Webdunia - Bharat's app for daily news and videos

Install App

ಗರಿಕೆ ಹುಲ್ಲಿನ ಗರಿಷ್ಠ ಉಪಯೋಗಗಳು

Webdunia
ಬುಧವಾರ, 11 ಜನವರಿ 2017 (09:22 IST)
ಬೆಂಗಳೂರು: ಗರಿಕೆ ಹುಲ್ಲು ಗಣಪತಿ ಹವನಕ್ಕೆ ಮಾತ್ರ ಉಪಯೋಗವಾಗುವುದಲ್ಲ. ಇದರಿಂದ ಹಲವು ಆರೋಗ್ಯಕರ ಅಂಶಗಳು ಇದರಲ್ಲಿವೆ. ಏನೇನು ಉಪಯೋಗಗಳು ಎಂದು ತಿಳಿದುಕೊಳ್ಳೋಣ.


ಗರಿಕೆ ಹುಲ್ಲು ಗಣಪತಿ ದೇವರ ಪ್ರಿಯ ವಸ್ತು ಎನ್ನಲಾಗುತ್ತದೆ.  ವಿದ್ಯೆ-ಬುದ್ಧಿ ಬೆಳವಣಿಗೆಗೆ ಗರಿಕೆ ಹುಲ್ಲನ್ನು ಖಾಲಿ ಹೊಟ್ಟೆಯಲ್ಲಿ ದಿನಾ ಸೇವಿಸುವುದು ಉತ್ತಮ ಎನ್ನಲಾಗುತ್ತದೆ. ಅಲ್ಲದೆ ಶೀತದ ಬಾಧೆಯಿರುವವರು ಇದರ ರಸವನ್ನು ದಿನಾ ಖಾಲಿ ಹೊಟ್ಟೆಯಲ್ಲಿ ಸೇವಿಸುವುದು ಉತ್ತಮ.

ಹಿಂದಿನ ಕಾಲದಿಂದಲೂ ರಕ್ತ ಸೋರುವಿಕೆ ತಡೆಗಟ್ಟಲು ಗರಿಕೆ ಹುಲ್ಲನ್ನು ಉಪಯೋಗಿಸಲಾಗುತ್ತದೆ. ಮೂಗಿನಲ್ಲಿ ರಕ್ತ ಸೋರುತ್ತಿದ್ದರೆ, ಗರಿಕೆ ರಸವನ್ನು ಎರಡು ಬಿಂದು ಬಿಟ್ಟರೆ ತಕ್ಷಣ ರಕ್ತ ಸೋರುವುದು ನಿಲ್ಲುತ್ತದೆ. ಆದರೆ ಅಧಿಕ ಪ್ರಮಾಣದಲ್ಲಿ ರಸವನ್ನು ಮೂಗಿಗೆ ಬಿಟ್ಟುಕೊಳ್ಳುವುದೂ ಒಳ್ಳೆಯದಲ್ಲ.

ಮಕ್ಕಳು ಬಿದ್ದು ಗಾಯ ಮಾಡಿಕೊಂಡು ರಕ್ತ ಸೋರುತ್ತಿದ್ದರೆ, ಗರಿಕೆ ಹುಲ್ಲಿನ ರಸವನ್ನು ಬಿಟ್ಟರೆ ಸೋರುವುದು ನಿಲ್ಲುತ್ತದೆ. ಗರಿಕೆ ರಸವನ್ನು ಹಾಗೇ ಜಗಿಯಬಹುದು ಅಥವಾ ರಸ ಕುಡಿಯುವುದರಿಂದ ಎಲುಬು ಗಟ್ಟಿಗೊಳಿಸುವುದಲ್ಲದೆ, ರಕ್ತಸ್ರಾವವನ್ನೂ ತಡೆಗಟ್ಟುವ ಶಕ್ತಿ ನೀಡುತ್ತದೆ.

ಗರಿಕೆಗೆ ವಿಕಿರಣ ತಡೆಗಟ್ಟುವ ಶಕ್ತಿಯೂ ಇದೆ ಎನ್ನಲಾಗುತ್ತದೆ. ಇದಕ್ಕೇ ಕೆಲವು ಸೂರ್ಯಗ್ರಹಣದ ಸಮಯದಲ್ಲಿ ಆಹಾರ ವಸ್ತುಗಳ ಮೇಲೆ ಗರಿಕೆ ಹುಲ್ಲನ್ನು ಇಡುವ ಸಂಪ್ರದಾಯವೂ ನಮ್ಮಲ್ಲಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

Skin Care: ಬೇಸಿಗೆ ಕಾಲದಲ್ಲಿ ಯಾವುದೇ ಕಾರಣಕ್ಕೂ ಈ ತಪ್ಪುಗಳನ್ನು ಮಾಡಬೇಡಿ

Hair fal tips: ತಲೆಕೂದಲಿನ ಬೆಳವಣಿಗೆಗೆ ಈ ಒಂದು ಜ್ಯೂಸ್ ಮಾಡಿ ತಲೆಗೆ ಹಚ್ಚಿ

Beetal leaves: ಈ ಆರೋಗ್ಯ ಸಮಸ್ಯೆಯಿದ್ದರೆ ಪ್ರತಿನಿತ್ಯ ವೀಳ್ಯದೆಲೆ ಸೇವಿಸಿ

ಹೀಗೇ ಮಾಡಿದರೆ ಮಕ್ಕಳಲ್ಲಿ ಕಟ್ಟುನಿಟ್ಟಾಗಿರದೆ ಶಿಸ್ತುಬದ್ಧವಾಗಿ ಬೆಳೆಸಬಹುದು

Men health: ಪುರುಷರಲ್ಲಿ ಬಂಜೆತನ ನಿವಾರಣೆಯಾಗಬೇಕೆಂದರೆ ಇದೊಂದು ಜ್ಯೂಸ್ ಸಾಕು

ಮುಂದಿನ ಸುದ್ದಿ
Show comments