Select Your Language

Notifications

webdunia
webdunia
webdunia
webdunia

ಸುಮಲತಾ ನನ್ನ ಹೆಸರು ಬಳಸಿಕೊಂಡರೆ ತಕ್ಕ ಶಾಸ್ತಿ ಮಾಡಿ ಎಂದ ಸಿದ್ಧರಾಮಯ್ಯ

ಸುಮಲತಾ ನನ್ನ ಹೆಸರು ಬಳಸಿಕೊಂಡರೆ ತಕ್ಕ ಶಾಸ್ತಿ ಮಾಡಿ ಎಂದ ಸಿದ್ಧರಾಮಯ್ಯ
ಮೈಸೂರು , ಸೋಮವಾರ, 15 ಏಪ್ರಿಲ್ 2019 (08:46 IST)
ಮೈಸೂರು : ಮಂಡ್ಯ ಲೋಕಸಭೆಯ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ನನ್ನ ಹೆಸರು ಬಳಸಿಕೊಂಡರೆ ತಕ್ಕ ಶಾಸ್ತಿ ಮಾಡಿ' ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಮತದಾರರಲ್ಲಿ ಹೇಳಿದ್ದಾರೆ.


ಕೆ ಆರ್ ನಗರದಲ್ಲಿ ನಡೆದ ಜಂಟಿ ಸಮಾವೇಶದಲ್ಲಿ ಮಾತನಾಡಿದ ಅವರು, ಮಂಡ್ಯದಲ್ಲಿ ಬಿಜೆಪಿ ಅವರು ಅಭ್ಯರ್ಥಿಯನ್ನೇ ಹಾಕಿಲ್ಲ, ಅವರು ಪಕ್ಷೇತರ ಅಭ್ಯರ್ಥಿಗೆ ಬೆಂಬಲ ನೀಡಿದ್ದಾರೆ. ಅಲ್ಲಿಗೆ ಸುಮಲತಾ ಬಿಜೆಪಿ ಅಭ್ಯರ್ಥಿ ಅನ್ನೋ ಹಾಗಿದೆ. ಹೀಗಾಗಿ ಅವರಿಗೆ ಓಟು ಹಾಕಬೇಡಿ, ನಿಮ್ಮ ಮತ ನಿಖಿಲ್ ಗೆ ಹಾಕಬೇಕು, ಪಕ್ಷೇತರ ಅಭ್ಯರ್ಥಿ ವಿಚಾರವಾಗಿ ನನ್ನ ಹೆಸರು ಬಳಸಿಕೊಂಡರೆ ತಕ್ಕ ಶಾಸ್ತಿ ಮಾಡಿ' ಎಂದು ಹೇಳಿದ್ದಾರೆ.


ಹಾಗೇ ನಮ್ಮಲ್ಲಿ ಹಿಂದೆ ಸಣ್ಣಪುಟ್ಟ ಭಿನ್ನಾಭಿಪ್ರಾಯ ಇತ್ತು. ಅದನ್ನು ಮರೆತು ನಾವು ಒಗ್ಗಟ್ಟಾಗಿ ಬಂದಿದ್ದೇವೆ, ನೀವು ಕೂಡ ನಿಮ್ಮಲ್ಲಿರುವ ಭಿನ್ನಾಭಿಪ್ರಾಯ ಮರೆತು ನಿಖಿಲ್ ರನ್ನು ಗೆಲ್ಲಿಸಿ ಎಂದು ಸಿದ್ದರಾಮಯ್ಯ ಮತದಾರರಲ್ಲಿ ಮನವಿ ಮಾಡಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಇಂದು ಮಂಡ್ಯದಲ್ಲಿ ನಿಖಿಲ್ ಕುಮಾರಸ್ವಾಮಿ ಪರ ಪ್ರಚಾರ ಮಾಡಲಿರುವವರು ಯಾರು ಗೊತ್ತಾ?