Select Your Language

Notifications

webdunia
webdunia
webdunia
webdunia

ಮನೆ ಮೊದಲು ಎಂದಿದ್ದಕ್ಕೆ ಸುರೇಶ್ ರೈನಾಗೆ ಬಿಸಿಸಿಐ ಕೊಟ್ಟ ಏಟು

ಮನೆ ಮೊದಲು ಎಂದಿದ್ದಕ್ಕೆ ಸುರೇಶ್ ರೈನಾಗೆ ಬಿಸಿಸಿಐ ಕೊಟ್ಟ ಏಟು
Mumbai , ಶುಕ್ರವಾರ, 24 ಮಾರ್ಚ್ 2017 (08:52 IST)
ಮುಂಬೈ: ಇತ್ತೀಚೆಗೆ ಬಿಸಿಸಿಐ ಭಾರತೀಯ ಕ್ರಿಕೆಟಿಗರ ವೇತನ ಹೆಚ್ಚಿಸಿದೆ. ಪ್ರಮುಖ ಆಟಗಾರರಿಗೆ ಮೂರು ಕೆಟಗರಿಯಲ್ಲಿ ವೇತನ ನೀಡುತ್ತಿದೆ. ಆದರೆ ಈ ಮೂರೂ ವಿಭಾಗದಿಂದ ಕ್ರಿಕೆಟಿಗ ಸುರೇಶ್ ರೈನಾಗೆ ಕೊಕ್ ನೀಡಲಾಗಿದೆ.

 

ಇದಕ್ಕೆ ಕಾರಣ ಅವರು ಕ್ರಿಕೆಟ್ ಗಿಂತ ಮನೆಗೇ ಹೆಚ್ಚಿನ ಪ್ರಾಶಸ್ತ್ಯ ನೀಡಿರುವುದು. ಇತ್ತೀಚಿಗೆ ರೈನಾ ಸೀಮಿತ ಓವರ್ ಗಳ ಪಂದ್ಯದಲ್ಲೂ ಆಡುವುದು ವಿರಳವಾಗಿದೆ. ದೇಶೀಯ ಪಂದ್ಯದಲ್ಲೂ ಸಕ್ರಿಯರಾಗಿ ಪಾಲ್ಗೊಳ್ಳಲು ಮನಸ್ಸು ಮಾಡುತ್ತಿಲ್ಲ.

 

ಮದುವೆಯಾದ ಮೇಲೆ ಅವರಿಗೆ ಕ್ರಿಕೆಟ್ ಗಿಂತ ಸಂಸಾರ ಕಡೆಗೆ ಸೆಳೆತ ಜಾಸ್ತಿಯಾಗಿದ್ದೇ ಇದಕ್ಕೆ ಕಾರಣ ಎನ್ನಲಾಗಿದೆ. ಇತ್ತೀಚಿಗೆ ಕ್ರಿಕೆಟ್ ಬಿಟ್ಟು ರೈನಾ ತಮ್ಮ ಸ್ವಂತ ಉದ್ಯಮ ವಿಸ್ತರಿಸುವ ಬಗ್ಗೆ ಹೆಚ್ಚು ಗಮನ ಹರಿಸುತ್ತಿದ್ದಾರಂತೆ.  ಅದಕ್ಕೆ ಬಿಸಿಸಿಐ ಅಸಮಾಧಾನಗೊಂಡಿದ್ದು, ಗುತ್ತಿಗೆ ಆಟಗಾರರ ಪಟ್ಟಿಯಿಂದ ಗೇಟ್ ಪಾಸ್ ನೀಡಿದೆ.

 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   

Share this Story:

Follow Webdunia kannada

ಮುಂದಿನ ಸುದ್ದಿ

ವಿರಾಟ್ ಕೊಹ್ಲಿಗೆ ಸಾರಿ ಎಂಬ ಆಂಗ್ಲ ಪದದ ಸ್ಪೆಲ್ಲಿಂಗ್ ಗೊತ್ತಿಲ್ಲವಂತೆ!