Webdunia - Bharat's app for daily news and videos

Install App

ಟೀಂ ಇಂಡಿಯಾಕ್ಕೆ ಈಗ ಯಾವ ವಿಕೆಟ್ ಕೀಪರ್ ಹಿತವರು?

Webdunia
ಶುಕ್ರವಾರ, 30 ಡಿಸೆಂಬರ್ 2016 (07:50 IST)
ಮುಂಬೈ: ಟೀಂ ಇಂಡಿಯಾದಲ್ಲಿ ಈಗ ಹೇಗಾಗಿದೆಯೆಂದರೆ, ಒಬ್ಬ ಹೊರ ಹೋದರೆ ಇನ್ನೊಬ್ಬ ಪ್ರತಿಭಾವಂತ ತಂಡಕ್ಕೆ ಕಾಲಿಡುತ್ತಾರೆ. ಉತ್ತಮ ಪ್ರದರ್ಶನ ನೀಡಿ ಆಯ್ಕೆಗಾರರಿಗೆ ತಲೆ ನೋವು ತಂದಿಡುತ್ತಾರೆ. ಈಗ ಟೆಸ್ಟ್ ತಂಡದ ವಿಕೆಟ್ ಕೀಪರ್ ವಿಷಯದಲ್ಲೂ ಇದೇ ಆಗಿದೆ.


ಇಂಗ್ಲೆಂಡ್ ವಿರುದ್ಧದ ಎರಡನೇ ಟೆಸ್ಟ್ ನಲ್ಲಿ ಗಾಯಗೊಂಡು ವೃದ್ಧಿಮಾನ್ ಸಹಾ ಹೊರ ಹೋಗುತ್ತಿದ್ದಂತೆ ಅವರ ಜಾಗಕ್ಕೆ ವಿಕೆಟ್ ಕೀಪರ್ ಆಗಿ ಹಲವು ವರ್ಷಗಳ ನಂತರ ಪಾರ್ಥಿವ್ ಪಟೇಲ್ ತಂಡಕ್ಕೆ ಮರಳಿದರು. ಸಿಕ್ಕಿದ್ದೇ ಚಾನ್ಸ್ ಅಂತ ಪಾರ್ಥಿವ್ ಬ್ಯಾಟಿಂಗ್ ನಲ್ಲೂ ಮಿಂಚಿದರು.

ಇದೇ ಈಗ ಆಯ್ಕೆಗಾರರ ತಲೆನೋವಿಗೆ ಕಾರಣವಾಗಿರುವುದು. ಮುಂದಿನ ಸರಣಿಗೆ ಸಹಾ ಚೇತರಿಸಿಕೊಳ್ಳುತ್ತಾರೆ. ಅವರನ್ನು ಆಯ್ಕೆ ಮಾಡಿದರೆ, ಉತ್ತಮವಾಗಿ ಆಡಿದ ಹಿರಿಯ ಪಾರ್ಥಿವ್ ಗೆ ಅನ್ಯಾಯವಾದಂತೆ. ಅತ್ತ ದರಿ ಇತ್ತ ಪುಲಿ ಸ್ಥಿತಿ.

ಆದರೆ ಪಾರ್ಥಿವ್ ಪ್ರದರ್ಶನದಿಂದ ತನಗೆ ಚಿಂತೆಯಾಗಿಲ್ಲ ಎಂದು ಸಹಾ ಹೇಳಿಕೊಂಡಿದ್ದಾರೆ. “ಪಾರ್ಥಿವ್ ಜತೆ ಸ್ಪರ್ಧೆ ಏನಿಲ್ಲ. ನನಗೆ ಸಿಕ್ಕಿದ ಅವಕಾಶವನ್ನು ಚೆನ್ನಾಗಿ ಬಳಸಿಕೊಳ್ಳುವುದೇ ನನ್ನ ಗುರಿ” ಎಂದಿದ್ದಾರೆ.

ಒಂದು ಕಡೆ ನನ್ನ ಆಯ್ಕೆಯ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ ಎಂದು ಸಹಾ ಹೇಳಿಕೊಳ್ಳುತ್ತಿದ್ದರೆ, ಇನ್ನೊಂದೆಡೆ ಇಂಗ್ಲೆಂಡ್ ಸರಣಿ ಬಹುಶಃ ನನ್ನ ಸದ್ಯದ ಕೊನೆಯ ಸರಣಿಯಾಗಿರಬಹುದು ಎಂದು ಚಿಂತೆ ಮಾಡಲ್ಲ ಎಂದು ಪಾರ್ಥಿವ್ ಹೇಳಿಕೊಳ್ಳುತ್ತಾರೆ. ನಿಜವಾಗಿ ಚಿಂತೆ ಇವರಿಗಲ್ಲ. ಇವರಲ್ಲಿ ಯಾರು ಉತ್ತಮರು ಎಂದು ಆಯ್ಕೆ ಮಾಡುವ ಆಯ್ಕೆಗಾರರಿಗೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ
ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

IND vs ENG: 89 ವರ್ಷಗಳ ಶಾಪ ಕಳೆಯಲು ಹೊರಟ ಟೀಂ ಇಂಡಿಯಾ

ಸರ್ಫರಾಜ್ ಖಾನ್ ಎರಡೇ ತಿಂಗಳಲ್ಲಿ 17 ಕೆಜಿ ತೂಕ ಇಳಿಸಿದ್ದು ಹೇಗೆ

ರಿಷಭ್ ಪಂತ್ ನಾಲ್ಕನೇ ಟೆಸ್ಟ್ ಆಡುವ ಬಗ್ಗೆ ಇಲ್ಲಿದೆ ಲೇಟೆಸ್ಟ್ ಅಪ್ ಡೇಟ್

ತೂಕ ಇಳಿಸಿಕೊಂಡ ಕ್ರಿಕೆಟಿಗ ಸರ್ಫರಾಜ್ ಖಾನ್: ಇವರೇನಾ ಅವರು

Kantara Chpater 1: ಕೊನೆಗೂ ಕಾಂತಾರ ಚಾಪ್ಟರ್ 1 ಶೂಟಿಂಗ್ ಮುಗಿಯಿತು: video

ಮುಂದಿನ ಸುದ್ದಿ
Show comments