Select Your Language

Notifications

webdunia
webdunia
webdunia
webdunia

ಜಾಲಿ ರೈಡ್ ಮಾಡಲು ಹೋಗಿ ಪತ್ನಿಯೇ ಪತಿಯ ಜೀವಕ್ಕೆ ಕುತ್ತು ತಂದಳು!

ಜಾಲಿ ರೈಡ್ ಮಾಡಲು ಹೋಗಿ ಪತ್ನಿಯೇ ಪತಿಯ ಜೀವಕ್ಕೆ ಕುತ್ತು ತಂದಳು!
Munnar , ಭಾನುವಾರ, 30 ಏಪ್ರಿಲ್ 2017 (12:07 IST)
ಮುನ್ನಾರ್: ಬೇಸಿಗೆ ರಜಾ ಮಜಾ ಮಾಡಲು ಸಂಸಾರ ಸಮೇತ ಹೋಗಿದ್ದ ಕುಟುಂಬ ಈಗ ದುಃಖದ ಮಡುವಿನಲ್ಲಿದೆ. ಪತ್ನಿಯ ಅಚಾತುರ್ಯದಿಂದಾಗಿ ಮುಂದೆ ಸೈಕಲ್ ನಲ್ಲಿ ಜಾಲಿ ರೈಡ್ ಮಾಡುತ್ತಿದ್ದ ಪತಿ ಪ್ರಾಣ ಕಳೆದುಕೊಂಡ ಘಟನೆ ಕೇರಳದ ಮುನ್ನಾರ್ ನಲ್ಲಿ ನಡೆದಿದೆ.

 
ಬೆಂಗಳೂರು ಮೂಲದ ಮಲಯಾಳಿ ಅಶೋಕ್ ಸುಕುಮಾರನ್ ನಾಯರ್ ತೀರಿಕೊಂಡ ದುರ್ದೈವಿ. ಸಂಸಾರ ಸಮೇತ ಮುನ್ನಾರ್ ಪ್ರವಾಸಕ್ಕೆಂದು ಬಂದಿದ್ದ ದಂಪತಿ ಸುತ್ತಾಡಲು ಹೊರಟಿದ್ದಾರೆ. ಈ ವೇಳೆ ಸೈಕಲ್ ಪ್ರಿಯನಾದ ಪತಿ ಸೈಕಲ್ ನಲ್ಲಿ ಮುಂದೆ ಸಾಗುತ್ತಿದ್ದರೆ, ಹಿಂದಿನಿಂದ ಪತ್ನಿ ರಶ್ಮಿ ಕಾರು ಚಲಾಯಿಸಿಕೊಂಡು ಮಕ್ಕಳೊಡನೆ ಹಿಂಬಾಲಿಸುತ್ತಿದ್ದಳು.

ಈ ವೇಳೆ ಮಕ್ಕಳು ತುಂಟಾಟ ಮಾಡಿದರೆಂದು, ಪತ್ನಿ ಕಾರಿನ ಸ್ಟಿರಿಯೋ ಧ್ವನಿ ಹೊಂದಿಸುತ್ತಿದ್ದಾಗ ಸಮತೋಲನ ತಪ್ಪಿ ಮುಂದೆ ಸೈಕಲ್ ನಲ್ಲಿ ಚಲಿಸುತ್ತಿದ್ದ ಪತಿಗೆ ಡಿಕ್ಕಿ ಹೊಡೆದಿದೆ. ಕೆಳಕ್ಕೆ ಬಿದ್ದ ಅಶೋಕ್ ತಲೆಗೆ ಪೆಟ್ಟು ಬಿದ್ದು, ಆಸ್ಪತ್ರೆಗೆ ಸಾಗಿಸುವ ಮಾರ್ಗದಲ್ಲೇ ಮೃತಪಟ್ಟಿದ್ದಾರೆ.

ತಕ್ಷಣವೇ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಮೂಗಿನಿಂದ ತೀವ್ರ ರಕ್ತ ಸ್ರಾವವಾಗುತ್ತಿದ್ದರಿಂದ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ. ಇದೀಗ ಪತ್ನಿ ಸಂಪೂರ್ಣ ಶಾಕ್ ಗೊಳಗಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಇವಿಎಂ ಎಂದರೆ Every Vote Modi: ಯೋಗಿ ಆದಿತ್ಯಾನಾಥ್