Webdunia - Bharat's app for daily news and videos

Install App

ಅಗಲಿದ ಅಮ್ಮ, ಸಹೋದರಿಗೆ ವೇದಾ ಕೃಷ್ಣಮೂರ್ತಿ ಭಾವುಕ ಸಂದೇಶ

Webdunia
ಮಂಗಳವಾರ, 11 ಮೇ 2021 (09:35 IST)
ಬೆಂಗಳೂರು: ಕೊರೋನಾದಿಂದ ತಾಯಿ ಮತ್ತು ಸಹೋದರಿಯನ್ನು ಒಂದೇ ವಾರದ ಅಂತರದಲ್ಲಿ ಕಳೆದುಕೊಂಡ ಭಾರತ ಮಹಿಳಾ ಕ್ರಿಕೆಟ್ ತಂಡದ ಆಟಗಾರ್ತಿ ವೇದಾ ಕೃಷ್ಣಮೂರ್ತಿ ಭಾವುಕ ಸಂದೇಶ ಬರೆದಿದ್ದಾರೆ.


ಕಡೂರಿನಲ್ಲಿ ಕೊರೋನಾಗೆ ಚಿಕಿತ್ಸೆ ಪಡೆಯುತ್ತಿದ್ದ ವೇದಾ ತಾಯಿ ತೀರಿಕೊಂಡ ಎರಡು ವಾರದ ಬಳಿಕ ಅವರ ಸಹೋದರಿಯೂ ಕೊನೆಯುಸಿರೆಳೆದಿದ್ದರು. ಈ ಎರಡು ಆಘಾತಗಳನ್ನು ಒಟ್ಟೊಟ್ಟಿಗೆ ಅನುಭವಿಸಿದ ವೇದಾ ಈಗ ಸಾಮಾಜಿಕ ಜಾಲತಾಣದಲ್ಲಿ ಭಾವುಕರಾಗಿ ಸಂದೇಶ ಬರೆದಿದ್ದಾರೆ.

‘ಇಂತಹದ್ದೊಂದು ಘಟನೆ ಆಗುತ್ತದೆಂದು ಯಾರಿಗೂ ಕಲ್ಪನೆಯೇ ಇರಲಿಲ್ಲ. ನನ್ನ ಹೃದಯವೇ ಛಿದ್ರವಾಗಿದೆ. ಅಮ್ಮ, ನೀನು ನನ್ನನ್ನು ಎಂತಹದ್ದೇ ಕಷ್ಟ ಬಂದರೂ ಹೋರಾಡುವ ಪ್ರಬಲ ವ್ಯಕ್ತಿಯಾಗಿಸಿರುವೆ. ನಾನು ನೋಡಿದ ಅತೀ ಸುಂದರ, ನಿಸ್ವಾರ್ಥ ವ್ಯಕ್ತಿ ನೀನು. ಅಕ್ಕಾ, ನಿನಗೆ ನಾನು ಅತ್ಯಂತ ಫೇವರಿಟ್ ವ್ಯಕ್ತಿಯಾಗಿದ್ದೆ. ಕೊನೆಯ ಕ್ಷಣದವರೆಗೂ ಹೋರಾಡಿದ ಹೋರಾಟಗಾರ್ತಿ ನೀನು. ನೀವಿಬ್ಬರೂ ನನ್ನ ಎಲ್ಲಾ ಕ್ಷಣಗಳಲ್ಲೂ ಸಂತೋಷಪಟ್ಟವರು. ನಿಮ್ಮ ಜೊತೆಗೆ ಕಳೆದ ಕೊನೆಯ ಕ್ಷಣಗಳು ತುಂಬಾ ಸಂತೋಷದಾಯಕವಾಗಿತ್ತು. ಅದುವೇ ಕೊನೆಯ ಗಳಿಗೆಯಾಗಿರಬಹುದು ಎಂದು ನಾವು ಊಹಿಸಿಯೇ ಇರಲಿಲ್ಲ’ ಎಂದಿದ್ದಾರೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ರೋಹಿತ್ ಶರ್ಮಾ ಅಂದ್ರೆ ಸುಮ್ನೇನಾ, ಯೋ ಯೋ ಟೆಸ್ಟ್ ನಲ್ಲಿ ಎಷ್ಟು ಅಂಕ ನೋಡಿ

World Badminton: ಮೋಡಿ ಮಾಡಿದ ಸಾತ್ವಿಕ್‌–ಚಿರಾಗ್‌ ಜೋಡಿ: ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಚಾರಿತ್ರಿಕ ಸಾಧನೆ

ಏಷ್ಯಾ ಕಪ್ ಕ್ರಿಕೆಟ್ ಟೂರ್ನಿಗೆ ತಡವಾಗಿ ಆರಂಭವಾಗಲಿದೆ, ಕಾರಣ ಇಲ್ಲಿದೆ

ರಾಜಸ್ಥಾನ್ ರಾಯಲ್ಸ್ ತೊರೆದ ರಾಹುಲ್ ದ್ರಾವಿಡ್: ಈ ತಂಡಕ್ಕೆ ಕೋಚ್ ಆಗಲಿ ಅಂತಿದ್ದಾರೆ ಫ್ಯಾನ್ಸ್

ಚಿನ್ನಸ್ವಾಮಿ ಕಾಲ್ತುಳಿತದಲ್ಲಿ ಮಡಿದವರ ಕುಟುಂಬಕ್ಕೆ 25 ಲಕ್ಷ ರೂ ನೀಡಿದ ಆರ್ ಸಿಬಿ

ಮುಂದಿನ ಸುದ್ದಿ
Show comments