Select Your Language

Notifications

webdunia
webdunia
webdunia
webdunia

ಜಹೀರ್ ಖಾನ್, ರಾಹುಲ್ ದ್ರಾವಿಡ್ ಗೆ ಅವಮಾನ

ಜಹೀರ್ ಖಾನ್, ರಾಹುಲ್ ದ್ರಾವಿಡ್ ಗೆ ಅವಮಾನ
Mumbai , ಸೋಮವಾರ, 17 ಜುಲೈ 2017 (09:12 IST)
ಮುಂಬೈ: ಬಿಸಿಸಿಐನಲ್ಲಿ ಇತ್ತೀಚೆಗೆ ಕ್ರಿಕೆಟ್ ನ ನೈಜ ಸಾಧಕರಿಗೆ ಅವಮಾನವಾಗುತ್ತಿದೆ ಎಂದು ಬಿಸಿಸಿಐ ಆಡಳಿತ ಮಂಡಳಿಗೆ ರಾಜೀನಾಮೆ ನೀಡಿದ ರಾಮಚಂದ್ರ ಗುಹಾ ಆರೋಪಿಸಿದ್ದಾರೆ.


ಇತ್ತೀಚೆಗೆ ಕೋಚ್ ಸ್ಥಾನದಿಂದ ಅನಿಲ್ ಕುಂಬ್ಳೆಯನ್ನು ಕಿತ್ತೊಗೆಯುವುದನ್ನು ವಿರೋಧಿಸಿದ್ದ ಗುಹಾ ಇದೀಗ ಜಹೀರ್ ಖಾನ್ ಮತ್ತು ದ್ರಾವಿಡ್ ರನ್ನು ಕೋಚ್ ಗಳಾಗಿ ಆಯ್ಕೆ ಮಾಡಿ ನಂತರ ಸಲಹೆಗಾರರು ಎಂದು ಅವಾಮಾನ ಮಾಡುತ್ತಿರುವುದರ ವಿರುದ್ಧ ಕಿಡಿಕಾರಿದ್ದಾರೆ.

ಮಾಜಿ ಕ್ರಿಕೆಟಿಗ ಅನಿಲ್ ಕುಂಬ್ಳೆಯನ್ನು ಕೆಟ್ಟದಾಗಿ ನಡೆಸಿಕೊಳ್ಳಲಾಯಿತು. ಇದೀಗ ದ್ರಾವಿಡ್ ಹಾಗೂ ಜಹೀರ್ ರನ್ನೂ ಅವಮಾನ ಮಾಡಲಾಗುತ್ತಿದೆ ಎಂದು ಅವರು ಕಿಡಿ ಕಾರಿದ್ದಾರೆ. ಒಮ್ಮೆ ಕೋಚ್ ಎಂದು ಆಯ್ಕೆ ಮಾಡಿ ನಂತರ ಸಲಹೆಗಾರರು ಎಂದು ಮೂಲೆಗುಂಪು ಮಾಡಿರುವುದರ ವಿರುದ್ಧ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ವಿವಿಎಸ್ ಲಕ್ಷ್ಮಣ್,  ಗಂಗೂಲಿ ಮತ್ತು ಸಚಿನ್ ನೇತೃತ್ವದ ಸಮಿತಿ ತನ್ನ ಅಧಿಕಾರ ಮೀರಿ ನಡೆದಿದೆ ಎಂದು ಅವರು ಆರೋಪಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ರವಿ ಶಾಸ್ತ್ರಿ ಸಂಬಳ ಕೇಳಿದರೆ ಶಾಕ್ ಆಗುತ್ತೀರಿ!