Webdunia - Bharat's app for daily news and videos

Install App

ಹೃದಯದ ಆರೋಗ್ಯಕ್ಕಾಗಿ ದಿನಕ್ಕೆ ಎಷ್ಟು ಹೊತ್ತು ನಡೆಯಬೇಕು: ಡಾ ಸಿಎನ್ ಮಂಜುನಾಥ್ ಟಿಪ್ಸ್

Krishnaveni K
ಶನಿವಾರ, 12 ಜುಲೈ 2025 (10:12 IST)
ಇತ್ತೀಚೆಗೆ ಹೃದಯಾಘಾತದ ಪ್ರಕರಣಗಳು ಹೆಚ್ಚಾಗುತ್ತಿರುವ ಕಾರಣ ಪ್ರತಿಯೊಬ್ಬರೂ ಹೃದಯದ ಆರೋಗ್ಯದ ಕಾಳಜಿ ಮಾಡಲು ಮುಂದಾಗುತ್ತಿದ್ದಾರೆ. ಖ್ಯಾತ ಹೃದ್ರೋಗ ತಜ್ಞ ಡಾ ಸಿಎನ್ ಮಂಜುನಾಥ್ ಪ್ರಕಾರ ದಿನಕ್ಕೆ ನಾವು ಎಷ್ಟು ಹೊತ್ತು ವಾಕಿಂಗ್ ಮಾಡಿದರೆ ಹೃದಯ ಆರೋಗ್ಯವಾಗಿರುತ್ತದೆ ನೋಡಿ.

ಹೃದಯದ ಆರೋಗ್ಯ ಚೆನ್ನಾಗಿರಬೇಕೆಂದರೆ ದೇಹಕ್ಕೂ ಚಟುವಟಿಕೆ ಬೇಕು. ದೈಹಿಕ ಚಟುವಟಿಕೆಗಳು ಸರಾಗವಾಗಿದ್ದರೆ ಹೃದಯಕ್ಕೆ ರಕ್ತ ಪೂರೈಕೆ ಮಾಡುವ ರಕ್ತನಾಳಗಳೂ ಆರೋಗ್ಯವಾಗಿರುತ್ತದೆ. ಅದರಲ್ಲೂ ಹೃದಯದ ಆರೋಗ್ಯಕ್ಕೆ ವ್ಯಾಯಾಮ, ವಾಕಿಂಗ್ ಉತ್ತಮ ಎನ್ನುತ್ತಾರೆ. ಹಾಗಿದ್ದರೆ ದಿನಕ್ಕೆ ಎಷ್ಟುಹೊತ್ತು ವಾಕಿಂಗ್ ಮಾಡಬೇಕು ಎಂದು ತಿಳಿದುಕೊಳ್ಳುವುದೂ ಅಷ್ಟೇ ಮುಖ್ಯ.

ಡಾ ಸಿಎನ್ ಮಂಜುನಾಥ್ ಹೇಳುವ ಪ್ರಕಾರ ಹೃದಯದ ಆರೋಗ್ಯ ಚೆನ್ನಾಗಿರಬೇಕೆಂದರೆ ನಾವು ದಿನಕ್ಕೆ 45 ನಿಮಿಷ ವಾಕಿಂಗ್ ಮಾಡಬೇಕು. ಪ್ರತಿನಿತ್ಯ 45 ನಿಮಿಷಗಳಷ್ಟು ವಾಕಿಂಗ್ ಮಾಡುವುದರಿಂದ ಹೃದಯದ ಆರೋಗ್ಯ ಚೆನ್ನಾಗಿರುತ್ತದೆ. ಹೃದಯ ನಮಗೆ ಹೇಳುತ್ತದಂತೆ. ನೀನು ನನಗಾಗಿ ಚಲಿಸು, ನಾನು ನಿನಗಾಗಿ ನಿರಂತರವಾಗಿ ಚಲಿಸುತ್ತೇನೆ.

ನಡೆಯಲು ಯಾವ ಹೊತ್ತಾದರೂ ತೊಂದರೆಯಿಲ್ಲ. ಬೆಳಿಗ್ಗೆಯೇ ವಾಕಿಂಗ್ ಮಾಡಬೇಕೆಂದೇನಿಲ್ಲ. ಪರಿಸರದಲ್ಲಿ ಆರು ಜನ ವೈದ್ಯರಿದ್ದಾರೆ. ಮೊದಲನೆಯವನು ಸೂರ್ಯ. ಅವನ ಕಿರಣ ಬಿದ್ದರೆ ವಿಟಮಿನ್ ಡಿ ಬರುತ್ತದೆ. ಎರಡನೆಯದ್ದು ಆಹಾರ. ಮೂರನೆಯದ್ದು ವಿಶ್ರಾಂತಿ. ನಾಲ್ಕನೆಯದ್ದು ಸ್ನೇಹ. ಐದನೆಯದ್ದು ಆತ್ಮಸ್ಥೈರ್ಯ, ಇದುವೇ ಜೀವ ರಕ್ಷಕ. ಆರನೆಯದ್ದು ನಗು. ಇದು ಯೂನಿವರ್ಸಲ್ ಭಾಷೆ. ಇದೆಲ್ಲವೂ ಉಚಿತವಾದುದು. ಇದನ್ನು ಪಾಲಿಸಿಕೊಂಡು ಬಂದರೆ ಆರೋಗ್ಯ ಚೆನ್ನಾಗಿರುತ್ತದೆ ಎಂದು ಹಲವು ಸಮಯದ ಹಿಂದೆಯೇ ಡಾ ಸಿಎನ್ ಮಂಜುನಾಥ್ ಹೇಳಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

2029 ರಲ್ಲಿ ಕೇಂದ್ರದಲ್ಲಿ ನಾವು ಬಂದಾಗ ಬಿಜೆಪಿಯವರನ್ನು ತಿಹಾರ್ ಜೈಲಿಗೆ ಹಾಕ್ತೀವಿ: ಪ್ರದೀಪ್ ಈಶ್ವರ್

ಸಂವಿಧಾನಕ್ಕೆ ಅಪಚಾರ ಮಾಡಿದ ಪಕ್ಷ ಎಂದರೆ ಕಾಂಗ್ರೆಸ್: ಛಲವಾದಿ ನಾರಾಯಣಸ್ವಾಮಿ

5 ವರ್ಷ ನಾನೇ ಸಿಎಂ ಎಂದ ಸಿದ್ದರಾಮಯ್ಯ: ಲೈಫ್ ಟೈಂ ನಾನೇ ಎನ್ನಿ ಎಂದ ಡಿಕೆಶಿ ಫ್ಯಾನ್ಸ್

ರಾಹುಲ್ ಗಾಂಧಿ ಭೇಟಿಗೆ ಮುನ್ನ ನಾನೇ ಸಿಎಂ ಎಂದು ಘರ್ಜಿಸಿದ ಸಿದ್ದರಾಮಯ್ಯ

ಆ್ಯಪ್ ಮೂಲಕ ಆನ್‌-ಡಿಮ್ಯಾಂಡ್ ಇಂಟ್ರಾಸಿಟಿ ಶಿಪ್ಪಿಂಗ್ ಸೇವೆ ಆರಂಭಿಸಿದ ಡೆಲಿವರಿ

ಮುಂದಿನ ಸುದ್ದಿ
Show comments