Select Your Language

Notifications

webdunia
webdunia
webdunia
webdunia

ಮದುವೆಗೆ ಬಂದವರಂತೆ ಈ ಆಸ್ಪತ್ರೆಗೆ ಜನ ಬಂದಿದ್ದೇಕೆ?

ಮದುವೆಗೆ ಬಂದವರಂತೆ ಈ ಆಸ್ಪತ್ರೆಗೆ ಜನ ಬಂದಿದ್ದೇಕೆ?
Ranchi , ಶನಿವಾರ, 18 ಮಾರ್ಚ್ 2017 (08:53 IST)
ರಾಂಚಿ: ಆ ಆಸ್ಪತ್ರೆ ಮುಂದೆ ನಿನ್ನೆ ಜನವೋ ಜನ. ಮದುವೆ ಮನೆಗೆ ಬಂದ ಹಾಗೆ ಜನ ಬಂದಿದ್ದು ನೋಡಿ ಆಸ್ಪತ್ರೆಯವರಿಗೂ ಫುಲ್ ಗಾಬರಿ. ಆದರೆ ಇವರೆಲ್ಲಾ ರೋಗಿಗಳೂ ಅಲ್ಲ. ಹಾಗಿದ್ದರೂ ಅಲ್ಲಿಗೆ ಜನ ಬಂದಿದ್ದೇಕೆ?

 

ಕಾರಣ, ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ.ರಾಂಚಿ ಟೆಸ್ಟ್ ಪಂದ್ಯದ ವೇಳೆ ಭುಜಕ್ಕೆ ಗಾಯ ಮಾಡಿಕೊಂಡಿದ್ದ ಕೊಹ್ಲಿ ಹೆಚ್ಚಿನ ವೈದ್ಯಕೀಯ ಪರೀಕ್ಷೆಗಾಗಿ ಸ್ಥಳೀಯ ಆಸ್ಪತ್ರೆಗೆ ಬಂದಿದ್ದರು. ಈ ವೇಳೆ  ತಮ್ಮ ನೆಚ್ಚಿನ ತಾರೆಯನ್ನು ನೋಡಲು ಆಸ್ಪತ್ರೆ ಮುಂದೆ ಜನ ಜಮಾಯಿಸಿದ್ದರು.

 
ಕೊಹ್ಲಿ ಬರುತ್ತಿದ್ದಾರೆಂಬ ಸುದ್ದಿ ಹರಡುತ್ತಿದ್ದಂತೆ ಆಸ್ಪತ್ರೆಗೆ ಜನ ಸಾಗರವೇ ಹರಿದು ಬಂದಿತ್ತು. ಭುಜದ ಸ್ಕ್ಯಾನಿಂಗ್ ಮಾಡಿಸಿಕೊಂಡ ಕೊಹ್ಲಿ ಗಾಯ ಗಂಭೀರವಲ್ಲ ಎಂದು ವರದಿ ಬಂದಿದೆ.

 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಅರ್ಧಶತಕವೊಂದೇ ಸಾಕೆನಗೆ ಎಂದ ಕೆಎಲ್ ರಾಹುಲ್ ! ಟೀಂ ಇಂಡಿಯಾ 120/1