Webdunia - Bharat's app for daily news and videos

Install App

ಹೃದಯಾಘಾತದ ನೋವು, ಗ್ಯಾಸ್ಟ್ರಿಕ್ ನೋವಿಗಿರುವುದು ಇದೊಂದೇ ಸಣ್ಣ ಅಂತರ: ಡಾ ಸಿಎನ್ ಮಂಜುನಾಥ್ ಟಿಪ್ಸ್

Krishnaveni K
ಮಂಗಳವಾರ, 14 ಅಕ್ಟೋಬರ್ 2025 (12:18 IST)
ಹೃದಯಾಘಾತವಾಗುವಾಗ ಎಷ್ಟೋ ಜನಕ್ಕೆ ಎದೆಯಲ್ಲಿ ನೋವೇ ಆಗಲ್ಲ. ಹೊಟ್ಟೆಯ ಮೇಲ್ಭಾಗದಲ್ಲಿ ನೋವು ಬರೋದೂ ಇದೆ ಎಂದು ಖ್ಯಾತ ಹೃದ್ರೋಗ ತಜ್ಞ ಡಾ ಸಿಎನ್ ಮಂಜುನಾಥ್ ಸಂವಾದವೊಂದರಲ್ಲಿ ಹೇಳಿದ್ದರು.

ಹೃದಯಾಘಾತವಾಗುವಾಗ ಎದೆಯಲ್ಲಿ ನೋವಾಗುತ್ತದೆ ಎಂದು ಅನೇಕರು ಅಂದುಕೊಂಡಿದ್ದಾರೆ. ಕೆಲವರಿಗೆ ಇದು ನಿಜವಿರಬಹುದು. ಆದರೆ ಎದೆನೋವಾಗುವುದೊಂದೇ ಹೃದಯಾಘಾತದ ಲಕ್ಷಣವಲ್ಲ ಎನ್ನುವುದು ಡಾ ಸಿಎನ್ ಮಂಜುನಾಥ್ ಅವರ ಅಭಿಪ್ರಾಯ.

ಎಷ್ಟೋ ಜನಕ್ಕೆ ಹೊಟ್ಟೆಯ ಮೇಲ್ಭಾಗದಲ್ಲಿ ನೋವು ಬಂದು ವಾಂತಿಯಾಗಿ ಗ್ಯಾಸ್ಟ್ರಿಕ್ ಇರಬಹುದು ಎಂದು ತಪ್ಪು ತಿಳಿದುಕೊಂಡು ಅದಕ್ಕೆ ಮಾತ್ರೆ ನುಂಗಿ ಪ್ರಾಣ ಕಳೆದುಕೊಂಡವರಿದ್ದಾರೆ. ಇನ್ನು ಕೆಲವರಿಗೆ ದವಡೆಯಲ್ಲಿ ನೋವು ಬರಬಹುದು. ಆದರೆ ಹಲ್ಲು ನೋವು ಎಂದು ತಪ್ಪಾಗಿ ತಿಳಿದುಕೊಂಡು ಪ್ರಾಣಕ್ಕೆ ತೊಂದರೆ ತಂದುಕೊಂಡವರೂ ಇದ್ದಾರೆ.

ಇನ್ನು ಕೆಲವರಿಗೆ ಗಂಟಲು ನೋವು ಬರುವುದೂ ಇದೆ. ಕೆಲವರಿಗೆ ಊಟ ಮಾಡಿದ ಬಳಿಕ ನಡೆಯುವಾಗ, ಹತ್ತುವಾಗ, ಇಳಿಯುವಾಗ ಎದೆ ಉರಿ ಬಂದರೆ, ಎಡಕೈ, ಭುಜದ ಭಾಗ ನೋವು ಬಂದರೆ ಹೃದಯಾಘಾತದ ಲಕ್ಷಣವಿರಬಹುದು. ಆದರೆ ಕೆಲವರು ನನಗೆ ಕೂತಿದ್ದಾಗ ನೋವು ಬರುತ್ತದೆ. ಆದರೆ ಎದ್ದು ಓಡಾಡುವಾಗ ಆರಾಮವಾಗಿರುತ್ತದೆ ಎನ್ನುತ್ತಾರೆ. ಹೀಗಿದ್ದಾಗ ಅದು ಹೃದಯದ ಸಮಸ್ಯೆಯಲ್ಲ. ಹೀಗಾಗಿ ಇದರ ವ್ಯತ್ಯಾಸವನ್ನು ನೀವು ಗುರುತಿಸಿ ಚಿಕಿತ್ಸೆ ಪಡೆದುಕೊಂಡರೆ ಪ್ರಾಣ ಕಾಪಾಡಬಹುದು ಎಂಬುದು ಅವರ ಅಭಿಪ್ರಾಯವಾಗಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಅಪಾರ್ಟ್‌ಮೆಂಟ್‌ಗಳ ಮಾಲೀಕರಿಗೆ ಶುಭ ಸುದ್ದಿ: ವಿಧಾನಸಭೆಯಲ್ಲಿ ಅಂಗೀಕಾರವಾಯಿತು ಮಹತ್ವದ ಮಸೂದೆ

ಆತ್ಮಹತ್ಯೆ ಮಾಡಲು ಹೊರಟಿದ್ದ ಮಗನನ್ನು ಹಿಡಿಯಲು ಹೋಗಿ ತಂದೆ, ತಾಯಿಯೂ ಬೆಟ್ಟದಿಂದ ಬಿದ್ದು ಸಾವು: ಧಾರುಣ ಘಟನೆ Video ವೈರಲ್

ಕರ್ನಾಟಕ ಶಿಕ್ಷಣ ಕ್ಷೇತ್ರದಲ್ಲಿ ಬದಲಾವಣೆಗೆ ಕರ್ನಾಟಕ ಸರ್ಕಾರದ ಹೊಸ ಹೆಜ್ಜೆ: 500 ಸರ್ಕಾರಿ ಶಾಲೆಗಳಿಗೆ ಅಭಿವೃದ್ಧಿ ಭಾಗ್ಯ

ಬಿಜೆಪಿ, ಜೆಡಿಎಸ್‌ ಹೋರಾಟದ ನಡುವೆಯೇ ನಾಗೇಂದ್ರಕ್ಕೆ ಮತ್ತೊಂದು ಖಾತೆ ಹಂಚಿದ ಮುಖ್ಯಮಂತ್ರಿ ಡಿಕೆಶಿ

ಸಚಿವ ನಾಗೇಂದ್ರ ರಾಜೀನಾಮೆಗೆ ವಿಪಕ್ಷಗಳ ಬಿಗಿಪಟ್ಟು: ವಿಧಾನಸಭೆಯ ಐದನೇ ದಿನದ ಕಲಾಪ ಬಲಿ

ಮುಂದಿನ ಸುದ್ದಿ
Show comments