Webdunia - Bharat's app for daily news and videos

Install App

ನಾಡಹಬ್ಬಕ್ಕೆ ಚಾಲನೆ-ಸರ್ಕಾರ ದುಃಶ್ಯಾಸನ ಆಗ್ಬಾರ್ದು, ಶ್ರೀಕೃಷ್ಣನಾಗ್ಬೇಕು: ಪೇಜಾವರಶ್ರೀ

Webdunia
ಬುಧವಾರ, 28 ಸೆಪ್ಟಂಬರ್ 2011 (20:24 IST)
PR
ರಾಜ್ಯದಲ್ಲಿ ನಡೆಯುತ್ತಿರುವ ಅನ್ಯಾಯ, ಭ್ರಷ್ಟಾಚಾರ, ದಬ್ಬಾಳಿಕೆ ವಿರುದ್ಧ ಹೋರಾಟ ಮಾಡಬೇಕಾದ ಅಗತ್ಯವಿದೆ ಎಂದು ಕರೆ ನೀಡಿರುವ ಉಡುಪಿ ಪೇಜಾವರ ಮಠದ ವಿಶ್ವೇಶ್ವರ ತೀರ್ಥ ಶ್ರೀಪಾದರು, ಸರ್ಕಾರ ಹಸಿರುಡುಗೆ ತೊಟ್ಟ ಕನ್ನಡಾಂಬೆಯ ಸೀರೆಯನ್ನು ಎಳೆಯುವ ದುಃಶ್ಯಾಸನ ಆಗಬಾರದು, ರಕ್ಷಣೆ ನೀಡಿದ ಕೃಷ್ಣನಾಗಬೇಕು ಎಂದು ಸರ್ಕಾರಕ್ಕೆ ಸಲಹೆ ನೀಡಿದರು.

ಅವರು ಬುಧವಾರ ಅರಮನೆ ನಗರ ಮೈಸೂರಿನಲ್ಲಿ 401ನೇ ದಸರಾ ಮಹೋತ್ಸವಕ್ಕೆ ಚಾಮುಂಡಿ ಬೆಟ್ಟದಲ್ಲಿ ವಿಧ್ಯುಕ್ತವಾಗಿ ಚಾಲನೆ ನೀಡಿದ ನಂತರ ಮಾತನಾಡಿದರು.

ತಾಯಿ ಚಾಮುಂಡೇಶ್ವರಿ ಸಮಸ್ತ ಜನರಿಗೆ ಒಳಿತನ್ನು ಮಾಡಲಿ ಎಂದು ಈ ಸಂದರ್ಭದಲ್ಲಿ ಪ್ರಾರ್ಥಿಸಿಕೊಂಡಿದ್ದೇನೆ. ಅದೇ ರೀತಿ ಸಮಾಜದಲ್ಲಿನ ದಬ್ಬಾಳಿಕೆ, ಶೋಷಣೆ ವಿರುದ್ಧ ಮತ್ತಷ್ಟು ಧ್ವನಿ ಎತ್ತಬೇಕಾದ ಅಗತ್ಯವಿದೆ ಎಂದರು. ಸರ್ಕಾರ ದುಃಶ್ಯಾಸನಂತಾಗದೇ ದ್ರೌಪದಿಗೆ ಅಕ್ಷಯಾಂಬರ ನೀಡಿದ ಕೃಷ್ಣನಾಗಬೇಕು ಎಂದು ಸಲಹೆ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ, ಮೈಸೂರು, ಮಡಿಕೇರಿಗಳಲ್ಲಿ ನಡೆಯುವ ದಸರಾ ಹಬ್ಬ ಉಳಿದ ಜಿಲ್ಲೆಗಳಲ್ಲೂ ನಡೆಯಬೇಕು. ಅದಕ್ಕೆ ಅಗತ್ಯ ನೆರವು ಸರ್ಕಾರ ನೀಡಲು ಸಿದ್ದವಿದೆ ಎಂದು ಭರವಸೆ ನೀಡಿದರು. ದಸರಾ ಹಬ್ಬ ವಿಶ್ವವಿಖ್ಯಾತವಾಗಿದೆ ಅಷ್ಟೇ ಅಲ್ಲ ಸರ್ವಧರ್ಮ ಸಮನ್ವಯದೊಂದಿಗೆ ಆಚರಿಸುವ ಮೂಲಕ ಮಾದರಿಯಾಗಿರುವುದಾಗಿಯೂ ಹೇಳಿದರು.

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಕ್ಯಾನ್ಸರ್ ರೋಗಕ್ಕೆ ಈ ಒಂದು ಹಣ್ಣು ರಾಮಬಾಣ

ಕಾರ್ನ್ ಸಿಲ್ಕ್ ಚಹಾ ಮಾಡಿ ಕುಡಿದರೆ ನಿಮ್ಮ ಈ ಅಂಗ ಸುರಕ್ಷಿತವಾಗಿರುತ್ತದೆ

ಮಾವಿನ ಹಣ್ಣು ತಿಂದರೆ ಶುಗರ್ ಹೆಚ್ಚಾಗುತ್ತಾ

ರಕ್ತದೊತ್ತಡ ಕಡಿಮೆ ಮಾಡಲು ಈ ಒಂದು ಸಿಂಪಲ್ ಜ್ಯೂಸ್ ಸಾಕು

ತಲೆಕೂದಲಿನ ಸಂರಕ್ಷಣೆಗೆ ತೆಂಗಿನ ಹಾಲು ಬಳಸಿ ಈ ರೀತಿ ಮಾಡಿ

Show comments