Select Your Language

Notifications

webdunia
webdunia
webdunia
webdunia

ಕಾಡು ಮೇಡು ಸುತ್ತಿದ್ದ ಟೀಂ ಇಂಡಿಯಾ ಕ್ರಿಕೆಟಿಗರು!

ಕಾಡು ಮೇಡು ಸುತ್ತಿದ್ದ ಟೀಂ ಇಂಡಿಯಾ ಕ್ರಿಕೆಟಿಗರು!
Mumbai , ಶನಿವಾರ, 11 ಮಾರ್ಚ್ 2017 (09:06 IST)
ಮುಂಬೈ:  ಮೊದಲ ಟೆಸ್ಟ್ ಸೋತು, ಎರಡನೇ ಟೆಸ್ಟ್ ರೋಮಾಂಚಕಾರಿಯಾಗಿ ಗೆದ್ದ ಟೀಂ ಇಂಡಿಯಾಕ್ಕೆ ಬ್ರೇಕ್ ಒಂದು ಬ್ರೇಕಾಗಿತ್ತು. ಅದಕ್ಕಾಗಿ ವಿರಾಟ್ ಕೊಹ್ಲಿ ಮತ್ತು ಬಳಗ ಕಾಡು ಮೇಡು ಸುತ್ತಿ ಖುಷಿಪಟ್ಟರು.

 
ಪುಣೆಯಲ್ಲಿ ಟೆಸ್ಟ್ ಸೋಲು ಮರೆಯಲು ಕೊಹ್ಲಿ ಮತ್ತು ಬಳಗ ಪಕ್ಕದ ಬೆಟ್ಟಕ್ಕೆ ಟ್ರಕ್ಕಿಂಗ್ ಮಾಡಿದ್ದರು. ಆ ವಿರಾಮದ ಫಲವೋ ಏನೋ, ಬೆಂಗಳೂರು ಟೆಸ್ಟ್ ಪಂದ್ಯದಲ್ಲಿ ಗೆದ್ದ ಮೇಲೆ ಮತ್ತೊಂದು ಗುಡ್ಡವೇರಿದ್ದಾರೆ.

ಇದನ್ನು ರವಿಚಂದ್ರನ್ ಅಶ್ವಿನ್ ತಮ್ಮ ಟ್ವಿಟರ್ ಪೇಜ್ ನಲ್ಲಿ ಪ್ರಕಟಿಸಿದ್ದಾರೆ. ಆದರೆ ಅದ್ಯಾವ ಗುಡ್ಡ ಎಂದು ಗುಟ್ಟು ಬಿಟ್ಟುಕೊಟ್ಟಿಲ್ಲ. ಆದರೆ ದಟ್ಟ ಕಾಡಿನ ನಡುವೆ ವಿರಾಟ್ ಕೊಹ್ಲಿ,  ವೃದ್ಧಿಮಾನ್ ಸಹಾ,  ಅಭಿನವ್ ಮುಕುಂದ್, ಮುರಳಿ ವಿಜಯ್,  ಚೇತೇಶ್ವರ ಪೂಜಾರ ಎಲ್ಲರೂ ಫೋಟೋಗೆ ಪೋಸ್ ಕೊಟ್ಟಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಎಡಗೈನಲ್ಲಿ ಬೌಲಿಂಗ್ ಮಾಡಿದ ಅನಿಲ್ ಕುಂಬ್ಳೆ