Webdunia - Bharat's app for daily news and videos

Install App

ನಟರಾಜನ್ ಗೆ ಪಿತೃತ್ವ ರಜೆ ನೀಡದ ಬಿಸಿಸಿಐ ತಾರತಮ್ಯ!

Webdunia
ಗುರುವಾರ, 24 ಡಿಸೆಂಬರ್ 2020 (09:57 IST)
ಮುಂಬೈ: ಟೀಂ ಇಂಡಿಯಾದಲ್ಲಿ ನಾಯಕನಿಗೊಂದು ರೂಲ್ಸ್, ಇತರ ಆಟಗಾರರಿಗೊಂದು ರೂಲ್ಸ್. ತಾರತಮ್ಯ ಇಲ್ಲಿ ತಾಂಡವವಾಡುತ್ತಿದೆ ಎಂದು ಹಿರಿಯ ಕ್ರಿಕೆಟಿಗ ಸುನಿಲ್ ಗವಾಸ್ಕರ್ ಹೇಳಿದ್ದಾರೆ.


ನಾಯಕ ವಿರಾಟ್ ಕೊಹ್ಲಿಗೆ ಪಿತೃತ್ವ ರಜೆ ನೀಡಿರುವ ಬಿಸಿಸಿಐ ಯುವ ವೇಗಿ ನಟರಾಜನ್ ಗೆ ಪಿತೃತ್ವ ರಜೆ ನಿರಾಕರಿಸಿದೆ. ಇಲ್ಲಿ ಬೇರೆ ಬೇರೆ ವ್ಯಕ್ತಿಗಳಿಗೆ ಬೇರೆ ಬೇರೆ ರೂಲ್ಸ್ ಎಂದು ಗವಾಸ್ಕರ್ ಮಾಧ್ಯಮವೊಂದರ ಅಂಕಣದಲ್ಲಿ ಟೀಕಿಸಿದ್ದಾರೆ. ಟಿ ನಟರಾಜನ್ ಈಗಷ್ಟೇ ತಂಡಕ್ಕೆ ಬಂದಿದ್ದಾರೆ. ಹಾಗಾಗಿ ಅವರಿಗೆ ಇದರ ಬಗ್ಗೆ ಅಪಸ್ವರ ಎತ್ತುವ ಹಾಗಿಲ್ಲ. ಐಪಿಎಲ್ ವೇಳೆ ನಟರಾಜನ್ ಹೆಣ್ಣು ಮಗುವಿನ ತಂದೆಯಾಗಿದ್ದರು. ಆದರೆ ದುಬೈನಿಂದಲೇ ಅವರನ್ನು ನೇರವಾಗಿ ಆಸ್ಟ್ರೇಲಿಯಾಗೆ ಕಳುಹಿಸಲಾಗಿತ್ತು. ಹೀಗಾಗಿ ಅವರಿಗೆ ತಮ್ಮ ನವಜಾತ ಮಗುವಿನ ಮುಖವನ್ನು ಜನವರಿಯಲ್ಲಷ್ಟೇ ನೋಡುವ ಭಾಗ್ಯ ಸಿಗಲಿದೆ. ಅಷ್ಟಕ್ಕೂ ಅವರು ಟೆಸ್ಟ್ ತಂಡದಲ್ಲಿ ಆಡುತ್ತಿಲ್ಲ. ಕೇವಲ ನೆಟ್ ಬೌಲರ್ ಆಗಿ ಬಳಸಲಾಗುತ್ತಿದೆ. ಬಿಸಿಸಿಐ ಮನಸ್ಸು ಮಾಡಿದ್ದರೆ ಅವರನ್ನು ತವರಿಗೆ ಕಳುಹಿಸಿ ಮಗುವಿನ ಮುಖ ನೋಡುವ ಅವಕಾಶ ಕೊಡಬಹುದಿತ್ತು. ಆದರೆ ಇಲ್ಲಿ ಒಬ್ಬೊಬ್ಬರಿಗೆ ಒಂದೊಂದು ನಿಯಮ ಎಂದು ಗವಾಸ್ಕರ್ ಕಿಡಿ ಕಾರಿದ್ದಾರೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

ವಿಚ್ಛೇದನ ಪಡೆದ ಬೆನ್ನಲ್ಲೇ ಯಜುವೇಂದ್ರ ಚಾಹಲ್ ಪ್ರತಿಭೆಯನ್ನು ಕೊಂಡಾಡಿದ ಆಪ್ತ ಗೆಳತಿ ಆರ್‌ಜೆ ಮಹ್ವಾಶ

IPL 2025: ತವರಿನಲ್ಲಿ ಕಡಿಮೆ ರನ್‌ ಮಾಡಿಯೂ ಗೆದ್ದುಬೀಗಿದ ಪಂಜಾಬ್‌ ಕಿಂಗ್ಸ್‌: ಕೋಲ್ಕತ್ತಕ್ಕೆ ಭಾರೀ ಮುಖಭಂಗ

IPL 2025: ತವರಿನ ಪ್ರೇಕ್ಷಕರ ಮುಂದೆ ಪರದಾಡಿದ ಪಂಜಾಬ್‌ ಬ್ಯಾಟರ್‌ಗಳು: ಕೆಕೆಆರ್‌ ಬೌಲರ್‌ಗಳ ಕರಾಮತ್ತು

Glenn Maxwell: ಮ್ಯಾಕ್ಸ್ ವೆಲ್ ರನ್ನು ಹರಾಜಿನಲ್ಲಿ ಕೈ ಬಿಟ್ಟಿದ್ದಕ್ಕೇ ಬಚಾವ್ ಎಂದ ಆರ್ ಸಿಬಿ ಫ್ಯಾನ್ಸ್

ಮುಂದಿನ ಸುದ್ದಿ
Show comments