Webdunia - Bharat's app for daily news and videos

Install App

ಈ ತರಕಾರಿಗಳನ್ನು ತಪ್ಪಿಯೂ ಬೇಯಿಸದೇ ತಿನ್ನಬೇಡಿ!

Webdunia
ಶುಕ್ರವಾರ, 15 ಜೂನ್ 2018 (08:45 IST)
ಬೆಂಗಳೂರು: ಕೆಲವು ತರಕಾರಿಗಳೇ ಹಾಗೆ, ಹಸಿಯಾಗಿ ಸಲಾಡ್ ಮಾಡಿ ತಿನ್ನುವ ಹಾಗೆಯೇ ಇಲ್ಲ. ಅದರಿಂದ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮವೇ ಹೆಚ್ಚು. ಅಂತಹ ತರಕಾರಿಗಳು ಯಾವುವು ನೋಡೋಣ.

ಆಲೂಗಡ್ಡೆ
ಕೆಲವರು ಆಲೂಗಡ್ಡೆ ಕತ್ತರಿಸಿ ಹಸಿಯಾಗಿ ಉಪ್ಪು ಖಾರ ಹಾಕಿಕೊಂಡು ಸೇವಿಸುತ್ತಾರೆ. ಆದರೆ ಆಲೂಗಡ್ಡೆ ಹಸಿಯಾಗಿ ಸೇವಿಸುವುದರಿಂದ ಜೀರ್ಣವಾಗುವುದು ಕಷ್ಟ ಮತ್ತು ಗ್ಯಾಸ್ಟಿಕ್ ಸಮಸ್ಯೆ ಬರುವ ಸಾಧ್ಯತೆ ಹೆಚ್ಚು.

ಬಸಳೆ
ಬಸಳೆ ಸೊಪ್ಪಿನಂತಹ ತರಕಾರಿಗಳು ಕ್ಯಾನ್ಸರ್ ನಂತಹ ಮಾರಕ ರೋಗಗಳ ವಿರುದ್ಧ ಹೋರಾಡುತ್ತವೆ. ಆದರೆ ಇವುಗಳನ್ನು ಹಸಿ ಸೇವಿಸುವುದರಿಂದ ಪ್ರಯೋಜನವಿಲ್ಲ. ಬೇಯಿಸಿ ತಿಂದರೆ ಅದರಲ್ಲಿ ಪೋಷಕಾಂಶಗಳನ್ನು ದೇಹ ಹೀರಿಕೊಳ್ಳುತ್ತದೆ.

ಮಶ್ರೂಮ್
ಮಶ್ರೂಮ್ ಕೂಡಾ ಹಸಿ ತಿನ್ನುವುದರಿಂದ ಜೀರ್ಣಕ್ರಿಯೆಗೆ ಅಡ್ಡಿಯಾಗಬಹುದು. ಹಸಿ ಮಶ್ರೂಮ್ ನಲ್ಲಿ ಕೆಲವೊಮ್ಮೆ ವಿಷಕಾರಿ ಅಂಶಗಳಿರುವ ಸಾಧ್ಯತೆಯಿದ್ದು, ಇದು ದೇಹದ ಮೇಲೆ ಪರಿಣಾಮ ಬೀರಬಹುದು.

ಬದನೆ
ಎಳೆ ಬದನೆ ಕಾಯಿಗಳಲ್ಲೂ ಆಲೂಗಡ್ಡೆಯಲ್ಲಿರುವಂತಹ ಅಂಶಗಳಿರುತ್ತವೆ. ಹೀಗಾಗಿ ಇದನ್ನು ಹಸಿಯಾಗಿ ತಿನ್ನುವುದರಿಂದ ಗ್ಯಾಸ್ಟಿಕ್ ನಂತಹ ಸಮಸ್ಯೆ ಬರಬಹುದು.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.

ಸಂಬಂಧಿಸಿದ ಸುದ್ದಿ

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಕ್ಯಾನ್ಸರ್ ರೋಗಕ್ಕೆ ಈ ಒಂದು ಹಣ್ಣು ರಾಮಬಾಣ

ಕಾರ್ನ್ ಸಿಲ್ಕ್ ಚಹಾ ಮಾಡಿ ಕುಡಿದರೆ ನಿಮ್ಮ ಈ ಅಂಗ ಸುರಕ್ಷಿತವಾಗಿರುತ್ತದೆ

ಮಾವಿನ ಹಣ್ಣು ತಿಂದರೆ ಶುಗರ್ ಹೆಚ್ಚಾಗುತ್ತಾ

ರಕ್ತದೊತ್ತಡ ಕಡಿಮೆ ಮಾಡಲು ಈ ಒಂದು ಸಿಂಪಲ್ ಜ್ಯೂಸ್ ಸಾಕು

ತಲೆಕೂದಲಿನ ಸಂರಕ್ಷಣೆಗೆ ತೆಂಗಿನ ಹಾಲು ಬಳಸಿ ಈ ರೀತಿ ಮಾಡಿ

ಮುಂದಿನ ಸುದ್ದಿ
Show comments