ಡಾ ದೇವಿಪ್ರಸಾದ್ ಶೆಟ್ಟಿ ಖ್ಯಾತ ಹೃದ್ರೋಗ ತಜ್ಞರು. ಅವರು ಹಿಂದೊಮ್ಮೆ ಆಯುಷ್ ಇಲಾಖೆಯ ಸಂವಾದ ಕಾರ್ಯಕ್ರಮವೊಂದರಲ್ಲಿ ಕೀಲುನೋವಿನ ಬೆಸ್ಟ್ ಪರಿಹಾರವೇನು ಎಂಬುದನ್ನು ಹೇಳಿದ್ದರು. ಅದರ ವಿವರ ಇಲ್ಲಿದೆ ನೋಡಿ.
ಇಂದಿನ ದಿನಗಳಲ್ಲಿ ಬಹುತೇಕರು ಕೀಲು ನೋವಿಗೊಳಗಾಗುತ್ತಿದ್ದಾರೆ. ಅದರಲ್ಲೂ ವಯಸ್ಸು 40 ದಾಟಿದ ಮೇಲೆ ಕೀಲು ನೋವಿನ ಸಮಸ್ಯೆ ಸಾಮಾನ್ಯವಾಗುತ್ತಿದೆ. ಇದಕ್ಕೆ ಕಾರಣಗಳು ಅನೇಕ ಇರಬಹುದು. ಅದರ ಬಗ್ಗೆ ಡಾ ದೇವಿ ಶೆಟ್ಟಿಯವರ ಪ್ರಮುಖ ಸಲಹೆ ಇಲ್ಲಿದೆ.
ನಾನೂ ಚಿಕ್ಕವಯಸ್ಸಿನಲ್ಲಿದ್ದಾಗ ಬಾಡಿ ಬಿಲ್ಡ್ ಮಾಡುವುದರತ್ತಲೇ ಹೆಚ್ಚು ಆಸಕ್ತಿ ವಹಿಸಿದೆ. ಇನ್ನಿಲ್ಲದ ಕಸರತ್ತು ಮಾಡಿಕೊಂಡು ಬಾಡಿ ಬಿಲ್ಡ್ ಮಾಡಿ ನನ್ನ ಮಾಂಸಖಂಡಗಳನ್ನು ಪ್ರದರ್ಶಿಸುವುದೇ ದೊಡ್ಡ ಸಾಧನೆ ಎಂದುಕೊಂಡಿದ್ದೆ.
ಆದರೆ 40 ದಾಟಿದ ಮೇಲೆ ನನಗೆ ಗೊತ್ತಾಯಿತು ಯೋಗ ಎನ್ನುವುದು ಎಷ್ಟು ಮುಖ್ಯ ಎಂದು. ಇಂದು ಅನೇಕರಲ್ಲಿ ಮಧ್ಯವಯಸ್ಸಿಗೆ ಬರುತ್ತಲೇ ಕೀಲುನೋವಿನ ಸಮಸ್ಯೆ ಕಂಡುಬರುತ್ತಿದೆ. ಕೈ, ಕಾಲು, ಗಂಟು ಗಂಟುಗಳಲ್ಲಿ ನೋವು. ಇದಕ್ಕೆಲ್ಲಾ ಬೆಸ್ಟ್ ಪರಿಹಾರವೆಂದರೆ ಯೋಗ. ಪ್ರತಿನಿತ್ಯ ಯೋಗ ಮಾಡುವುದರಿಂದ ಕೀಲು ನೋವಿನ ಸಮಸ್ಯೆ ಪರಿಹರಿಸಬಹುದು ಎಂದು ಅವರು ಸಲಹೆ ನೀಡಿದ್ದರು.