Webdunia - Bharat's app for daily news and videos

Install App

ಸಂಧಿವಾತಕ್ಕೆ ಈ ಆಹಾರ ದಿವ್ಯೌಷಧವಂತೆ..!

Webdunia
ಗುರುವಾರ, 22 ಜೂನ್ 2017 (11:05 IST)
ಇಂದಿನ ಒತ್ತಡದ ಬದುಕಿನಲ್ಲಿ ಹಿಂದೆಂಗಿತಲೂ ಹೆಚ್ಚು ಆರೋಗ್ಯದ ಬಗೆಗಿನ ಕಾಳಜಿ ಹೆಚ್ಚುತ್ತಿದೆ. ಅದರಲ್ಲೂ ಸೇವಿಸುವ ಆಹಾರದ ಬಗ್ಗೆ ಹೆಚ್ಚು ಗಮನ ಹರಿಸಲಾಗುತ್ತಿದೆ. ಯಾವುದನ್ನ ತಿನ್ನಬೇಕು ಇದರಿಂದ ಆರೋಗ್ಯಕ್ಕಾಗುವ ಅನುಕೂಲಗಳೇನು..? ಎಂಬ ಚರ್ಚಾ ಮನೋಭಾವ ಹೆಚ್ಚಿದೆ. ಸಸ್ಯಾಹಾರ ಆರೋಗ್ಯದ ದೃಷ್ಟಿಯಿಂದ ಉತ್ತಮ ಎನ್ನಲಾಗುತ್ತದೆ.ಮಾಂಸಾಹಾರಗಳು ಬೇಗ ದೇಹಕ್ಕೆ ಪೋಷಣೆ ಒದಗಿಸುತ್ತವೆ ಎಂಬ ಮಾತಿದೆ. ಅದರಲ್ಲೂ ಸೀ ಫುಡ್`ಗೆ ಆರೋಗ್ಯದ ದೃಷ್ಟಿಯಿಂದ ಪ್ರಮುಖ್ಯತೆ ಇದೆ. ಇತ್ತೀಚಿನ ಸಮೀಕ್ಷೆಯೊಂದು ದಿನಕ್ಕೆರಡು ಭಾರೀ ಮೀನಿ ಸೇವನೆ ಸಂಧಿವಾತಕ್ಕೆ ದಿವ್ಯೌಷಧ ಎನ್ನುತ್ತಿದೆ.
 

ಮೀನಿನಲ್ಲಿ ಒಮೇಗಾ-3 ಫ್ಯಾಟಿ ಆಸಿಡ್ ಹೇರಳವಾಗಿರುವುದರಿಂದ ದೇಹದ ಎಲ್ಲ ಅಂಗಾಂಗಳಿಗೂ ಒಳ್ಳೆಯ ಪೋಷಣೆ ನೀಡುತ್ತದೆ. ಸಂಧಿ ನೋವು ಸಮಸ್ಯೆಗೆ ಮೀನಿನೆಣ್ಣೆಯ ಻ಂಶಗಳಿರುವ ೌಷಧವನ್ನ ನೀಡಲಾಗುತ್ತದೆ. ಇದರಿಂದ ನೋವು ನಿವಾರಣೆಯಾಗುತ್ತಿದೆ. ಔಷಧಿ ಬದಲು ಮೀನನ್ನ ತಿಂದರೆ ಸಂಧಿಯೂತ, ಸಂಧಿನೋವಿನ ಸಮಸ್ಯೆ ನಿವಾರಣೆಯಾಗುತ್ತೆ ಎನ್ನುತ್ತಿದೆ ಸಂಶೋಧನೆ.

ಸಂಧಿವಾತ ಚಿಕಿತ್ಸಾ ಸಂಶೋಧನೆಯಲ್ಲಿ ಮುಂಚೂಣಿಯಲ್ಲಿರುವ ಬೋಸ್ಟನ್`ನ ಬ್ರಿಘಮ್ ಅಂಡ್ ವುಮೆನ್ಸ್ ಆಸ್ಪತ್ರೆಯ ತಜ್ಞರು 176 ಮಂದಿಯನ್ನ ಸಂಶೋಧನೆಗೆ ಒಳಪಡಿಸಿದ್ದಾರೆ. ಮೀನು ತಿಂದವರಲ್ಲಾಗುವ ಆರೋಗ್ಯದ ಬದಲಾವಣೆಯನ್ನ ಪರೀಕ್ಷಿಸಿದ್ದಾರೆ. ದಿನಕ್ಕೆರಡು ಬಾರಿ ಮೀನು ತಿನ್ನುವವರಲ್ಲಿ ಸಂಧಿವಾತ ಗಮನಾರ್ಹ ರೀತಿಯಲ್ಲಿ ಕಡಿಮೆಯಾಗಿರುವುದು ಕಂಡು ಬಂದಿದೆ.  

`ನಮ್ಮ ಸಂಶೋಧನೆಯಲ್ಲಿ ಮೀನು ಹೆಚ್ಚು ತಿನ್ನುವುದರಿಂದ ಸಂಧಿವಾತ ಕಡಿಮೆಯಾಗಿರುವುದು ಕಂಡುಬಂದಿದೆ. ಇದರಿಂದಾಗಿ ರೋಗಿಗಳು ಬೇಗ ಗುಣಮುಖರಾಗಿರುವುದು ಕಂಡು ಬಂದಿದೆ ಎಂದು ಸಂಶೊಧಕಿ ಡಾ. ಸಾರಾ ಹೇಳಿದ್ಧಾರೆ.
.

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಕಲ್ಲಂಗಡಿ ಹಣ್ಣನ್ನು ಫ್ರಿಡ್ಜ್ ನಲ್ಲಿಟ್ಟು ಸೇವಿಸುತ್ತಿದ್ದೀರೆ ಇದನ್ನು ಓದಿ

ಪೇಟೆಯಿಂದ ತಂದ ಮಾವಿನ ಹಣ್ಣು ಸೇವಿಸುವ ಮೊದಲು ಈ ಟಿಪ್ಸ್ ಫಾಲೋ ಮಾಡಿ

ಕ್ಯಾನ್ಸರ್ ರೋಗಕ್ಕೆ ಈ ಒಂದು ಹಣ್ಣು ರಾಮಬಾಣ

ಕಾರ್ನ್ ಸಿಲ್ಕ್ ಚಹಾ ಮಾಡಿ ಕುಡಿದರೆ ನಿಮ್ಮ ಈ ಅಂಗ ಸುರಕ್ಷಿತವಾಗಿರುತ್ತದೆ

ಮಾವಿನ ಹಣ್ಣು ತಿಂದರೆ ಶುಗರ್ ಹೆಚ್ಚಾಗುತ್ತಾ

ಮುಂದಿನ ಸುದ್ದಿ
Show comments