ಚಂಡೀಘಢ: ಪುತ್ರ ಕ್ರಿಕೆಟಿಗ ಯುವರಾಜ್ ಸಿಂಗ್ ಊರವರನ್ನೆಲ್ಲಾ ಬರಮಾಡಿಕೊಂಡು ಅಷ್ಟೊಂದು ಅದ್ಧೂರಿಯಾಗಿ ವಿವಾಹವಾದರೂ, ಅಪ್ಪ ಯೋಗರಾಜ್ ಸಿಂಗ್ ಮಾತ್ರ ನಾನು ಮದುವೆಗೆ ಬರಲ್ಲ. ನಂಗೆ ಧರ್ಮಗುರುಗಳ ಮೇಲೆ ನಂಬಿಕೆಯಿಲ್ಲ ಎಂದು ದೂರವೇ ಉಳಿದಿದ್ದರು. ಆದರೆ ಮದುವೆಗೆ ಬರದಿರುವುದಕ್ಕೆ ಅಸಲಿ ಕಾರಣ ಇದಲ್ಲವಂತೆ!
ಯಾವಾಗಲೂ ಧರ್ಮಗುರುವಿನ ಬಗ್ಗೆ ಹಿಗ್ಗಾಮುಗ್ಗಾ ಟೀಕಿಸುವ ಯೋಗರಾಜ್ ಸಿಂಗ್ ಮದುವೆಗೆ ಬರುವುದು ಸ್ವತಃ ಯುವರಾಜ್ ಅಮ್ಮನ ಮೆಚ್ಚಿನ ಧರ್ಮಗುರುವಾದ ಬಾಬಾಜಿಗೆ ಇಷ್ಟವಿರಲಿಲ್ಲವಂತೆ. ಯುವರಾಜ್ ಸಿಂಗ್ ಸಹೋದರನ ಮಾಜಿ ಪತ್ನಿಯ ಪ್ರಕಾರ ಇದೇ ಬಾಬಾಜೀ ಕೈಯಲ್ಲಿ ಯುವಿ ಕುಟುಂಬದ ಸೂತ್ರವಿದೆಯಂತೆ. ಹೀಗಾಗಿ ಬಾಬಾಜೀ ಹೇಳಿದ ಕಾರಣ ಯೋಗರಾಜ್ ರನ್ನು ಮದುವೆಯಿಂದ ದೂರವಿಡಲಾಗಿತ್ತಂತೆ.
ಇದೂ ಅಲ್ಲದೆ ತನ್ನ ಮಕ್ಕಳು ಅಪ್ಪನನ್ನು ಭೇಟಿಯಾಗುವುದು ಅಮ್ಮ ಶಬನಮ್ ಗೂ ಇಷ್ಟವಿರಲಿಲ್ಲವಂತೆ. ಈ ಎಲ್ಲಾ ಕಾರಣಕ್ಕೆ ಯೋಗರಾಜ್ ಗೆ ಮದುವೆ ಆಹ್ವಾನವನ್ನೇ ಕೊಟ್ಟಿರಲಿಲ್ಲವಂತೆ!
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ