Select Your Language

Notifications

webdunia
webdunia
webdunia
webdunia

ವೆಂಟಿಲೇಟರ್ ಸಂಜೀವಿನಿಯಲ್ಲ: ಆರೋಗ್ಯ ಸಚಿವರ ಹೇಳಿಕೆ

ವೆಂಟಿಲೇಟರ್ ಸಂಜೀವಿನಿಯಲ್ಲ: ಆರೋಗ್ಯ ಸಚಿವರ ಹೇಳಿಕೆ
ಬೆಂಗಳೂರ , ಮಂಗಳವಾರ, 13 ಅಕ್ಟೋಬರ್ 2015 (17:04 IST)
ನಿನ್ನೆ ಎರಡನೇ ಮಹಡಿ ಮೇಲಿಂದ ಬಿದ್ದು ಗಾಯಗೊಂಡು ಸಾವನ್ನಪ್ಪಿದ್ದ ಹೆಣ್ಣು ಮಗು ಗಗನಾ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಗ್ಯ ಸಚಿವ ಯು.ಟಿ.ಖಾದರ್ ಅವರು ಪ್ರತಿಕ್ರಿಯಿಸಿದ್ದು, ನಗರದ ಯಾವ ಆಸ್ಪತ್ರೆಯಲ್ಲಿಯೂ ಕೂಡ ವೆಂಟಿಲೇಟರ್ ಸಮಸ್ಯೆ ಇಲ್ಲ ಎಂದಿದ್ದಾರೆ. 
 
ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವರು, ನಗರದಲ್ಲಿ ವೆಂಟಿಲೇಟರ್ ಇಲ್ಲದ ಕಾರಣ ಮಕ್ಕಳು ಸಾವನ್ನಪ್ಪುತ್ತಿದ್ದಾರೆ ಎಂದು ಆರೋಪಿಸಲಾಗುತ್ತಿದೆ. ಆದರೆ ನಗರದ ಯಾವುದೇ ಆಸ್ಪತ್ರೆಯಲ್ಲಿಯೂ ಕೂಡ ವೆಂಟಿಲೇಟರ್ ಸಮಸ್ಯೆ ಇಲ್ಲ. ಎಲ್ಲಾ ಆಸ್ಪತ್ರೆಗಳಿಗೂ ಕೂಡ ಅಗತ್ಯಕ್ಕೆ ತಕ್ಕಂತೆ ವೆಂಟಿಲೇಟರ್‌ಗಳನ್ನು ಒದಗಿಸಲಾಗಿದೆ ಎಂದರು.
 
ಇದೇ ವೇಳೆ, ಎರಡು ವರ್ಷದ ಮಗು ಗಗನಾ ಎರಡು ಮಹಡಿಯ ಎತ್ತರದಿಂದ ಕೆಳಗೆ ಬಿದ್ದಿದ್ದ ಪರಿಣಾಮ ತಲೆಗೆ ದೊಡ್ಡ ಪ್ರಮಾಣದ ಪೆಟ್ಟು ಬಿದ್ದು, ತೀವ್ರ ರಕ್ತಸ್ರಾವವಾಗಿದೆ. ಅಲ್ಲದೆ ವೈದ್ಯರು ಬ್ರೇನ್ ಹ್ಯಾಮ್ರೇಜ್ ಆಗಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಈ ನಡುವೆ ಮಗುವನ್ನು ಅಂಬುಲನ್ಸ್‌ನಲ್ಲಿ ಇಡುವ ವೇಳೆ ಕೂಡ ವೆಂಟಿಲೇಟರ್‌ನಿಂದಲೇ ಸಂರಕ್ಷಿಸಲಾಗಿತ್ತು. ಆದ ಕಾರಣ ಮಗು ವೆಂಟಿಲೇಟರ್ ಸೌಲಭ್ಯವಿಲ್ಲದ ಕಾರಣ ಸಾವನ್ನಪ್ಪಿದೆ ಎಂಬುದು ಸುಳ್ಳು ಎನ್ನುವ ಮೂಲಕ ಪ್ರಕರಣವನ್ನು ಅಲ್ಲಗಳೆದ ಸಚಿವರು, ವೆಂಟಿಲೇಟರ್ ಎಂಬುದು ಸಂಜೀವಿನಿಯಲ್ಲ ಎಂದೂ ಕೂಡ ಕುಟುಕಿದರು. 

Share this Story:

Follow Webdunia kannada