Select Your Language

Notifications

webdunia
webdunia
webdunia
webdunia

ಊರುಗೋಲಿನ ಸಹಾಯದಿಂದ ರಾಜ್ಯಸಭೆಗೆ ಆಗಮಿಸಿದ ಸಚಿನ್ ತೆಂಡೂಲ್ಕರ್

ಊರುಗೋಲಿನ ಸಹಾಯದಿಂದ ರಾಜ್ಯಸಭೆಗೆ ಆಗಮಿಸಿದ ಸಚಿನ್ ತೆಂಡೂಲ್ಕರ್
ನವದೆಹಲಿ: , ಮಂಗಳವಾರ, 2 ಆಗಸ್ಟ್ 2016 (11:04 IST)
ಕ್ರಿಕೆಟ್ ಲೆಜೆಂಡ್ ಮತ್ತು ರಾಜ್ಯಸಭೆ ಸದಸ್ಯ ಸಚಿನ್ ತೆಂಡೂಲ್ಕರ್ ರಾಜ್ಯಸಭೆಯ ಕಲಾಪದಲ್ಲಿ ಸೋಮವಾರ ಭಾಗವಹಿಸಿದರು. ಇತ್ತೀಚೆಗೆ ಲಂಡನ್‌ನಲ್ಲಿ ಮಂಡಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಸಚಿನ್ ಊರುಗೋಲಿನ ಸಹಾಯದಿಂದ ರಾಜ್ಯಸಭೆಗೆ ಆಗಮಿಸಿದರು.

ಅವರ ಎಡ ಗಾಲಿನಲ್ಲಿ ಕಪ್ಪು ಪಟ್ಟಿಯನ್ನು ಹಾಕಲಾಗಿತ್ತು. ಈ ತಿಂಗಳಾರಂಭದಲ್ಲಿ ಸಚಿನ್ ಎಡಮಂಡಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರಿಂದ ಸರಾಗವಾಗಿ ನಡೆಯಲು ಕಷ್ಟವಾಗುತ್ತಿದೆ.
 
 ರಾಜ್ಯಸಭೆಗೆ ನಾಮಾಂಕಿತ ಸದಸ್ಯರಾದ ಸಚಿನ್ ಹಾಜರಾತಿ ರಾಜ್ಯಸಭೆಯಲ್ಲಿ ವಿರಳವಾಗಿದ್ದರಿಂದ ಕೆಲವು ಸದಸ್ಯರಿಂದ ವಾಗ್ದಾಳಿಗೂ ಗುರಿಯಾಗಿದ್ದರು. ಪ್ರಸಕ್ತ ಮುಂಗಾರು ಅಧಿವೇಶನದಲ್ಲಿ ಅವರು ಸದನಕ್ಕೆ ಹಾಜರಾಗಿದ್ದು ಇದೇ ಮೊದಲ ಬಾರಿಯಾಗಿದ್ದು, ಕಳೆದ ಬಜೆಟ್ ಅಧಿವೇಶನದಲ್ಲಿ ನಾಲ್ಕು ಬಾರಿ ಮಾತ್ರ ಹಾಜರಾಗಿದ್ದರು.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಅಜಿಂಕ್ಯಾ ರಹಾನೆ ಶತಕ: ಭಾರತ 500ಕ್ಕೆ 9 ವಿಕೆಟ್ ಡಿಕ್ಲೇರ್ಡ್