ಮುಂಬೈ: ಅನಿಲ್ ಕುಂಬ್ಳೆ ಅವಧಿ ಮುಕ್ತಾಯಗೊಳ್ಳುತ್ತಿರುವ ಹಿನ್ನಲೆಯಲ್ಲಿ ಬಿಸಿಸಿಐ ಟೀಂ ಇಂಡಿಯಾ ಕೋಚ್ ಸ್ಥಾನಕ್ಕೆ ಅರ್ಜಿ ಆಹ್ವಾನಿಸಿದ್ದು, ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ರೇಸ್ ನಲ್ಲಿದ್ದಾರೆಂದು ವರದಿಗಳು ಹೇಳಿವೆ.
ಕುಂಬ್ಳೆ ಗುತ್ತಿಗೆ ಅವಧಿ ಒಂದು ವರ್ಷದ್ದಾಗಿತ್ತು. ಅದು ಮುಕ್ತಾಯಗೊಂಡ ಹಿನ್ನಲೆಯಲ್ಲಿ ಬಿಸಿಸಿಐ ಅವರನ್ನೇ ಮುಂದುವರಿಸುವ ಬದಲು ಅರ್ಜಿ ಆಹ್ವಾನಿಸಿತ್ತು. ಆದರೂ ಕುಂಬ್ಳೆ ಕೋಚ್ ಆಕಾಂಕ್ಷಿಗಳ ಪಟ್ಟಿಯಲ್ಲಿರಲಿದ್ದಾರೆ.
ಅವರ ಜತೆಗೆ ಇದೀಗ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಕೋಚ್ ಆಗಿದ್ದ ಮಾಜಿ ಕ್ರಿಕೆಟಿಗ ಸೆಹ್ವಾಗ್ ಕೂಡಾ ತಮ್ಮ ಹೆಸರು ಸಲ್ಲಿಸಿದ್ದಾರೆಂದು ಪತ್ರಿಕೆಯೊಂದು ವರದಿ ಮಾಡಿದೆ. ಸ್ವತಃ ಬಿಸಿಸಿಐ ಸೆಹ್ವಾಗ್ ರನ್ನು ಸಂಪರ್ಕಿಸಿ ಹೆಸರು ಸಲ್ಲಿಸುವಂತೆ ಸೂಚಿಸಿದೆ ಎಂದು ವರದಿಯಲ್ಲಿ ಹೇಳಲಾಗಿದೆ.
ಕುಂಬ್ಳೆ ಎರಡನೇ ಅವಧಿಗೆ ಮುಂದುವರಿಯುವ ಸಾಧ್ಯತೆಯಿದೆಯಾದರೂ, ಬಿಸಿಸಿಐನ ಕೆಲವು ಅಧಿಕಾರಿಗಳು ಅವರ ವಿರುದ್ಧ ಅಸಮಾಧಾನಗೊಂಡಿರುವುದರಿಂದ ಹೊಸ ಕೋಚ್ ನೇಮಕವಾಗುವ ಸಾಧ್ಯತೆ ಇಲ್ಲದಿಲ್ಲ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ
ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ