ಸಕ್ಕರೆ ಖಾಯಿಲೆ ದೂರ ಮಾಡಲು ಈ ಮೂರು ಅಭ್ಯಾಸ ಸಾಕು ಎನ್ನುತ್ತಾರೆ ಡಾ ಸಿಎನ್ ಮಂಜುನಾಥ್

Krishnaveni K
ಸೋಮವಾರ, 11 ಆಗಸ್ಟ್ 2025 (10:10 IST)
ಸಕ್ಕರೆ ಖಾಯಿಲೆ ತಡೆಯಲು ಏನು ಮಾಡಬೇಕು ಎಂದು ಎಲ್ಲರಿಗೂ ಪ್ರಶ್ನೆಯಿದೆ. ಇದಕ್ಕೆ ಖ್ಯಾತ ಹೃದ್ರೋಗ ತಜ್ಞ ಡಾ ಸಿಎನ್ ಮಂಜುನಾಥ್ ಹಿಂದೊಮ್ಮೆ ಸಂವಾದ ಕಾರ್ಯಕ್ರಮದಲ್ಲಿ ಅತ್ಯುತ್ತಮ ಸಲಹೆ ನೀಡಿದ್ದಾರೆ. ಅವರು ಮೂರು ಅಭ್ಯಾಸಗಳಿದ್ದರೆ ಔಷಧವಿಲ್ಲದೇ ಸಕ್ಕರೆ ಖಾಯಿಲೆ ದೂರ ಮಾಡಬಹುದು ಎಂದಿದ್ದಾರೆ. ಅವುಗಳು ಯಾವುವು ನೋಡಿ.

ಡಾ ಸಿಎನ್ ಮಂಜುನಾಥ್ ಅವರ ಪ್ರಕಾರ, ಸಕ್ಕರೆ ಖಾಯಿಲೆ ಇರುವವರ ಸಂಖ್ಯೆ 7 ಕೋಟಿಗೂ ಅಧಿಕ. ಸಕ್ಕರೆ ಖಾಯಿಲೆಯ ಗಡಿಯಲ್ಲಿರುವವರ ಸಂಖ್ಯೆಯೂ ಇಷ್ಟೇ ಇದೆ. ಹೀಗಾಗಿ ಸಕ್ಕರೆ ಖಾಯಿಲೆ ಬರದಂತೆ ನಾವು ತಡೆಯಬೇಕಾಗಿರುವುದು ತುಂಬಾ ಮುಖ್ಯ.

ನಾವು ಸಾಮಾನ್ಯವಾಗಿ ಔಷಧಿ ಎಂದರೆ ವೈದ್ಯರ ಬಳಿ ಹೋಗಿ ಬಾಟಲಿಯಲ್ಲಿ ಸಿಗುವುದೇ ಔಷಧಿ ಎಂದುಕೊಳ್ಳುತ್ತೇವೆ. ಯಾವುದಾದರೂ ಖಾಯಿಲೆ ಬಂದಾಗ ವೈದ್ಯರು ಔಷಧಿ ಕೊಡುತ್ತಾರೆ. ಆದರೆ ಅದು ನಿಜವಾದ ಔಷಧಿಯಲ್ಲ. ಖಾಯಿಲೆ ಬರದಂತೆ ನಾವು ನೋಡಿಕೊಳ್ಳುವುದು ಮತ್ತು ಅಂತಹ ಜೀವನ ಶೈಲಿ ರೂಢಿಸಿಕೊಳ್ಳುವುದೇ ನಿಜವಾದ ಔಷಧಿ.

ವಿಶೇಷವಾಗಿ ಸಕ್ಕರೆ ಖಾಯಿಲೆ ಬರದಂತೆ ನಮ್ಮ ಜೀವನ ಶೈಲಿ ಬದಲಾಯಿಸಿಕೊಳ್ಳುವುದು ತುಂಬಾ ಮುಖ್ಯ. ಸಕ್ಕರೆ ಖಾಯಿಲೆ ಬರದಂತೆ ತಡೆಯಬೇಕೆಂದರೆ ಮುಖ್ಯವಾಗಿ ಮೂರು ಅಭ್ಯಾಸಗಳನ್ನು ರೂಢಿಸಿಕೊಳ್ಳಬೇಕು. ಮೊದಲನೆಯದಾಗಿ ವಾಕಿಂಗ್. ಪ್ರತಿನಿತ್ಯ ನಿಯಮಿತವಾಗಿ ಒಂದಷ್ಟು ಹೊತ್ತು ವಾಕಿಂಗ್ ಮಾಡುವುದು ಸಕ್ಕರೆ ಖಾಯಿಲೆಯನ್ನು ದೂರ ಮಾಡುತ್ತದೆ. ಎರಡನೆಯದ್ದು ಸುಖವಾದ ನಿದ್ರೆ. ಆರೋಗ್ಯಕರವಾದ ನಿದ್ರೆ ಯಾವುದೇ ಖಾಯಿಲೆಯನ್ನು ದೂರ ಮಾಡಬಹುದು. ಮೂರನೆಯದ್ದು ಉಪವಾಸ. ಅಪರೂಪಕ್ಕೆ ವಾರಕ್ಕೆ ಒಮ್ಮೆ ಅಥವಾ ಎರಡು ಬಾರಿ ಊಟ ಬಿಡುವುದು ಆರೋಗ್ಯಕ್ಕೆ ಉತ್ತಮ. ಈ ಮೂರು ಅಭ್ಯಾಸಗಳಿಂದ ಸಕ್ಕರೆ ಖಾಯಿಲೆ ದೂರಮಾಡಬಹುದು ಎನ್ನುತ್ತಾರೆ ಡಾ ಸಿನ್ ಮಂಜುನಾಥ್.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಹಿ.ಪ್ರದೇಶ: ಕಂದಕಕ್ಕೆ ಉರುಳಿದ ಖಾಸಗಿ ಬಸ್‌, 9 ಮಂದಿ ಸಾವು, 40ಮಂದಿಗೆ ಗಾಯ

ಮಮತಾ ಬ್ಯಾನರ್ಜಿ ಹೆಣ್ಣು ಹುಲಿ, ಶರಣಾಗಲ್ಲ: ಮೆಹಬೂಬಾ ಮುಫ್ತಿ

ಆತ್ಮಹತ್ಯೆಗೆ ಶರಣಾದ ಡೆಂಟಲ್ ವಿದ್ಯಾರ್ಥಿನಿ, ಇದೇ ಕಾರಣಕ್ಕೆ ಪ್ರಾಣ ಕಳೆದುಕೊಂಡ್ಳ ಯುವತಿ

ಈ ವಿಚಾರಕ್ಕೆ ಪ್ರಹ್ಲಾದ್ ಜೋಶಿ ಮೊದಲು ಪ್ರತಿಕ್ರಿಯಿಸಲಿ: ದಿನೇಶ್ ಗುಂಡೂರಾವ್‌

ಪುಣೆ ಮಹಾನಗರ ಪಾಲಿಕೆ ಚುನಾವಣೆ: ಭರ್ಜರಿ ಪ್ರಚಾರ ನಡೆಸಿದ ಡಿಸಿಎಂ ಏಕನಾಥ್ ಶಿಂಧೆ

ಮುಂದಿನ ಸುದ್ದಿ
Show comments