Publish Date: Sat, 17 May 2014 (17:36 IST)
Updated Date: Sat, 17 May 2014 (17:39 IST)
ಮಂಡ್ಯ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ನಟಿ ರಮ್ಯ ಸೋಲಿನ ಹಿಂದೆ ಷಡ್ಯಂತ್ರವಿದೆ ಎಂದು ಶಾಸಕ ಕೆ.ಎಸ್.ಪುಟ್ಟಣ್ಣಯ್ಯ ಆರೋಪಿಸಿದ್ದಾರೆ.
ರಮ್ಯಾರನ್ನು ಉದ್ದೇಶಪೂರ್ವಕವಾಗಿ ಸೋಲಿಸಲು ಕೆಲ ನಾಯಕರು ಪಿತೂರಿ ನಡೆಸಿದ್ದರು. ಅವರೆಲ್ಲಾ ಯಾಕು ಎಂದು ನನಗೆ ತಿಳಿದಿದೆ. ಆದರೆ, ಅವರುಗಳ ಹೆಸರನ್ನು ಬಹಿರಂಗಪಡಿಸುವುದಿಲ್ಲ ಎಂದು ಹೇಳಿದ್ದಾರೆ.
ಹಾಲಿ ಸಂಸದ ಪುಟ್ಟರಾಜು ತಾವು ಬಳಸುವ ಪದಗಳ ಬಗ್ಗೆ ಎಚ್ಚರಿಕೆಯಿರಲಿ. ಜಿಲ್ಲೆಯ ಅಭಿವೃದ್ಧಿಗಾಗಿ ಅವರಿಗೆ ಸಹಕಾರ ನೀಡಲು ಸಿದ್ದ. ಸಂಸದರ ಹುಟ್ಟುರಾದ ಚಿನಕುರಳಿ ಪ್ರದೇಶದ ಅಭಿವೃದ್ಧಿಗೆ ಹೆಚ್ಚಿನ ಗಮನ ನೀಡಲಿ ಎಂದು ಸಲಹೆ ನೀಡಿದ್ದಾರೆ.
ಕಾಂಗ್ರೆಸ್ ಪಕ್ಷದ ಕೆಲ ರಾಜಕೀಯ ನಾಯಕರು ಮಾಜಿ ಸಂಸದೆ ರಮ್ಯ ಸೋಲಿಗೆ ನೇರ ಕಾರಣರಾಗಿದ್ದಾರೆ ಎಂದು ಶಾಸಕ ಕೆ.ಎಸ್.ಪುಟ್ಟಣ್ಣಯ್ಯ ಗುಡುಗಿದ್ದಾರೆ.