Select Your Language

Notifications

webdunia
webdunia
webdunia
webdunia

ಕಾಶ್ಮೀರ ವಿಚಾರದಲ್ಲಿ ಕ್ರಿಕೆಟಿಗ ಶಾಹಿದ್ ಅಫ್ರಿದಿ ಬೋಲ್ಡ್ ಉತ್ತರ ನೋಡಿ!

ಕಾಶ್ಮೀರ ವಿಚಾರದಲ್ಲಿ ಕ್ರಿಕೆಟಿಗ ಶಾಹಿದ್ ಅಫ್ರಿದಿ ಬೋಲ್ಡ್ ಉತ್ತರ ನೋಡಿ!
Karachi , ಸೋಮವಾರ, 6 ಫೆಬ್ರವರಿ 2017 (09:04 IST)
ಕರಾಚಿ: ಇತ್ತೀಚೆಗೆ ಪಾಕ್ ಕ್ರಿಕೆಟಿಗ ಶಾಹಿದ್ ಆಫ್ರಿದಿ ಆಗಾಗ ಕ್ರಿಕೆಟೇತರ ವಿಚಾರಕ್ಕೆ ಸುದ್ದಿಯಲ್ಲಿರುತ್ತಾರೆ. ಇದೀಗ ಭಾರತ ಮತ್ತು ಪಾಕಿಸ್ತಾನ ಗಡಿ ವಿಚಾರವಾಗಿ ಹೇಳಿಕೆ ನೀಡಿ ಸುದ್ದಿಯಾಗಿದ್ದಾರೆ.


ಕಾಶ್ಮೀರ ವಿಚಾರಕ್ಕಾಗಿ ಉಭಯ ದೇಶಗಳು ಜಗಳವಾಡುತ್ತಲೇ ಇವೆ. “ಕಾಶ್ಮೀರ ಹಲವು ದಶಕಗಳಿಂದ ಹಿಂಸಾಚಾರ ಅನುಭವಿಸುತ್ತಲೇ ಇದೆ.  ಹಲವು ಜೀವಗಳನ್ನು ಬಲಿ ಪಡೆದ ಈ ವಿವಾದ ಬಗೆಹರಿಯಲು ಇದೇ ಸೂಕ್ತ ಸಮಯ. ಕಾಶ್ಮೀರ ಭೂಲೋಕದ ಸ್ವರ್ಗ” ಎಂದು ಶಾಹಿದ್ ಅಫ್ರಿದಿ ಟ್ವಿಟರ್ ನಲ್ಲಿ ಬರೆದುಕೊಂಡಿದ್ದಾರೆ.

ಮೊನ್ನೆಯಷ್ಟೇ ಕ್ರಿಕೆಟಿಗ ಹರ್ಭಜನ್ ಸಿಂಗ್ ಅಫ್ರಿದಿ ಗುಡ್ ಲಕ್ ಸಂದೇಶ ರವಾನಿಸಿ ಮೆಚ್ಚುಗೆಗೆ ಪಾತ್ರರಾಗಿದ್ದರು. ಇದರ ಬೆನ್ನಲ್ಲೇ ಅಫ್ರಿದಿ ಕಾಶ್ಮೀರ ಜನತೆಯ ಪರವಾಗಿ ಮಾತನಾಡಿದ್ದಾರೆ. ಇದಕ್ಕೂ ಮೊದಲೂ ಭಾರತದಲ್ಲಿ ತಮ್ಮ ಅಭಿಮಾನಿಯೊಬ್ಬನ ಬಂಧನವಾದಾಗಲೂ ಕ್ರೀಡೆಗೆ ರಾಜಕೀಯ ಬರೆಸಬೇಡಿ ಎಂದಿದ್ದರು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಪದಚ್ಯುತ ಅಧ್ಯಕ್ಷ ಅನುರಾಗ್ ಠಾಕೂರ್ ಗೆ ರಹಸ್ಯ ಸಂದೇಶ ಕೊಡುತ್ತಿರುವ ಟೀಂ ಇಂಡಿಯಾದ ಇವರು ಯಾರು ಬಲ್ಲಿರಾ?