Webdunia - Bharat's app for daily news and videos

Install App

ಬೆನ್ನುನೋವನ್ನು ನಿರ್ಲಕ್ಷಿಸದಿರಿ, ಪ್ರಾಣಕ್ಕೆ ಅಪಾಯ ಜೋಕೆ

Webdunia
ಶನಿವಾರ, 15 ಅಕ್ಟೋಬರ್ 2016 (15:15 IST)
ಈಗಿನ ಜೀವನ ಶೈಲಿಯಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಮೊದಲಿನಂತೆ ಯಾವುದು ನಿಯಮಬದ್ಧವಾಗಿ ನಡೆಯುತ್ತಿಲ್ಲ. ಅದರಿಂದ ಆಹಾರದ ಬಳಕೆ, ನಿದ್ರೆ ಹೋಗದಿರುವಿಕೆ, ರಾತ್ರಿ ಹಗಲಿನ ವ್ಯತ್ಯಾಸ ತಿಳಿಯದೆ ನಿದ್ರಿಸುವುದು ಹೀಗೆ ಅನೇಕ ಸಂಗತಿಗಳು ಈಗಿನ ಬದುಕಿನ ಪ್ರಮುಖ ಸಂಗತಿ. 
ಇದರಿಂದ ಮಾನಸಿಕ ಒತ್ತಡ, ಕಿರಿಕಿರಿಯಂತಹ ಸಮಸ್ಯೆಗಳು ಉಂಟಾಗುತ್ತದೆ. ಅಷ್ಟೇ ಅಲ್ಲದೆ ಅನೇಕ ಬಗೆಯ ಕಾಯಿಲೆಗಳಿಗೂ ಕಾರಣವಾಗುತ್ತಿದೆ ಇದರಿಂದ. ಅವುಗಳಲ್ಲಿ ಸೊಂಟದ ನೋವು ಸಹ ಒಂದಾಗಿದೆ. ಆಯುರ್ವೇದದಲ್ಲಿ ಕಟಿ ಶೂಲ ಎಂದು ಕರೆಯಲ್ಪಡುವ ಈ ಕಾಯಿಲೆಯನ್ನು ಅಲೋಪತಿ ವೈದ್ಯಕೀಯ ಪದ್ಧತಿಯಲ್ಲಿ ಸಯಾಟಿಕ ಎಂದು ಕರೆಯುತ್ತಾರೆ. ಇದು ಶೇ. 90 ರಷ್ಟು ಮಂದಿಯನ್ನು ಜೀವನದ ಒಮ್ಮೆಯಾದರು ಕಾಡಿರುತ್ತದೆ. 
 
ಕಾರಣಗಳು:
 
ಒಂದೇ ಭಂಗಿಯಲ್ಲಿ ಕುಳಿತುಕೊಂಡಿರುವುದು, ದಪ್ಪ, ಕಡಿಮೆ ಶ್ರಮದ ಕೆಲಸ , ತುಂಬಾ ತೂಕ ಹೊರುವುದು, ದ್ವಿಚಕ್ರ ವಾಹನದಲ್ಲಿ ದೀರ್ಘ ಪ್ರಯಾಣ ಮಾಡುವುದು, ಕಾರಿನಲ್ಲಿ ಸದಾ ಓಡಾಡುವುದು, ವಂಶ ಪಾರಂಪರ್ಯ, ರಸ್ತೆ ಅಪಘಾತದಿಂದ ಗಾಯ ಆಗಿ ಅದರ ದುಷ್ಪರಿಣಾಮ, ಹೀಗೆ ಅನೇಕ ಕಾರಗನಲು ಸಯಾಟಿಕ ನಮ್ಮನ್ನು ಬಾಧಿಸಲು ದಾರಿ ಮಾಡಿಕೊಡುತ್ತದೆ. 
 
ಈ ನೋವು ಆರಂಭದಲ್ಲಿ ವಾತದಿಂದ ನಿತಂಬ (ಅಂಡು) ಗಳ ಮೇಲ್ಭಾಗದಲ್ಲಿ ಜೋರಾಗಿ ನೋವು ಉಂಟು ಮಾಡಿ ಬಳಿಕ ಸೊಂಟ, ತೊಡೆ, ಮೊಣಕಾಲು , ಹಿಮ್ಮಡಿ, ಪಾದಗಳ ವರೆಗೂ ಹರಡುತ್ತದೆ. ಚಳಿಗಾಲದಲ್ಲಿ ಇದರ ತೀವ್ರತೆ ಅಧಿಕ. ಮುಖ್ಯವಾಗಿ ಸೊಂಟಕ್ಕೆ ಸಂಬಂಧಪಟ್ಟ 24 ಇಲ್ಲವೇ 25 ಎಸ್ 1 ಎಸ್ 2 ಬೆನ್ನು ಮೂಳೆಗಳ ನಡುವೆ ಉಂಟಾಗುವ ಒತ್ತಡದ ಪರಿಣಾಮ ಸೊಂಟದ ನೋವು ಉಂಟಾಗುತ್ತದೆ . 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಕಲ್ಲಂಗಡಿ ಹಣ್ಣನ್ನು ಫ್ರಿಡ್ಜ್ ನಲ್ಲಿಟ್ಟು ಸೇವಿಸುತ್ತಿದ್ದೀರೆ ಇದನ್ನು ಓದಿ

ಪೇಟೆಯಿಂದ ತಂದ ಮಾವಿನ ಹಣ್ಣು ಸೇವಿಸುವ ಮೊದಲು ಈ ಟಿಪ್ಸ್ ಫಾಲೋ ಮಾಡಿ

ಕ್ಯಾನ್ಸರ್ ರೋಗಕ್ಕೆ ಈ ಒಂದು ಹಣ್ಣು ರಾಮಬಾಣ

ಕಾರ್ನ್ ಸಿಲ್ಕ್ ಚಹಾ ಮಾಡಿ ಕುಡಿದರೆ ನಿಮ್ಮ ಈ ಅಂಗ ಸುರಕ್ಷಿತವಾಗಿರುತ್ತದೆ

ಮಾವಿನ ಹಣ್ಣು ತಿಂದರೆ ಶುಗರ್ ಹೆಚ್ಚಾಗುತ್ತಾ

ಮುಂದಿನ ಸುದ್ದಿ
Show comments