Select Your Language

Notifications

webdunia
webdunia
webdunia
webdunia

ಬೇಜವಬ್ದಾರಿಯುತ ವರದಿಗೆ ಕ್ರಿಕೆಟಿಗನ ಐಪಿಎಲ್ ಭವಿಷ್ಯವೇ ಹಾಳಾಯ್ತು

ಬೇಜವಬ್ದಾರಿಯುತ ವರದಿಗೆ ಕ್ರಿಕೆಟಿಗನ ಐಪಿಎಲ್ ಭವಿಷ್ಯವೇ ಹಾಳಾಯ್ತು
Mumbai , ಶುಕ್ರವಾರ, 24 ಫೆಬ್ರವರಿ 2017 (08:54 IST)
ಮುಂಬೈ: ಹರ್ಪ್ರೀತ್ ಸಿಂಗ್-ಹರ್ಮೀತ್ ಸಿಂಗ್… ಹೆಸರಿನ ನಡುವೆ ಒಂದು ಅಕ್ಷರ ಮಾತ್ರ ವ್ಯತ್ಯಾಸ. ಹಾಗಾಗಿ ಎಡವಟ್ಟು ಆಗೋದು ಸಹಜ. ಆದರೆ ಇಂತಹದ್ದೊಂದು ಎಡವಟ್ಟಿನಿಂದ ಕ್ರಿಕೆಟಿಗನ ಐಪಿಎಲ್ ಭವಿಷ್ಯವೇ ಹಾಳಾಯ್ತು.


ಎಲ್ಲಾ ಸರಿಯಾಗಿದ್ದರೆ, ಹರ್ಪ್ರೀತ್ ಸಿಂಗ್ ಭಾಟಿಯಾ ಎಂಬ ಈತ ಈಗ ಮುಂಬೈ ಇಂಡಿಯನ್ಸ್ ತಂಡಕ್ಕೆ ಉತ್ತಮ ಮೊತ್ತಕ್ಕೆ ಹರಾಜಾಗಬೇಕಿತ್ತು. ಆದರೆ ಐಪಿಎಲ್ ಹರಾಜು ಸಂದರ್ಭದಲ್ಲೇ ಭಾರತ ಎ ತಂಡದ ಇನ್ನೊಬ್ಬ ಕ್ರಿಕೆಟಿಗ ಹರ್ಮೀತ್ ಸಿಂಗ್ ರೈಲ್ವೇ ಫ್ಲ್ಯಾಟ್ ಫಾರಂ ಮೇಲೆ ಕಾರು ಓಡಿಸಿ ಪೊಲೀಸರಿಗೆ ಸಿಕ್ಕಿಬಿದ್ದಿದ್ದ.

ಪ್ರಕರಣದ ಕುರಿತು ವರದಿ ಮಾಡುವಾಗ ಕೆಲವು ಮಾಧ್ಯಮಗಳು ಆತನ ಹೆಸರನ್ನು ಹರ್ಮೀರ್ ಬದಲಿಗೆ ಹರ್ಪ್ರೀತ್ ಎಂದು ಬರೆದಿದ್ದವು. ಇದು ಅಮಾಯಕ ಕ್ರಿಕೆಟಿಗನ ಭವಿಷ್ಯ ಹಾಳು ಮಾಡಿತು. ಆತನನ್ನು ಖರೀದಿಸಲು ಮುಂದಾಗಿದ್ದ ಮುಂಬೈ ಇಂಡಿಯನ್ಸ್ ತಂಡ ಅಪರಾಧದ ಸುದ್ದಿ ಓದಿ ಈತನೇ ಆತ ಎಂದು ತಪ್ಪಾಗಿ ತಿಳಿದು ಖರೀದಿಸಲೇ ಇಲ್ಲ.

ಹೀಗಾಗಿ ಐಪಿಎಲ್ ನಲ್ಲಿ ಭಾಗವಹಿಸಲು ಯುವ ಕ್ರಿಕೆಟಿಗನ ಆಸೆ ಕಮರಿ ಹೋಯ್ತು. ವಿಷಯ ತಿಳಿದ ನಂತರ ಮುಂಬೈ ಇಂಡಿಯನ್ಸ್ ತಂಡ ತಾನೇ ಬೇಸರಪಟ್ಟುಕೊಂಡಿತು. ಆದರೇನಂತೆ, ಅಷ್ಟರಲ್ಲಿ ಕಾಲ ಮಿಂಚಿ ಹೋಗಿತ್ತು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ರೈಲು ಯಾನದಲ್ಲಿ ಧೋನಿ ಹೇಗೆ ಕಾಲ ಕಳೆದರು ಗೊತ್ತಾ?