Webdunia - Bharat's app for daily news and videos

Install App

ಹ್ಯಾಟ್ರಿಕ್ ವಿಕೆಟ್ ಪಡೆಯುವ ಮೊದಲು ಕುಲದೀಪ್ ಗೆ ಧೋನಿ ಹೇಳಿದ್ದ ಆ ಮಾತೇನು?

Webdunia
ಶುಕ್ರವಾರ, 22 ಸೆಪ್ಟಂಬರ್ 2017 (10:34 IST)
ಕೋಲ್ಕೊತ್ತಾ:  ಆಸ್ಟ್ರೇಲಿಯಾ ವಿರುದ್ಧ ದ್ವಿತೀಯ ಏಕದಿನ ಪಂದ್ಯದಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ಸ್ಪಿನ್ನರ್ ಕುಲದೀಪ್ ಯಾದವ್ ಈ ಸಾಧನೆ ಮಾಡಿದ ಭಾರತದ ಮೊದಲ ಸ್ಪಿನ್ನರ್ ಎನಿಸಿದರು. ಆದರೆ ಈ ಸಾಧನೆಗೆ ಮೊದಲು ಧೋನಿ ಹೇಳಿದ್ದ ಮಾತೊಂದನ್ನು ಅವರು ಸ್ಮರಿಸಿಕೊಂಡಿದ್ದಾರೆ.

 
ಸಾಮಾನ್ಯವಾಗಿ ಯುವ ಬೌಲರ್ ಗಳಿಗೆ ವಿಕೆಟ್ ಹಿಂದುಗಡೆ ನಿಲ್ಲುವ ಧೋನಿಯೇ ಸಲಹೆಗಾರ ಎನ್ನುವುದು ಈಗ ಗುಟ್ಟಾಗಿ ಉಳಿದಿಲ್ಲ. ಎಲ್ಲಾ ಬೌಲರ್ ಗಳಿಗೂ ಧೋನಿ ವಿಕೆಟ್ ಹಿಂದೆ ಬ್ಯಾಟ್ಸ್ ಮನ್ ಹೇಗೆ ಹೆಜ್ಜೆ ಹಾಕುತ್ತಾನೆಂದು ಸೂಕ್ಷ್ಮವಾಗಿ ಗಮನಿಸಿ ಸೂಚನೆ ಕೊಡುತ್ತಿರುತ್ತಾರೆ. ಕುಲದೀಪ್ ಗೂ ಹಾಗೇ ಆಗಿತ್ತಂತೆ.

ಆರಂಭದಲ್ಲಿ ಕೊಂಚ ತಡಬಡಾಯಿಸುತ್ತಿದ್ದ ಕುಲದೀಪ್, ಆಸೀಸ್ ಬ್ಯಾಟ್ಸ್ ಮನ್ ಗಳಿಂದ ಚಚ್ಚಿಸಿಕೊಂಡು ದಿಕ್ಕೇ ತೋಚದಂತಾಗಿದ್ದರಂತೆ. ಆಗ ನೇರವಾಗಿ ಧೋನಿ ಬಳಿಗೆ ಹೋದ ಕುಲದೀಪ್ ‘ಬಾಯಿ.. ನಾನು ಹೇಗೆ ಬಾಲ್ ಮಾಡಲಿ?’ ಎಂದು ಸಲಹೆ ಕೇಳಿದರಂತೆ. ಇದಕ್ಕೆ ಧೋನಿ ‘ನಿನಗೆ ಹೇಗೆ ಅನಿಸುತ್ತದೋ ಹಾಗೇ ಬಾಲ್ ಮಾಡು’ ಎಂದು ಸ್ವಾತಂತ್ರ್ಯ ಕೊಟ್ಟರಂತೆ. ಸ್ಪೂರ್ತಿಗೊಂಡ ಕುಲದೀಪ್ ಇದನ್ನೇ ಸವಾಲಾಗಿ ತೆಗೆದುಕೊಂಡು ಅದ್ಭುತ ಬೌಲಿಂಗ್ ನಡೆಸಿದರು. ಇದನ್ನು ಪಂದ್ಯಾ ನಂತರ ಅವರೇ ಹೇಳಿಕೊಂಡಿದ್ದಾರೆ.

ಇದನ್ನೂ ಓದಿ.. ಸಚಿನ್ ಗಿಂತಲೂ ಕೊಹ್ಲಿಯೇ ಚೆನ್ನ ಎಂದ ಕರೀನಾ ಕಪೂರ್

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಸ್ಟ್ರಾಂಗ್ ಪ್ಲೇಯರ್ ಕೊಹ್ಲಿ ಇರುವಾಗ ವೀಕ್ ಪ್ಲೇಯರ್ ರೋಹಿತ್ ಯಾಕೆ ಕ್ಯಾಪ್ಟನ್ ಆಗಿದ್ದಾರೆ?

ಪ್ರಾಕ್ಟೀಸ್ ಸೆಷನ್ ಗೆ ವಿರಾಟ್ ಕೊಹ್ಲಿ-ಬುಮ್ರಾ ಚಕ್ಕರ್

ಮಗಳ ಬರ್ತ್ ಡೇ ಪಾರ್ಟಿಯಲ್ಲಿ ಟಾಯ್ ಟ್ರೈನ್ ನಲ್ಲಿ ಮಸ್ತ್ ಮಜಾ ಮಾಡಿದ ರೋಹಿತ್ ಶರ್ಮಾ

INDWvsAusw ODI: ಭಾರತ ಮಹಿಳಾ ಕ್ರಿಕೆಟ್ ಆಟಗಾರ್ತಿ ಸ್ನೇಹಾ ರಾಣಾ ತಲೆಗೆ ಗಂಭೀರ ಗಾಯ

INDvsSA test: ಎರಡನೇ ಟೆಸ್ಟ್ ಗೆ ಟೀಂ ಇಂಡಿಯಾದಲ್ಲಿ ಈ ಬದಲಾವಣೆ ಖಚಿತ

ಮುಂದಿನ ಸುದ್ದಿ
Show comments