ಹೃದಯಾಘಾತಕ್ಕೆ ತಿಂಗಳ ಮುಂಚೇ ಸಿಗುವ ಮುನ್ಸೂಚನೆಗಳೇನು: ಡಾ ಸಿಎನ್ ಮಂಜುನಾಥ್

Krishnaveni K
ಗುರುವಾರ, 10 ಜುಲೈ 2025 (10:05 IST)
ಹೃದಯಾಘಾತವಾಗುವ ಕೆಲವು ದಿನಗಳ ಮೊದಲೇ ನಮಗೆ ಸಿಗುವ ಸೂಚನೆಗಳೇನು? ದುರಾಭ್ಯಾಸಗಳಿಲ್ಲದಿದದ್ದರೂ ಹೃದಯಾಘಾತವಾಗುವುದು ಯಾಕೆ ಎಂಬುದಕ್ಕೆ ಡಾ ಸಿಎನ್ ಮಂಜುನಾಥ್ ಸಂದರ್ಶನವೊಂದರಲ್ಲಿ ನೀಡಿದ ವಿವರಣೆ ಇಲ್ಲಿದೆ.

ಜೀವನ ಶೈಲಿ ಬದಲಾಗಿರುವುದೇ ಹೃದಯಾಘಾತ ಹೆಚ್ಚಳಕ್ಕೆ ಕಾರಣ. ಇದು ಕಳೆದ 15 ವರ್ಷಗಳಲ್ಲಿ ಹೆಚ್ಚಾಗಿದೆ. ಧೂಮಪಾನ ಮದ್ಯಪಾನ ಮಾಡದವರಲ್ಲಿ ಅನುವಂಶೀಯ ಕಾರಣಗಳಿರುತ್ತವೆ. ಹೃದಯಾಘಾತಕ್ಕೊಳಗಾದ ಇಂತಹವರ ಕುಟುಂಬದಲ್ಲಿ ಹೃದಯಾಘಾತವಾದ ಹಿನ್ನಲೆಯಿತ್ತು. 15-20% ಹೃದಯಾಘಾತವಾದ ಯುವಕರಲ್ಲಿ ನಿಖರ ಕಾರಣಗಳಿಲ್ಲ. ಆದರೆ ವಾಯು ಮಾಲಿನ್ಯ, ಮಾನಸಿಕ ಒತ್ತಡ ಕಾರಣದಿಂದ ಹೃದಯಾಘಾತವಾಗಿರುತ್ತದೆ.

ಕುಟುಂಬದಲ್ಲಿ ಹೃದಯಾಘಾತದ ಹಿನ್ನಲೆಯಿದ್ದರೆ 25-30 ರ ಆಸುಪಾಸಿನ ವಯಸ್ಸಿನಲ್ಲಿ ಹೃದಯಕ್ಕೆ ಸಂಬಂಧಿಸಿದ ಪರೀಕ್ಷೆ ನಡೆಸಬೇಕು. ಅಥವಾ ಧೂಮಪಾನ, ಮಧುಮೇಹ ಇದ್ದವರೂ ಸಿಟಿ ಆಂಜಿಯೋಗ್ರಾಮ್ ಮಾಡಿದರೆ ರಕ್ತನಾಳಗಳ ಸ್ಥಿತಿಗತಿ ತಿಳಿಯುತ್ತದೆ.

ಕೆಲವು ಹೃದಯಾಘಾತವಾದ ರೋಗಿಗಳಿಗೆ ಮುನ್ಸೂಚನೆ ಸಿಗುತ್ತದೆ. ನಡೆದಾಗ, ಊಟ ಮಾಡಿದಾಗ, ಹತ್ತುವಾಗ ಎದೆ ಉರಿ ಬಂದರೆ ಹೃದಯದ ರಕ್ತನಾಳಗಳಲ್ಲಿ ಬ್ಲಾಕ್ ಇದೆ ಎಂದರ್ಥ. ಇದುವೇ ಹೃದಯದ ಸಮಸ್ಯೆಯ ಮುನ್ಸೂಚನೆಯಾಗುತ್ತದೆ. ಕೆಲವರಿಗೆ ಹೊಟ್ಟೆಯ ಮೇಲ್ಭಾಗದಲ್ಲಿ ನೋವು ಬಂದು ವಾಂತಿಯಾಗಬಹುದು. ಆದರೆ ಇದನ್ನು ಹಲವರು ಗ್ಯಾಸ್ಟ್ರಿಕ್ ಎಂದು ತಪ್ಪು ತಿಳಿದುಕೊಳ್ಳುತ್ತಾರೆ. ಅಂತಹ ಸಂದರ್ಭದಲ್ಲಿ ಉದಾಸೀನ ಮಾಡದೇ ತಕ್ಷಣವೇ ಪರೀಕ್ಷೆ ಮಾಡಿಸಿಕೊಳ್ಳಬೇಕು ಎಂದಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಕಳ್ಳತನವಾಗಿದ್ದ ನಾಯಿಗಳು ದಾರಿ ಮಧ್ಯೆ ತಪ್ಪಿಸಿಕೊಂಡು 17 ಕಿಮೀ ಪ್ರಯಾಣಿಸಿ ಮನೆ ತಲುಪಿದ್ರು Video

ತನ್ನ ದ್ವಿಚಕ್ರ ವಾಹನದಲ್ಲೇ ಹಕ್ಕಿಯೊಂದು ಮರಿ ಹಾಕಿತೆಂದು ಈ ವ್ಯಕ್ತಿ ಮಾಡಿದ ಕೆಲಸಕ್ಕೆ ನೆಟ್ಟಿಗರು ಫಿದಾ Video

ಐದು ದಿನ ಯುದ್ಧ ಮಾಡಲ್ಲ ಎಂದ ಟ್ರಂಪ್: ಸೋಲಿನ ಹೆದರಿಕೆ ಎಂದು ವ್ಯಂಗಯ ಮಾಡಿದ ಇರಾನ್

ಆಡುತ್ತಾ ರಸ್ತೆಗೇ ಬಂದ ಮಗುವನ್ನು ಹೀರೋನಂತೆ ರಕ್ಷಿಸಿದ ನಾಯಿ Video

Karnataka Weather: ಇಂದಿನ ಹವಾಮಾನ ಎಚ್ಚರಿಕೆ ಬಗ್ಗೆ ತಪ್ಪದೇ ಗಮನಿಸಿ

ಮುಂದಿನ ಸುದ್ದಿ
Show comments