಕೊಳಗಾಗದಂತೆ ತಡೆಯುತ್ತದೆ.

ತೂಕ ಇಳಿಸಲು ಸಹಕಾರಿ
ಅಂಗಡಿಗಳಲ್ಲಿ ಸಿಗುವ ಬಣ್ಣ ಬಣ್ಣದ ತಂಪು ಪಾನೀಯಗಳು ನಮ್ಮಲ್ಲಿ ದೇಹ ತೂಕ ಹೆಚ್ಚಿಸಬಹುದು. ಆದರೆ ಎಳೆ ನೀರಿನಲ್ಲಿ ಸುಲಭವಾಗಿ ಜೀರ್ಣವಾಗುವ ಗುಣವಿದ್ದು, ತೂಕ ಇಳಿಸಲು ಸಹಕಾರಿ.

ಮೈಗ್ರೇನ್ ತಲೆನೋವು
ಇಂದಿನ ಜೀವನ ಶೈಲಿಯಿಂದಾಗಿ ಬಹುತೇಕರು ಮೈಗ್ರೇನ್ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಇದಕ್ಕೆ ಕಾರಣ ದೇಹದಲ್ಲಿ ಮ್ಯಾಗ್ನೇಶಿಯಂನ ಕೊರತೆ. ಹಾಗಾಗಿ ಎಳೆನೀರಿನ ಸೇವನೆ ಇದಕ್ಕೆ ಪರಿಹಾರ ನೀಡಬಹುದು ಎನ್ನುವುದು ತಜ್ಞರ ಅಭಿಪ್ರಾಯ.

ಇದನ್ನೂ ಓದಿ.. ಕಿಚ್ಚ ಸುದೀಪ್ ಈಗ ಮಿಲಿಯನೇರ್!
 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಕಲ್ಲಂಗಡಿ ಹಣ್ಣನ್ನು ಫ್ರಿಡ್ಜ್ ನಲ್ಲಿಟ್ಟು ಸೇವಿಸುತ್ತಿದ್ದೀರೆ ಇದನ್ನು ಓದಿ

ಪೇಟೆಯಿಂದ ತಂದ ಮಾವಿನ ಹಣ್ಣು ಸೇವಿಸುವ ಮೊದಲು ಈ ಟಿಪ್ಸ್ ಫಾಲೋ ಮಾಡಿ

ಕ್ಯಾನ್ಸರ್ ರೋಗಕ್ಕೆ ಈ ಒಂದು ಹಣ್ಣು ರಾಮಬಾಣ

ಕಾರ್ನ್ ಸಿಲ್ಕ್ ಚಹಾ ಮಾಡಿ ಕುಡಿದರೆ ನಿಮ್ಮ ಈ ಅಂಗ ಸುರಕ್ಷಿತವಾಗಿರುತ್ತದೆ

ಮಾವಿನ ಹಣ್ಣು ತಿಂದರೆ ಶುಗರ್ ಹೆಚ್ಚಾಗುತ್ತಾ

ಮುಂದಿನ ಸುದ್ದಿ
Show comments