Select Your Language

Notifications

webdunia
webdunia
webdunia
webdunia

ಮಿಥಾಲಿ ರಾಜ್ ಬಳಗವನ್ನು ಟೀಕಿಸಿ ಇಂಗು ತಿಂದ ಮಂಗನಾದ ಸಂಜಯ್ ಮಂಜ್ರೇಕರ್

ಮಿಥಾಲಿ ರಾಜ್ ಬಳಗವನ್ನು ಟೀಕಿಸಿ ಇಂಗು ತಿಂದ ಮಂಗನಾದ ಸಂಜಯ್ ಮಂಜ್ರೇಕರ್
Mumbai , ಸೋಮವಾರ, 24 ಜುಲೈ 2017 (15:32 IST)
ಮುಂಬೈ: ಮಹಿಳಾ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಗೆಲುವಿನ ಸಮೀಪ ಬಂದೂ ಗೆಲ್ಲಲಾಗದ ಭಾರತ ಮಹಿಳಾ ಕ್ರಿಕೆಟ್ ತಂಡವನ್ನು ಟೀಕಿಸಿದ್ದಕ್ಕೆ ಮಾಜಿ ಕ್ರಿಕೆಟಿಗ ಹಾಗೂ ಕಾಮೆಂಟೇಟರ್ ಸಂಜಯ್ ಮಂಜ್ರೇಕರ್ ಅಭಿಮಾನಿಗಳಿಂದ ಮಂಗಳಾರತಿ ಮಾಡಿಸಿಕೊಂಡಿದ್ದಾರೆ.


‘ಒಂದು ವೇಳೆ ಮಿಥಾಲಿ ಉತ್ತಮ ಆರಂಭ ಒದಗಿಸಿದ್ದರೆ, ಹರ್ಮನ್ ಪ್ರೀತ್ ಸಿಂಗಲ್ಸ್, 2 ರನ್ ತೆಗೆಯುವುದರತ್ತ ಗಮನಹರಿಸಿದ್ದರೆ, ವೇದಾ ಅಷ್ಟೊಂದು ಅವಸರ ಮಾಡಿರದೇ ಇರುತ್ತಿದ್ದರೆ…ಎಲ್ಲಾ ಒಂದು ವೇಳೆ ಎಂದೇ ಹೇಳಬೇಕಷ್ಟೇ’ ಎಂದು ಟ್ವೀಟ್ ಮಾಡಿ ಮಂಜ್ರೇಕರ್ ಮಹಿಳಾ ಕ್ರಿಕೆಟಿಗರ ಮೇಲೆ ಹರಿಹಾಯ್ದಿದ್ದರು.

ಇದಕ್ಕೆ ತಕ್ಕ ಪ್ರತಿಕ್ರಿಯೆ ವ್ಯಕ್ತಪಡಿಸಿದ ಅಭಿಮಾನಿಗಳು ‘ನೀವು ಯಾವತ್ತಾದರೂ ಕ್ರಿಕೆಟ್ ಆಡಿದ್ದೀರಾ ಸರ್? ನಿಮ್ಮನ್ನು ಕಾಮೆಂಟೇಟರ್ ಆಗಿ ನೋಡಿದ ನೆನಪು ಮಾತ್ರ ನಮಗಿದೆ’ ಎಂದು ಒಬ್ಬ  ಅಭಿಮಾನಿಯೆಂದರೆ ಇನ್ನೊಬ್ಬರು ‘ಒಂದು ವೇಳೆ ಬಿಸಿಸಿಐ ಮಹಿಳೆಯರಿಗೂ ಪುರುಷ ಕ್ರಿಕೆಟಿಗರಷ್ಟೇ ಸವಲತ್ತು ಕೊಡುತ್ತಿದ್ದರೆ..? ಎಂದು ಪ್ರಶ್ನಿಸಿದ್ದಾರೆ. ಅಂತೂ ಏನೋ ಹೇಳಲು ಹೋಗಿ ಇಂಗು ತಿಂದ ಮಂಗನಂತಾಗಿದೆ ಮಂಜ್ರೇಕರ್ ಪರಿಸ್ಥಿತಿ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಅನಿಲ್ ಕುಂಬ್ಳೆಗೆ ಬೆಣ್ಣೆ ಸವರಿ, ರವಿಶಾಸ್ತ್ರಿಗೆ ತುಪ್ಪ ಸವರಿದ ರವಿಚಂದ್ರನ್ ಅಶ್ವಿನ್!