Select Your Language

Notifications

webdunia
webdunia
webdunia
webdunia

ಬೆಂಚ್ ಕಾಯಿಸುವ ಕೆಎಲ್ ರಾಹುಲ್ ಗೆ ಯಾಕ್ರೀ ಅವಕಾಶ? ಸುನಿಲ್ ಗವಾಸ್ಕರ್ ಕಿಡಿ

ಬೆಂಚ್ ಕಾಯಿಸುವ ಕೆಎಲ್ ರಾಹುಲ್ ಗೆ ಯಾಕ್ರೀ ಅವಕಾಶ? ಸುನಿಲ್ ಗವಾಸ್ಕರ್ ಕಿಡಿ
ಮುಂಬೈ , ಗುರುವಾರ, 5 ಅಕ್ಟೋಬರ್ 2017 (10:28 IST)
ಮುಂಬೈ: ಆಸ್ಟ್ರೇಲಿಯಾ ವಿರುದ್ಧ ಟಿ20 ಸರಣಿಗೆ ಟೀಂ ಇಂಡಿಯಾದಿಂದ ಪ್ರತಿಭಾವಂತ ಬ್ಯಾಟ್ಸ್ ಮನ್ ಅಜಿಂಕ್ಯಾ ರೆಹಾನೆಗೆ ಕೊಕ್ ನೀಡಿರುವುದನ್ನು ಬ್ಯಾಟಿಂಗ್ ದಂತಕತೆ ಸುನಿಲ್ ಗವಾಸ್ಕರ್ ಪ್ರಶ್ನಿಸಿದ್ದಾರೆ.

 
ಶ್ರೀಲಂಕಾ ಏಕದಿನ ಸರಣಿಯಲ್ಲಿ ಕಳಪೆ ಪ್ರದರ್ಶನ ನೀಡಿದ್ದ ಕನ್ನಡಿಗ ಕೆಎಲ್ ರಾಹುಲ್ ರನ್ನು ಆಯ್ಕೆ ಮಾಡಿ ಉತ್ತಮ ಫಾರ್ಮ್ ನಲ್ಲಿದ್ದ ಅಜಿಂಕ್ಯಾ ರೆಹಾನೆಯನ್ನು ಹೊರಗಿಟ್ಟುವ ಕ್ರಮವನ್ನು ಅವರು ಪ್ರಶ್ನಿಸಿದ್ದಾರೆ.

‘ಕಳೆದ ಐದು ಪಂದ್ಯಗಳನ್ನು ಆಡಿರದ ಕೆಎಲ್ ರಾಹುಲ್ ರನ್ನು ಯಾಕೆ ಆರಿಸಿದ್ದೀರಿ? ಸತತ ಅರ್ಧಶತಕ ಭಾರಿಸಿದ ರೆಹಾನೆಯನ್ನು ಯಾಕೆ ಹೊರಗಿಟ್ಟಿದ್ದೀರಿ? ನನಗೆ ಇದರ ಲಾಜಿಕ್ ಅರ್ಥವೇ ಆಗುತ್ತಿಲ್ಲ’ ಎಂದು ಗವಾಸ್ಕರ್ ಕಿಡಿ ಕಾರಿದ್ದಾರೆ.

ಹಿಂದೆಯೂ ಒಮ್ಮೆ ಗವಾಸ್ಕರ್ ಇದೇ ರೀತಿ ಟೀಂ ಇಂಡಿಯಾದಲ್ಲಿ ಗಡ್ಡ, ದಾಡಿ ಬಿಟ್ಟುಕೊಂಡು ಟ್ಯಾಟೂ ಹಾಕಿಕೊಳ್ಳುವ ಸ್ಟೈಲಿಶ್ ಆಟಗಾರರಿಗೆ ಮಾತ್ರ ಸ್ಥಾನ ಸಿಗುತ್ತಿದೆ ಎಂದು ರಾಹುಲ್ ವಿರುದ್ಧ ಪರೋಕ್ಷವಾಗಿ ಟಾಂಗ್ ಕೊಟ್ಟಿದ್ದರು.

 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಕೆಎಲ್ ರಾಹುಲ್ ಬಗ್ಗೆ ತಮಗೆ ಇಷ್ಟವಿಲ್ಲದ ಸಂಗತಿ ಬಿಚ್ಚಿಟ್ಟ ವಿರಾಟ್ ಕೊಹ್ಲಿ