Select Your Language

Notifications

webdunia
webdunia
webdunia
webdunia

ಫಿಟ್ನೆಸ್ ಮರಳಲು ರಜನೀಕಾಂತ್ ಮೊರೆ ಹೋಗಿದ್ದ ಟೀಂ ಇಂಡಿಯಾ ಕ್ರಿಕೆಟಿಗ!

ಫಿಟ್ನೆಸ್ ಮರಳಲು ರಜನೀಕಾಂತ್ ಮೊರೆ ಹೋಗಿದ್ದ ಟೀಂ ಇಂಡಿಯಾ ಕ್ರಿಕೆಟಿಗ!
Chennai , ಶನಿವಾರ, 17 ಜೂನ್ 2017 (09:30 IST)
ಚೆನ್ನೈ: ರಜನೀಕಾಂತ್ ಯಾರಿಗೆಲ್ಲಾ ಆದರ್ಶವಾಗುತ್ತಾರೆ ನೋಡಿ? ಟೀಂ ಇಂಡಿಯಾದ ಈ ಪ್ರಮುಖ ಕ್ರಿಕೆಟಿಗ ತಮ್ಮ ಫಿಟ್ನೆಸ್ ಮರಳಿ ಪಡೆಯಲು ರಜನೀಕಾಂತ್ ಮೊರೆ ಹೋಗಿದ್ದರಂತೆ.

 
ಟೀಂ ಇಂಡಿಯಾದ ಟೆಸ್ಟ್ ಪಂದ್ಯಗಳ ಆರಂಭಿಕ ಮುರಳಿ ವಿಜಯ್ ಭುಜದ ನೋವಿನಿಂದಾಗಿ ಐಪಿಎಲ್ ನಲ್ಲೂ ಪಾಲ್ಗೊಂಡಿರಲಿಲ್ಲ. ತಿಂಗಳುಗಳ ಕಾಲ ಮೈದಾನದಿಂದ ದೂರವಿದ್ದ ವಿಜಯ್ ಗೆ ಈಗ ಫಿಟ್ನೆಸ್ ಮರಳಿ ಪಡೆಯಲು ರಜನಿ ಮಾರ್ಗದರ್ಶನ ನೀಡುತ್ತಿದ್ದಾರಂತೆ.

ಅದು ಹೇಗೆ ಸಾಧ್ಯ? ಎಂದು ಅಂದುಕೊಳ್ಳುತ್ತೀರಾ? ಈ ರಜನಿ ಆ ರಜನಿ ಅಲ್ಲ. ಅಂದರೆ ಮುರಳಿ ಸಲಹೆ ಪಡೆಯುತ್ತಿರುವುದು ಚೆನ್ನೈನ ಎನ್ ಸಿಎ ಫಿಟ್ನೆಸ್ ಗುರು ರಜನೀಕಾಂತ್ ಬಳಿ. ಶ್ರೀಲಂಕಾ ಟೆಸ್ಟ್ ಸರಣಿಗಾಗುವಾಗ ತಂಡಕ್ಕೆ ಮರಳಲು ಪ್ರಯತ್ನಿಸುತ್ತಿರುವ ಮುರಳಿಗೆ ಈ ರಜನೀಕಾಂತ್ ಗುರುವಂತೆ.

ಸದ್ಯಕ್ಕೆ ಚೇತರಿಸಿಕೊಳ್ಳುತ್ತಿದ್ದೇನೆ. ಮುಂದಿನ ಶ್ರೀಲಂಕಾ ಸರಣಿ ವೇಳೆಗೆ ತಂಡದಲ್ಲಿರುತ್ತೇನೆಂಬ ವಿಶ್ವಾಸದಲ್ಲಿ ಮುರಳಿ ವಿಜಯ್ ಇದ್ದಾರೆ.

http://kannada.fantasycricket.webdunia.com
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಚಾಂಪಿಯನ್ಸ್ ಟ್ರೋಫಿ ಗೆದ್ದರೆ ಟೀಂ ಇಂಡಿಯಾ ವಿಶ್ವ ನಂ.1