Select Your Language

Notifications

webdunia
webdunia
webdunia
webdunia

ಕಂದಕಕ್ಕೆ ಉರುಳಿದ ಬಸ್: 20ಕ್ಕೂ ಹೆಚ್ಚು ಪ್ರಯಾಣಿಕರ ಧಾರುಣ ಸಾವು

ಹಿಮಾಚಲ ಪ್ರದೇಶ
ಶೀಮ್ಲಾ , ಗುರುವಾರ, 20 ಜುಲೈ 2017 (11:23 IST)
ಶೀಮ್ಲಾ: ಖಾಸಗಿ ಬಸ್ ವೊಂದು ಚಾಲಕನ ನಿಯಂತ್ರನ ತಪ್ಪಿ ಕಂದಕಕ್ಕೆ ಉರುಳಿ ಬಿದ್ದ ಪರಿಣಾಮ 20 ಕ್ಕೂ ಹೆಚ್ಚು ಪ್ರಯಾಣಿಕರು ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿರುವ ಘಟನೆ ಹಿಮಾಚಲ ಪ್ರದೇಶದ ಖಾನೆತ್ರಿ ಬಳಿ ಸಂಭವಿಸಿದೆ.
 
ಶಿಮ್ಲಾದಿಂದ 125 ಕಿ.ಮೀ ದೂರವಿರುವ ಖಾನೆತ್ರಿ ಬಳಿ ಬಸ್‌ ಚಾಲಕನ ನಿಯಂತ್ರಣ ತಪ್ಪಿ ಕಂದಕಕ್ಕೆ ಬಿದ್ದು ಈ ದುರ್ಘಟನೆ ಸಂಭವಿಸಿದೆ. ಬಸ್ ಕಿನ್ನೌರನಿಂದ ಸೋಲಾನ್‌ಗೆ ತೆರಳುತಿತ್ತು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
 
ರಾಂಪುರ್‌ ಜಿಲ್ಲಾ ಉಪ ವಿಭಾಗೀಯ ನೇತೃತ್ವದ ರಕ್ಷಣಾ ತಂಡ ಸ್ಥಳಕ್ಕೆ ಧಾವಿಸಿದ್ದು, ರಕ್ಷಣಾ ಕಾರ್ಯ ಕೈಗೊಂಡಿದೆ. ಅಲ್ಲದೇ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲಾಗುತ್ತಿದೆ.
 

Share this Story:

Follow Webdunia kannada

ಮುಂದಿನ ಸುದ್ದಿ

ಭಾರತ ಸೇನೆ ಹಿಂಪಡೆಯದಿದ್ದರೆ ಸೆರೆ, ಇಲ್ಲವೆ ಕೊಲೆ: ಚೀನಾ ಮಾಜಿ ರಾಯಾಭಾರಿ ಧಮಕಿ